ಪೆರ್ನಾಜೆ: ಈಶ್ವರಮಂಗಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಉತ್ಸವ ಬಲಿಯಂದು ಸ್ವರ ಸಿಂಚನ ಕಾಲ ಬಳಗದಿಂದ ನವದುರ್ಗೆಯರ ಗೀತಗಾಯನದಲ್ಲಿ ನವಮಾತೆಯಾರು- ನವಕುವರಿಯರು ಎಂಬ ವಿನೂತನ ಗಾನ ವೈಭವ ಮಿಮಿಕ್ರಿ ನಗೆಹಬ್ಬ ಫೆ. 22 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರ ಪೆರ್ನಾಜೆ ಬಹುಮುಖ ಪ್ರತಿಭೆ ಪಟ್ಟಾಭಿರಾಮ ಸುಳ್ಯ, ಯಕ್ಷ ಪ್ರಭೆ ಶ್ರೀಕೃಷ್ಣ ಜೆಡ್ಡು ಅವರಿಗೆ ಪೆರ್ನಾಜೆ ಪ್ರಶಸ್ತಿ ಪ್ರದಾನ ಮಾಡಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಕುಂಜತಾಯರವರು ಪಟ್ಟಾಭಿರಾಮ ಸುಳ್ಯರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕುಮಾರ ಪೆರ್ನಾಜೆ ಈಗಾಗಲೇ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದು ರಾಜ್ಯ ಜಿಲ್ಲಾ ಮಟ್ಟಗಳಲ್ಲಿ ಕೃಷಿಯಲ್ಲಿ ಸಾಧನೆ ಮಾಡುವುದರ ಜೊತೆ ಗ್ರಾಮೀಣ ಕಲಾ ತಂಡದ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರಿಂದ ಇನ್ನಷ್ಟು ಕಾಲ ಮಾಡುವಂತಾಗಲಿ ಎಂದು ನುಡಿದರು. ಸ್ವರ ಸಿಂಚನ ಕಲಾ ಬಳಗವನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಸೇವಾದಾರರ 5 ವರ್ಷಗಳಿಂದ ಪ್ರಗತಿಪರ ಕೃಷಿಕ ಸತೀಶ್ ರೈ ಕರ್ನೂರು ಕೈಜೋಡಿಸುತ್ತಿರುವ ಬಗ್ಗೆ ಮೆಚ್ಚುಗೆ ನೋಡಿದರು.
ಪ್ರಕಾಶ ನಾರಾಯಣ ಜೆಡ್ಡು ಸನ್ಮಾನಿತ ಶ್ರೀಕೃಷ್ಣ ಜಡ್ಡುರವರ ತಂದೆ ಮಾತನಾಡುತ್ತಾ ತನ್ನ ಮಗನನ್ನು ಇಲ್ಲಿ ಗುರುತಿಸಿ ಸನ್ಮಾನಿಸಿದ್ದು ತನ್ನ ಮಗನನ್ನು ತನ್ನ ಮಗನ ಕಾರ್ಯ ನಡೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮನ್ನು ಜಾಗೃತಗೊಳಿಸುತ್ತದೆ ಎಂದು ಶುಭ ನುಡಿದರು. ಸೌಮ್ಯ ಪೆರ್ನಾಜೆ ಶ್ರೀಕೃಷ್ಣ ಜೆಡ್ಡು ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಉತ್ಸವ ಸಮಿತಿ ಅಧ್ಯಕ್ಷರಾದ ಸದಾಶಿವ ರೈ ನಡುಬೈಲು, ಸತೀಶ್ ರೈ ಕರ್ನೂರ್, ಭವಾನಿ ರೈ ಕರ್ನೂರು, ಜಯಂತಿ ರೈ ಕರ್ನೂರು, ಆನಂದ ರೈ ಸಂತ್ಯ, ಸ್ವರ ಸಿಂಚನ ಸಂಗೀತ ಶಾಲಾ ಮುಖ್ಯಶಿಕ್ಷಕಿ ಸವಿತಾ ಕೊಡಂದೂರು, ರಾಘು ರಾಮಶಾಸ್ತ್ರಿ ಕೊಡಂದೂರು, ಸಿಂಚನ ಲಕ್ಷ್ಮಿ ಕೊಡಂದೂರು, ಗೌರಿ ಜೆಡ್ಡು, ಶ್ರೀವಿದ್ಯಾ, ರಮ್ಯಾ ಜೆಡ್ಡು, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪದ್ಮರಾಜ್ ಚಾರ್ವಾಕ ಸ್ವಾಗತಿಸಿ, ಸನ್ಮಾನಿತರ ಪರಿಚಯ, ವಂದಿಸಿದರು ಕುಮಾರ ಪೆರ್ನಾಜೆ ಕಾರ್ಯಕ್ರಮ ನಿರೂಪಿಸಿದರು.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…