ಸುದ್ದಿಗಳು

ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಗ್ರಾಮೀಣ ಮಟ್ಟದಲ್ಲೂಅಡಿಕೆ ಖರೀದಿ ನಡೆಸಲು ಬೆಳೆಗಾರರಿಂದ ಬೇಡಿಕೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಈಗಾಗಲೇ ಪುತ್ತೂರು ಹಾಗೂ ಸುಳ್ಯ ಎಪಿಎಂಸಿ ಯಲ್ಲಿ ಅಡಿಕೆ ಖರೀದಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಿಂದ ಸುಳ್ಯ ಎಪಿಎಂಸಿಯಲ್ಲಿ  ಅಡಿಕೆ ಖರೀದಿ ಆರಂಭಗೊಂಡಿದೆ.  ಇದೀಗ ಗ್ರಾಮಮಟ್ಟದಲ್ಲಿ ಲಾಕ್ಡೌನ್ ನಿಯಮದೊಂದಿಗೆ  ಅಡಿಕೆ ಖರೀದಿಗೆ ವ್ಯವಸ್ಥೆ ಆಗಬೇಕು ಎಂದು ಈಗ ಬೆಳೆಗಾರರಿಂದ ಒತ್ತಾಯ ಕೇಳಿಬಂದಿದೆ.

Advertisement

 

ಈಗಾಗಲೇ ರಾಜ್ಯದಲ್ಲಿ  ಮೇ.3 ರವರೆಗೆ ಲಾಕ್ಡೌನ್ ಮುಂದುವರಿಸಲಾಗಿದೆ. ಅಡಿಕೆ ಬೆಳೆಗಾರರಿಗೆ ಯಾವುದೇ ಕೃಷಿ ಉತ್ಪನ್ನ ಮಾಡಲಾಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಬಹುಪಾಲು ಕೃಷಿಕರು ಅಡಿಕೆ ಕೃಷಿಯನ್ನೇ ನಂಬಿದ್ದರೆ, ಸುಳ್ಯ, ಬೆಳ್ತಂಗಡಿ ಪ್ರದೇಶದಲ್ಲಿ ರಬ್ಬರ್ ಕೂಡಾ ಪ್ರಮುಖ ಬೆಳೆ. ಇದೀಗ ಕ್ಯಾಂಪ್ಕೋ ಅಡಿಕೆ ಖರೀದಿ ಮಾಡುತ್ತಿದೆ.  ಆದರೆ ಸೀಮಿತ ಶಾಖೆಗಳಲ್ಲಿ  ಮಾತ್ರವೇ ಅಡಿಕೆ ಖರೀದಿ ನಡೆಸುವುದರಿಂದ ಎಲ್ಲಾ ಬೆಳೆಗಾರರಿಗೆ ಅಡಿಕೆ ಮಾರಾಟ ಮಾಡಲು ಆಗುತ್ತಿಲ್ಲ.  ಇದೀಗ ಎಪ್ರಿಲ್ ಅಂತ್ಯವಾಗುತ್ತಾ ಬಂದಿದೆ. ಅನೇಕ ಕೃಷಿ ಕೆಲಸಗಳು ಬಾಕಿ ಉಳಿದಿದೆ, ಅಡಿಕೆ ಮಾರಾಟ ಮಾಡದೆ ಹಣ ಇಲ್ಲದ ಸ್ಥಿತಿ ಬಹುಪಾಲು ಬೆಳೆಗಾರರಿಗೆ ಇದೆ. ಈ ಕಾರಣದಿಂದ ಮಳೆಗಾಲದ ಮುನ್ನ ಕೃಷಿ ಕಾರ್ಯ ಮುಗಿಯದು. ಹೀಗಾಗಿ ಈಗ ಅಡಿಕೆ ಮಾರಾಟಕ್ಕೆ ವ್ಯವಸ್ಥೆ ಬೇಕಾಗಿದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದಾರೆ.

ಈಗ ಲಾಕ್ಡೌನ್ ಇರುವುರಿಂದ ಗ್ರಾಮದ ಹೊರಗೆ ಜನರು ಹೋಗದಂತೆ ತಡೆಯಬೇಕು ಎಂದು ಸರಕಾರವೇ ಹೇಳುತ್ತದೆ. ಇಂತಹ ಸಂದರ್ಭದಲ್ಲಿ  ಅಡಿಕೆಯನ್ನು  ದೂರ ಊರಿಗೆ ಕೊಂಡೊಯ್ಯುವುದು ಹೇಗೆ ? ಎಂಬ ಪ್ರಶ್ನೆ ಇದೆ. ಇದಕ್ಕಾಗಿ ಗ್ರಾಮಮಟ್ಟದಲ್ಲೂ ಸಾಮಾಜಿಕ ಅಂತರ ಹಾಗೂ ನಿಯಮಗಳೊಂದಿಗೆ ಎಪಿಎಂಸಿ ತೆರಿಗೆ, ಜಿಎಸ್ಟಿ ಸಹಿತವಾಗಿ ಇರುವ ವ್ಯಾಪಾರಿಗಳೂ ಅಡಿಕೆ ಖರೀದಿ ನಡೆಸಿದರೆ ಕೃಷಿಕರಿಗೆ ಉಪಕಾರಿಯಾಗಲಿದೆ ಅಲ್ಲದೆ ಕ್ಯಾಂಪ್ಕೋ ಸಂಸ್ಥೆಗೂ ಹೊರೆ ತಪ್ಪಲಿದೆ ಎಂಬುದು ಅಡಿಕೆ ಬೆಳೆಗಾರರ ಅಭಿಮತ. ಅದಿಕಾರಿಗಳು, ಸರಕಾರ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…

2 hours ago

ಹವಾಮಾನ ವರದಿ | 13-07-2025 | ಇಂದು ಸಾಮಾನ್ಯ ಮಳೆ | ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ – ಏಕೆ?

ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…

5 hours ago

ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!

ಮೊಬೈಲ್‌ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…

8 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್

ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…

11 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ

ಕೃತಿಕಾ, 9 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ ಶಾಲೆ, ಕಡಬ…

12 hours ago

ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ

ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

12 hours ago