ಸುಳ್ಯ: ಅರಂತೋಡು ಉಳುವಾರು ಕುಟುಂಬಸ್ಥರ ಅಶ್ರಯದಲ್ಲಿ ಅಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದ ಉದ್ಘಾಟನೆ ಸಮಾರಂಭ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನ.11ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಯು.ಸಿ.ಉಳುವಾರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆ.ಸ್ಮಾ.ಪ.ಪೂ.ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಯು.ಆರ್ ಅಣ್ಣಯ್ಯ ಉಳುವಾರು, ಐವರ್ನಾಡು ಗ್ರಾಮ ಪಂಚಾಯತ್ ಪಿ.ಡಿ.ಓ. ಶೇಖರ್ .ಯು.ಡಿ.ಉಳುವಾರು, ಯು.ಕೆ.ಕುಸುಮಾಧರ ಉಳುವಾರು ಕುಲ್ಚಾರ್, ಯು.ಎಸ್ .ಲೋಕೇಶ್ ಸಣ್ಣಮನೆ ಉಳುವಾರು, ಪಂದ್ಯಾಟದ ಸಂಘಟಕರಾದ ಪವನ್ ಯು.ಎಸ್, ಮೋಕ್ಷಿತ್ ಯು.ಕೆ., ಮುರಳಿ ಯು.ಎಸ್ , ಯತೀಶ ಯು.ಕೆ. ಮುಂತಾದವರು ಉಪಸ್ಥಿತರಿದ್ದರು. ನೆ.ಸ್ಮಾ.ಪ.ಪೂ.ಕಾಲೇಜು ಅಧ್ಯಾಪಕರಾದ ಕಿಶೋರ್ ಕುಮಾರ್ ಕಿರ್ಲಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel