ಬೆಳ್ಳಾರೆ: ಯಾವತ್ತೂ ಯಶಸ್ಸು ಜೊತೆಗೇ ಇರುತ್ತದೆ. ಆದರೆ ಪ್ರಯತ್ನವೆಂಬುದು ಮುಖ್ಯ. ಮಾಡಿರುವ ಪ್ರಯತ್ನಕ್ಕೆ ಯಶಸ್ಸಂತೂ ಇದ್ದೇ ಇದೆ. ಆದರೆ ಕೆಲವೊಮ್ಮೆ ತಡವಾಗಬಹುದು ಅಷ್ಟೇ. ಇದಕ್ಕೆ ಉದಾಹರಣೆ ಎಣ್ಮೂರಿನ ವಿದ್ಯಾರ್ಥಿ ಮಹಮ್ಮದ್ ಮಝೀಫ್.
ಈತ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿ. ತನ್ನ ಜೀವನವನ್ನು ತಾನೇ ರೂಪಸಿಕೊಳ್ಳಬೇಕೆಂಬ ಛಲಕ್ಕೆ ಬಿದ್ದು ಶಾಲಾ ರಜಾ ದಿನಗಳಂದು ಕೇಟರಿಂಗ್ನಲ್ಲಿ ದುಡಿಯುತ್ತಿದ್ದ. ಸರಕಾರಿ ಶಾಲೆಯಲ್ಲಿ ಓದಿ ತಾಲೂಕಿಗೆ ದ್ವಿತೀಯ ಹಾಗೂ ಶಾಲೆಗೆ ಮೊದಲಿಗನಾದ. ಇದು ಇತ್ತೀಚೆಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 613(ಶೇ98.8) ಗಳಿಸಿದ ಎಣ್ಮೂರಿನ ಮಹಮ್ಮದ್ ಮಝೀಫ್ ಸಾಧನೆಯಾಗಿದೆ. ಮಹಮ್ಮದ್ ಮಝೀಫ್ ಮುರುಳ್ಯ ಗ್ರಾಮದ ರಾಗಿ ಪೇಟೆಯ ಟಿ. ಮಹಮ್ಮದ್ ಹಾಗು ಸಮೀನಾ ಆರ್ ದಂಪತಿಯ ಪುತ್ರ. ಎಣ್ಮೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ. ಎಣ್ಮೂರು ಶಾಲಾ ಅಧ್ಯಾಪಕರು ಉತ್ತಮ ಫಲಿತಾಂಶಕ್ಕಾಗಿ ಮಾಡಿದ ಶತಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿ ಪ್ರತಿಫಲ ಮಝೀಫ್ನಿಗೆ ದೊರೆತಿದೆ. ಅಂದ ಹಾಗೆ ಮಝೀಫ್ ವಿಶೇಷವಾಗಿ ಗಣಿತದಲ್ಲಿ 100 ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ 125 ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾನೆ.
ಮರುಮೌಲ್ಯಮಾಪನದಿಂದ 3 ಅಂಕ ಹೆಚ್ಚು ದೊರೆಯಿತು :
ಫಲಿತಾಂಶದಂದು ಕನ್ನಡದಲ್ಲಿ 3 ಅಂಕಗಳು ಕಡಿಮೆ ನಮೂದನೆಗೊಂಡಿದ್ದು, ಉತ್ತರ ಪತ್ರಿಕೆಗಳ ಪ್ರತಿಯನ್ನು ತರಸಿ ಪರಿಶೀಲಿಸಿದಾಗ ಕನ್ನಡದಲ್ಲಿ ಪೂರ್ತಿ 125 ಅಂಕಗಳು ಇದ್ದು ಅಂಕಗಳ ಮರು ಎಣಿಕೆಗೆ ಹಾಕಿದ್ದಾನೆ. ತಪ್ಪು ಎಣಿಕೆಯಿಂದಾಗಿ 610 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿ ಮಝೀಫ್ ಮರುಮೌಲ್ಯಮಾಪನದಲ್ಲಿ 3 ಅಂಕ ಹೆಚ್ಚು ಪಡೆದುಕೊಂಡು ಸುಳ್ಯ ತಾಲೂಕಿಗೆ ದ್ವಿತೀಯ ಹಾಗು ಎಣ್ಮೂರು ಸರಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…