ಬೆಳ್ಳಾರೆ: ಕಳೆದ ಎರಡು ದಿನಗಳಿಂದ ಮಳೆಯಬ್ಬರ ಹೆಚ್ಚಾಗಿದೆ. ಸೋಮವಾರ ಮುಂಜಾನೆಯಿಂದ ಸುರಿದ ಭಾರಿ ಮಳೆಗೆ ಮುಕ್ಕೂರು ಭಾಗದ ಮಾಪಳ ಮಜಲು ಹೊಳೆಯಲ್ಲಿ ಭಾರಿ ಪ್ರಮಾಣದ ನೀರಿನ ಹರಿವು ಉಂಟಾಗಿದ್ದು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಸುತ್ತ ಮುತ್ತಲಿನ ಕೃಷಿಕರ ತೋಟಗಳೂ ಜಲಾವೃತ್ತಗೊಂಡಿದ್ದು ಬೆಳೆ ನಾಶವೂ ಆಗಿದೆ.ಹೊಳೆಯ ಆಳದಲ್ಲಿ ಕೆಸರು ತುಂಬಿದ್ದು ಅದನ್ನು ತೆಗೆಯುವ ಕಾರ್ಯ ಅಸಮರ್ಪಕವಾಗಿ ನಡೆದುದರಿಂದ ರಸ್ತೆಯ ಮೇಲೆ ನೀರು ಹರಿಯಲು ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದೇ ವೇಳೆ ತಾಲೂಕಿನಲ್ಲೂ ಉತ್ತಮವಾದ ಮಳೆಯಾದ ವರದಿಯಾಗಿದೆ. ಕೃಷಿಕರು ಸಂಗ್ರಹಿಸಿದ ಮಳೆ ಲೆಕ್ಕದ ಪ್ರಕಾರ ಸೋಮವಾರ ಬೆಳಗ್ಗೆ ಬಾಳಿಲದಲ್ಲಿ 158 ಮಿಮೀ , ಗುತ್ತಿಗಾರಿನಲ್ಲಿ 113 ಮಿಮೀ , ಕಲ್ಲಾಜೆಯಲ್ಲಿ 135 ಮಿಮೀ , ಕೊಲ್ಲಮೊಗ್ರದಲ್ಲಿ 107 ಮಿಮೀ ಮಳೆಯಾಗಿದೆ.
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…