ಸುಳ್ಯ: ಭಾರತೀಯ ಜೀವ ವಿಮಾ ನಿಗಮದ ಸುಳ್ಯ ಉಪಗ್ರಹ ಶಾಖೆಯಲ್ಲಿ ನಿಗಮದ ಸಂಸ್ಥಾಪನಾ ದಿನಾಚರಣೆ ಮಂಗಳವಾರ ನಡೆಯಿತು.
ಮೊದಲ ಗ್ರಾಹಕ ರಾಜೇಂದ್ರಪ್ರಸಾದ್ ಮೂಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಿ, ನಿಗಮವು ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸಿ ಬಾಳಿಗೆ ಬೆಳಕು ನೀಡುತ್ತಿದೆ. ಇಲ್ಲಿ ತೊಡಗಿಸಿದ ಪ್ರತಿಯೊಬ್ಬರ ಹಣವೂ ಭದ್ರವಾಗಿದ್ದು ಸಮಾಜದ ಒಳಿತಿಗಾಗಿ ಬಳಕೆಯಾಗುವುದು ಶ್ಲಾಘನೀಯವೆಂದರು.
ಶಾಖಾಧಿಕಾರಿ ಜಿ. ಶಶಿಧರ ಹೆಗ್ಡೆ ಅವರು ನಿಗಮದ ಬಗ್ಗೆ ಮಾಹಿತಿ ನೀಡಿ 63 ಸಂವತ್ಸರಗಳನ್ನು ಪೂರೈಸಿ ಸಂಸ್ಥೆ ಮುನ್ನಡೆಯುತ್ತಿದ್ದು, ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿ ದೇಶದ ನವರತ್ನ ಸಂಸ್ಥೆಗಳಲ್ಲಿಯೇ ಮಹಾರತ್ನ ಸಂಸ್ಥೆಯಾಗಿ ದೇಶದ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡುತ್ತಿದೆ. 13ನೇ ಪಂಚವಾರ್ಷಿಕ ಯೋಜನೆಯಲ್ಲಿ ಈಗಾಗಲೇ 7,01,483 ಕೋಟಿ ರೂಪಾಯಿಗಳನ್ನು ಗಮನಾರ್ಹ ಹೂಡಿಕೆ ಮಾಡಿದೆ. ಗ್ರಾಹಕರ ಬೇಡಿಕೆಗನುಸಾರ ವಿವಿಧ ರೀತಿಯ ಸೌಲಭ್ಯಗಳನ್ನೊಳಗೊಂಡ ವಿವಿಧ ವಿಮಾ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ ಎಂದರು.
ಅಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ ಮತ್ತು ಪ್ರತಿನಿಧಿ ಪ್ರಭಾಕರ ಎಸ್.ಎನ್. ಮಾತನಾಡಿದರು. ಉಪ ಆಡಳಿತಾಧಿಕಾರಿ ಲಿಂಗಪ್ಪ ಗೌಡ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಉಮೇಶ್ ನಾಯಕ್ ವಂದಿಸಿದರು. ಪ್ರತಿನಿಧಿ ಬಿ.ಪದ್ಮನಾಭ ಶೆಟ್ಟಿ ನಿರೂಪಿಸಿದರು.
ಆಡಳಿತಾಧಿಕಾರಿ ಮಹಾಲಿಂಗ ನಾಯ್ಕ ,ಪ್ರತಿನಿಧಿಗಳಾದ ಮಾಧವ ಕೆ. ಜಾಲ್ಸೂರು ಮತ್ತು ಸೋಮನಾಥ ಕೇರ್ಪಳ, ಕಚೇರಿ ಸಹಾಯಕರಾದ ಸಂದೀಪ್ ಮತ್ತು ರಾಜೇಶ್ ಉಪಸ್ಥಿತರಿದ್ದರು.
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…
ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…