ಸುಳ್ಯ: ಇಂಡಿಯನ್ ಮುಸ್ಲಿಂ ಲೀಗ್ ಅಧೀನದಲ್ಲಿರುವ ಈ ಸಂಸ್ಥೆಯು ಕಳೆದ ವರ್ಷ 50 ಜೋಡಿ ಸಾಮೂಹಿಕ ವಿವಾಹವನ್ನು ನೇರವೆರಿಸಿ ಈ ವರ್ಷ 100 ಜೋಡಿ ವಿವಾಹದಲ್ಲಿ ಹಿಂದು ಮುಸ್ಲಿಂ ಕ್ರೆಸ್ತ ರನ್ನು ಒಳಗೊಂಡು ಭಾರತೀಯ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಇದು ಇತರರಿಗೆ ಪ್ರೇರಣೆಯಾಗಲಿ. ಈ ಸಂಸ್ಥೆಗೆ ಕನ್ನಡ ರಾಜ್ಯೊತ್ಸವ ಪ್ರಶಸ್ತಿ ದೊರೆಯುವಂತಾಗಲಿ ಎಂದು ರಾಜೀವ್ ಯೂತ್ ರಾಜ್ಯಾಧ್ಯಕ್ಷ ಟಿ.ಎಮ್ .ಶಹೀದ್ ತೆಕ್ಕಿಲ್ ಹೇಳಿದರು.
ಅವರು ಆಲ್ ಇಂಡಿಯಾ ಕೇರಳ ಮುಸ್ಲಿ ಕಲ್ಚರಲ್ ಸೆಂಟ್ರಲ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 100ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು . ಈ ಸಂದರ್ಭದಲ್ಲಿ ಸಯ್ಯದ್ ಪಾಣಕ್ಕಾಡ್ ಶಿಹಾಬ್ ತಂಙಳ್ , ಸಯ್ಯದ್ ಪಾಣಕ್ಕಾಡ್ ಮುನವ್ವರಾಲಿ ತಂಙಳ್ , ಸಯ್ಯದ್ ಪಾಣಕ್ಕಾಡ್ ಸಾದಿಕ್ ಅಲಿ ತಂಙಳ್, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಸಂಸತ್ ಸದಸ್ಯ ಕುಂಞಾಲಿ ಕುಟ್ಟಿ, ಶಾಸಕರಾದ ಯು.ಟಿ.ಖಾದರ್, ಯನ್.ಎ.ಹಾರೀಸ್, ಕೆ.ಎಮ್ .ಸಿ.ಸಿ. ನಾಯಕರಾದ ನೌಶಾದ್, ಸಲೀಂ ಟರ್ಲಿ, ಸಂಸುದ್ದೀನ್ ಅರಂತೋಡು, ತಾಜುದ್ದೀನ್ ಟರ್ಲಿ, ತಾಜುದ್ದೀನ್ ಅರಂತೋಡು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…
ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…
ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…
ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…