ಎಣ್ಮೂರು : ಎಣ್ಮೂರು ಸರಕಾರಿ ಪ್ರೌಡಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಅನ್ನ ನೀಡುವ ಭತ್ತದ ಬೇಸಾಯದ ನೇಜಿ ನಾಟಿ ಕುರಿತು ತಿಳುವಳಿಕೆ ನೀಡುವ ಶಿಕ್ಷಣದೊಂದಿಗೆ ನೇಜಿ ಕೃಷಿ ಪಾಠ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ಎಸ್ಡಿಎಂಸಿ ಮಾಜಿ ಅದ್ಯಕ್ಷ ಸೋಮಪ್ಪ ಗೌಡ ಕುಳ್ತಿಗೆ ನೇಜಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಭತ್ತದಿಂದ ಅಕ್ಕಿ ತಯಾರಿಸುವ ವಿಧಾನ ಮತ್ತು ಸಾವಯುವ ಜೀನನಾಂಶಕ ಅಕ್ಕಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೀತಲ್ ಭತ್ತ ಬೇಸಾಯದಲ್ಲಿ ಗದ್ದೆ ಹದಗೊಳಿಸುವ ನಾಟಿ ನೆಡುವ ವಿಧಾನಗಳ ಕುರಿತು ಮಾಹಿತಿ ಒದಗಿಸಿದರು. ಅಕ್ಷರಾ ದಾಸೋಹ ಸಿಬಂದಿಗಳಾದ ಪ್ರೇಮ ಪರ್ಲಡ್ಕ, ಪ್ರಮೀಳಾ ರೈ ಕಸ್ತೂರಿ ಪಾಡ್ದನ ಹಾಡಿ ಬಾಲ ರೈತ ಮಕ್ಕಳ ಗಮನ ಸೆಳೆದರು.
ಶಿಕ್ಷಕರಾದ ದಿವ್ಯಾ ಎಂ.ಕೆ,ಉಷಾ ಕೆ.ಎಸ್ ಸಂತೋಷ್ ಮಕ್ಕಳ ಜತೆ ನಾಟಿ ಕಾರ್ಯದಲ್ಲಿ ಸಹಕರಿಸಿದರು. ಶಿಕ್ಷಕ ಮೋಹನ ಗೌಡ ಎ ಸ್ವಾಗತಿಸಿ ಜೆಸಿಂತಾ ಮೊಂತೇರೋ ವಂದಿಸಿದರು.
ಹಲಸು ಮೌಲ್ಯವರ್ಧನೆಯಾಗಿ ಅಡುಗೆ ಮನೆ ಸೇರುತ್ತಿದೆ. ಅದರ ಜೊತೆಗೇ ಹಲಸು ವಿವಿಧ ರೂಪದಲ್ಲಿ…
ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ…
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…