Advertisement
ಕಾರ್ಯಕ್ರಮಗಳು

ಈಶ್ವರಮಂಗಲ ಜಾತ್ರೆ:- ಸಾಂಸ್ಕೃತಿಕ ಕಾರ್ಯಕ್ರಮ

Share

ಪೆರ್ನಾಜೆ: ಈಶ್ವರಮಂಗಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಉತ್ಸವ ಬಲಿಯಂದು ಸ್ವರ ಸಿಂಚನ ಕಾಲ ಬಳಗದಿಂದ ನವದುರ್ಗೆಯರ ಗೀತಗಾಯನದಲ್ಲಿ ನವಮಾತೆಯಾರು- ನವಕುವರಿಯರು ಎಂಬ ವಿನೂತನ ಗಾನ ವೈಭವ ಮಿಮಿಕ್ರಿ ನಗೆಹಬ್ಬ ಫೆ. 22 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರ ಪೆರ್ನಾಜೆ ಬಹುಮುಖ ಪ್ರತಿಭೆ ಪಟ್ಟಾಭಿರಾಮ ಸುಳ್ಯ, ಯಕ್ಷ ಪ್ರಭೆ ಶ್ರೀಕೃಷ್ಣ ಜೆಡ್ಡು ಅವರಿಗೆ ಪೆರ್ನಾಜೆ ಪ್ರಶಸ್ತಿ ಪ್ರದಾನ ಮಾಡಿದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಕುಂಜತಾಯರವರು ಪಟ್ಟಾಭಿರಾಮ ಸುಳ್ಯರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕುಮಾರ ಪೆರ್ನಾಜೆ ಈಗಾಗಲೇ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದು ರಾಜ್ಯ ಜಿಲ್ಲಾ ಮಟ್ಟಗಳಲ್ಲಿ ಕೃಷಿಯಲ್ಲಿ ಸಾಧನೆ ಮಾಡುವುದರ ಜೊತೆ ಗ್ರಾಮೀಣ ಕಲಾ ತಂಡದ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರಿಂದ ಇನ್ನಷ್ಟು ಕಾಲ ಮಾಡುವಂತಾಗಲಿ ಎಂದು ನುಡಿದರು. ಸ್ವರ ಸಿಂಚನ ಕಲಾ ಬಳಗವನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಸೇವಾದಾರರ 5 ವರ್ಷಗಳಿಂದ ಪ್ರಗತಿಪರ ಕೃಷಿಕ ಸತೀಶ್ ರೈ ಕರ್ನೂರು ಕೈಜೋಡಿಸುತ್ತಿರುವ ಬಗ್ಗೆ ಮೆಚ್ಚುಗೆ ನೋಡಿದರು.

ಪ್ರಕಾಶ ನಾರಾಯಣ ಜೆಡ್ಡು ಸನ್ಮಾನಿತ ಶ್ರೀಕೃಷ್ಣ ಜಡ್ಡುರವರ ತಂದೆ ಮಾತನಾಡುತ್ತಾ ತನ್ನ ಮಗನನ್ನು ಇಲ್ಲಿ ಗುರುತಿಸಿ ಸನ್ಮಾನಿಸಿದ್ದು ತನ್ನ ಮಗನನ್ನು ತನ್ನ ಮಗನ ಕಾರ್ಯ ನಡೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮನ್ನು ಜಾಗೃತಗೊಳಿಸುತ್ತದೆ ಎಂದು ಶುಭ ನುಡಿದರು. ಸೌಮ್ಯ ಪೆರ್ನಾಜೆ ಶ್ರೀಕೃಷ್ಣ ಜೆಡ್ಡು ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಉತ್ಸವ ಸಮಿತಿ ಅಧ್ಯಕ್ಷರಾದ ಸದಾಶಿವ ರೈ ನಡುಬೈಲು, ಸತೀಶ್ ರೈ ಕರ್ನೂರ್, ಭವಾನಿ ರೈ ಕರ್ನೂರು, ಜಯಂತಿ ರೈ ಕರ್ನೂರು, ಆನಂದ ರೈ ಸಂತ್ಯ, ಸ್ವರ ಸಿಂಚನ ಸಂಗೀತ ಶಾಲಾ ಮುಖ್ಯಶಿಕ್ಷಕಿ ಸವಿತಾ ಕೊಡಂದೂರು, ರಾಘು ರಾಮಶಾಸ್ತ್ರಿ ಕೊಡಂದೂರು, ಸಿಂಚನ ಲಕ್ಷ್ಮಿ ಕೊಡಂದೂರು, ಗೌರಿ ಜೆಡ್ಡು, ಶ್ರೀವಿದ್ಯಾ, ರಮ್ಯಾ ಜೆಡ್ಡು, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪದ್ಮರಾಜ್ ಚಾರ್ವಾಕ ಸ್ವಾಗತಿಸಿ, ಸನ್ಮಾನಿತರ ಪರಿಚಯ, ವಂದಿಸಿದರು ಕುಮಾರ ಪೆರ್ನಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

1 hour ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

2 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

1 day ago