ಎನ್ನೆಂಸಿ: ರೆಡ್‍ಕ್ರಾಸ್‍ಘಟಕದಿಂದವನಮಹೋತ್ಸವಆಚರಣೆ

July 25, 2019
3:00 PM

ಸುಳ್ಯ: ಸುಳ್ಯದ ನೆಹರೂ ಮೆಮೋರಿಯಲ್‍ ಕಾಲೇಜಿನ ಯುವರೆಡ್‍ಕ್ರಾಸ್‍ ಘಟಕದ ವತಿಯಿಂದಅರಣ್ಯ ಇಲಾಖೆ, ಸುಳ್ಯ ಇವರ ಸಹಯೋಗದೊಂದಿಗೆ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆ  ಅಜ್ಜಾವರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

Advertisement
Advertisement

ಕಾಲೇಜಿನ ಯುವರೆಡ್‍ಕ್ರಾಸ್‍ ಘಟಕದ ಸುಮಾರು 70 ವಿದ್ಯಾರ್ಥಿಗಳು, ಕಾರ್ಯಕ್ರಮಾಧಿಕಾರಿ ಡಾ| ಅನುರಾಧಾ ಕುರುಂಜಿಯವರ ನೇತೃತ್ವದಲ್ಲಿ ಅಜ್ಜಾವರ ಪರಸರದಲ್ಲಿ ಗಿಡಗಳನ್ನು ನೆಡುವಮೂಲಕ ವಿಶ್ವಪರಿಸರದಿನವನ್ನು ಆಚರಿಸಿದರು.ಸರಕಾರಿ ಪ್ರೌಢ ಶಾಲೆ, ಅಜ್ಜಾವರದ ಮುಖ್ಯೋಪಾಧ್ಯಾರಾದ ನಾಗರಾಜ ಅವರುಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ನಾವು ಕಾಪಾಡಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನೀರು ಹಾಗೂ ಶುದ್ಧ ಗಾಳಿಯಅಭಾವಅತೀವವಾಗಿ ನಮ್ಮನ್ನುಕಾಡಲಿದೆ. ಬೆಂಗಳೂರಲ್ಲಿ ಆಕ್ಸಿಜನ್ ಕ್ಲಬ್‍ಗಳು ಈಗಾಗಲೇ ಆರಂಭವಾಗಿವೆ. ದುಡ್ಡುಕೊಟ್ಟು ಗಾಳಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಗಿಡವನ್ನು ನೆಟ್ಟು ಪೋಷಿಸಿದರೆ ಮುಂದಿನ ತಲೆಮಾರಿಗೆ ಒಳ್ಳೆಯ ಪರಿಸರವನ್ನುಕೊಡಬಹುದುಎನ್ನುವ ನಿಟ್ಟಿನಲ್ಲಿಇಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿಆಯೋಜನೆಯಾಗಬೇಕುಎಂದರು.

Advertisement

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಅರಣ್ಯಇಲಾಖೆಯ ಉಪ ವಲಯಅರಣ್ಯಾಧಿಕಾರಿ ಯಶೋಧರ ಅವರು ಮಾತನಾಡಿ, ಒಂದುಗಿಡವನ್ನು ನೆಟ್ಟರೆಅದು ಮನುಷ್ಯನ ಬದುಕಿನಲ್ಲಿ ನಾಲ್ಕು ಕೋಟಿ ಬೆಲೆಯನ್ನು ಬಾಳುತ್ತದೆ. ಗಿಡಗಳ ಪ್ರಾಮುಖ್ಯತೆಯನ್ನುಅರಿತುಅದನ್ನು ನೆಟ್ಟು ಪೋಷಿಸಿ, ಬೆಳೆಸುವ ಕಾಯಕದಲ್ಲಿತಮ್ಮನ್ನುತಾವು ತೊಡಗಿಸಿಕೊಳ್ಳಿ. ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸುವತಮ್ಮ ಕೆಲಸ ಶ್ಲಾಘನೀಯಎಂದರು.

ಕಾರ್ಯಕ್ರಮಾಧಿಕಾರಿಡಾ| ಅನುರಾಧಾಕುರುಂಜಿಯವರು ಮಾತನಾಡಿಅರಣ್ಯಗಳು ನಾಶವಾಗಿ ಕಾಂಕ್ರೀಟೀಕರಣಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮರದ ಪ್ರಾಮುಖ್ಯತೆಯನ್ನು ತಿಳಿಸುವ ಮತ್ತು ಆ ಮೂಲಕ ಪರಿಸರವನ್ನು ಉಳಿಸುವ ಕೆಲಸ ಮಕ್ಕಳಿಂದಾಗಬೇಕು ಎನ್ನುವನಿಟ್ಟಿನಲ್ಲಿಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.

Advertisement

ಅಜ್ಜಾವರದಅರಣ್ಯರಕ್ಷಕ ದಿವೀಶ್ ಕೆ, ಸರಕಾರಿ ಪ್ರೌಢ ಶಾಲೆಅಜ್ಜಾವರದಎಸ್‍ಡಿಎಂಸಿ ಅಧ್ಯಕ್ಷಸುಂದರ, ಕಾಲೇಜಿನ ಹಿಂದಿ ವಿಭಾಗದಉಪನ್ಯಾಸಕ ಮನೋಜ್‍ಕುಮಾರ್, ಅರಣ್ಯಇಲಾಖೆಯ ಶ್ರೀಧರ್ ಹಾಗೂ ಸಿಬ್ಬಂದಿಗಳು, ರೆಡ್‍ಕ್ರಾಸ್‍ಘಟಕದನಾಯಕರುಗಳಾದ ಭುವನ್ ಪಿ, ಕುಮುದಾ ಪಿ. ಎಸ್, ಬ್ರಿಜೇಶ್ ಕೆ ಮೊದಲಾದವರುಉಪಸ್ಥಿತರಿದ್ದರು. ಸ್ವಾತಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ ಅಕ್ಷತಾ ವಂದಿಸಿದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ : ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ
April 25, 2024
3:00 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror