Exclusive - Mirror Hunt

ಎಚ್ಚರಿಕೆ…. ನಾಕೂರುಗಯದಲ್ಲಿ ಮೊಸಳೆ ಇದೆ….!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪಂಜ: ಎಚ್ಚರಿಕೆ…. ಎಚ್ಚರಿಕೆ… ಕಡಬ ತಾಲೂಕಿನ ನಾಕೂರುಗಯದಲ್ಲಿ  ಮೊಸಳೆ ಇದೆ. ತೀರ್ಥಸ್ನಾನ ಮಾಡುವ ಭಕ್ತರೇ, ನದಿಗೆ ಹಾಲೆರೆಯುವ ಭಕ್ತರೇ ಸ್ವಲ್ಪ ಗಮನಿಸಿಕೊಳ್ಳಿ.

Advertisement

 

ಕಡಬ ತಾಲೂಕಿನ ಪುಳಿಕುಕ್ಕು ಬಳಿಯ ನಾಕೂರುಗಯದಲ್ಲಿ ಮೊಸಳೆ ಕಂಡುಬಂದಿದೆ. ಈ ಮೊಸಳೆ ಗಯದಲ್ಲಿ ಮಾತ್ರವಲ್ಲ ಪುಳಿಕುಕ್ಕು ಪ್ರದೇಶದ ಕುಮಾರಧಾರಾ ನದಿಯಲ್ಲಿ  ಓಡಾಡುತ್ತಿರುತ್ತದೆ ಎಂದು ಈಗ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನದಿ ಸಮೀಪದ ಕೃಷಿಕರ ನಾಯಿಯನ್ನು ಹಿಡಿದಿದೆ ಎಂದೂ ತಿಳಿಸಿದ್ದಾರೆ.

Advertisement

Advertisement

ನಾಕೂರುಗಯಕ್ಕೆ ಅನೇಕ ಭಕ್ತಾದಿಗಳು ಪ್ರತಿದಿನ ಆಗಮಿಸುತ್ತಾರೆ. ತೀರ್ಥಸ್ನಾನ ಮಾಡಲು ಆಗಮಿಸಿದರೆ, ಇನ್ನೂ ಕೆಲವರು ನದಿಗೆ ಹಾಲು ಬಿಡಲು ಆಗಮಿಸುತ್ತಾರೆ. ಈ ನಾಕೂರುಗಯದಲ್ಲಿ ನೀರಿನ ಒಳಗಡೆ ದೇವಸ್ಥಾನ ಇದೆ ಎಂಬ ನಂಬಿಕೆ ಭಕ್ತರಲ್ಲಿದೆ ಇದೆ. ಹೀಗಾಗಿ ಭಕ್ತಿಯಿಂದ ಆಗಮಿಸುವ ಜನರಿಗೆ ಮೊಸಳೆಯ ಸಂಗತಿ ತಿಳಿಯದೆ ನೀರಿಗೆ ಇಳಿಯುವ ಸಂದರ್ಭ ಅಪಾಯ ಆಗುವ ಸಾಧ್ಯತೆ ಇದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮೊಸಳೆ ವ್ಯಕ್ತಿಯನ್ನು ಹಿಡಿದುಕೊಂಡು ಮೊಸಳೆ ನೀರೊಳಗೆ ಮುಳುಗಿದ ದೃಶ್ಯ ಹರಿದಾಡುತ್ತಿತ್ತು. ಈಗ ಇಲ್ಲೂ ಅಂತಹ ಅಪಾಯ ತಪ್ಪಿಸಲು ಕ್ರಮ ಆಗಬೇಕಿದೆ. ಜಾಗೃತಿ ಮೂಡಬೇಕಿದೆ.

ಈ ಕಾರಣದಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ ಗಮನಿಸಿ ಸೂಚನಾ ಫಲಕ ಅಳವಡಿಕೆ ಮಾಡಬೇಕಿದೆ. ಎಚ್ಚರಿಕಾ ಫಲಕ ಅಳವಡಿಕೆ ಬಗ್ಗೆ ನಾಕೂರು ಗಯ ಹಿತರಕ್ಷಣಾ ವೇದಿಕೆಯೂ ಗಮನಹರಿಸಬೇಕಿದೆ.

 

Advertisement
  • ಚಿತ್ರ ಕೃಪೆ: ಶಿವಸುಬ್ರಹ್ಮಣ್ಯ  ಕಲ್ಮಡ್ಕ , ಪತ್ರಕರ್ತ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

View Comments

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

4 hours ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

4 hours ago

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…

4 hours ago

ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…

4 hours ago

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

14 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

14 hours ago