Advertisement
ರಾಷ್ಟ್ರೀಯ

ಐಸಿಸಿ ವಿಶ್ವಕಪ್​​: ಬಾಂಗ್ಲಾ ವಿರುದ್ಧ 28 ರನ್ ಗಳ ಜಯ : ಸೆಮಿಫೈನಲ್​​ ಪ್ರವೇಶಿಸಿದ ಟೀಂ ಇಂಡಿಯಾ

Share

ಬರ್ಮಿಂಗ್​​ಹ್ಯಾಂ​​: ಸಂಘಟಿತ ಪ್ರದರ್ಶನ ನೀಡಿದ ಭಾರತ ವಿಶ್ವಕಪ್​ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು 28 ರನ್​ಗಳ ಜಯ ದಾಖಲಿಸಿತು. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್​​ ಪ್ರವೇಶಿಸಿತು.

ಇಲ್ಲಿನ ಎಜ್​ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟ್​​​ ಮಾಡಿದ ಭಾರತ 50 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 314 ರನ್​​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 48 ಓವರ್​ಗಳಲ್ಲಿ 10 ವಿಕೆಟ್​​ ನಷ್ಟಕ್ಕೆ 286 ರನ್​​ ಗಳಿಸಿ ಸೋಲನುಭವಿಸಿತು.

ಬಾಂಗ್ಲಾದೇಶದ ಶಕೀಬ್​​ ಆಲ್​​ ಹಸನ್​​ (66), ಸೌಮ್ಯ ಸರ್ಕಾರ್​​ (33), ಸಬ್ಬೀರ್​​​​​ ರಹಮಾನ್​​​ (36) ಹಾಗೂ ಮೊಹಮ್ಮದ್​​ ಸೈಫುದ್ದೀನ್​​​​ (51*) ಉತ್ತಮ ಪ್ರದರ್ಶನ ತೋರಿದರೂ ಗೆಲುವು ಸಾಧ್ಯವಾಗಲಿಲ್ಲ.

ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್​​ ಬುಮ್ರಾ 4, ಹಾರ್ದಿಕ್​​ ಪಾಂಡ್ಯ 3, , ಭುವನೇಶ್ವರ್​​ ಕುಮಾರ್​​ , ಮೊಹಮ್ಮದ್​ ಶಮಿ ಹಾಗೂ ಯಜುವೇಂದ್ರ ಚಾಹಲ್​​​ ತಲಾ ಒಂದು ವಿಕೆಟ್​​ ಕಬಳಿಸಿದರು.

ಇದಕ್ಕೂ ಮೊದಲು ಬ್ಯಾಟ್​​ ಮಾಡಿದ ಭಾರತ ಹಿಟ್ ಮ್ಯಾನ್ ರೋಹಿತ್ ಶರ್ಮ(92 ಬಾಲ್ ಗಳಲ್ಲಿ 104 ರನ್) ಆಕರ್ಷಕ ಶತಕ, ಕನ್ನಡಿಗ ಕೆ.ಎಲ್​​​​​ ರಾಹುಲ್​​​​​ (77) ಅರ್ಧ ಶತಕದ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿತು. ವಿರಾಟ್​​ ಕೊಹ್ಲಿ (26) ಹಾರ್ದಿಕ್​​ ಪಾಂಡ್ಯ (0), ರಿಷಬ್​​ ಪಂತ್​ (48), ದಿನೇಶ್​​​ ಕಾರ್ತಿಕ್​ (8), ಮಹೇಂದ್ರ ಸಿಂಗ್​​ ಧೋನಿ (35) ಭುವನೇಶ್ವರ್​​​ ಕುಮಾರ್​ (2), ಮೊಹಮ್ಮದ್​​ ಶಮಿ (1) ಓಟ್ ಆದರು. ಜಸ್ಪ್ರೀತ್​ ಬುಮ್ರಾ (0*) ಔಟಾಗದೆ ಉಳಿದರು.

ಬಾಂಗ್ಲಾ ಪರ ಮುಸ್ತಾಫಿಜುರ್​​ ರೆಹಮಾನ್​​​​​​ 5, ಶಕೀಬ್​​ ಆಲ್​​ ಹಸನ್, ರುಬೆಲ್​​​​​​​ ಹೊಸ್ಸಿನ್​​​​​ ಮತ್ತು ಸೌಮ್ಯ ಸರ್ಕಾರ್​​​ ತಲಾ ಒಂದು ವಿಕೆಟ್​​ ಪಡೆದುಕೊಂಡರು.

ರೋಹಿತ್ ಪಂದ್ಯಶ್ರೇಷ್ಠ:
ಕೇವಲ 92 ಬಾಲ್ ಗಳಲ್ಲಿ 5 ಸಿಕ್ಸರ್ 7 ಬೌಂಡರಿ ಸಹೀತ 104 ರನ್ ಸಿಡಿಸಿ ಭಾರತ ತಂಡಕ್ಕೆ ಆಸರೆಯಾದ ರೋಹಿತ್ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ವಿಶ್ವಕಪ್ ಪಂದ್ಯದಲ್ಲಿ ನಾಲ್ಕು ಶತಕ ಸಿಡಿಸುವ ಮೂಲಕ ರೋಹಿತ್ ದಾಖಲೆ ಸೃಷ್ಠಿಸಿದರು. ಈ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ(122), ಪಾಕಿಸ್ಥಾನ(140), ಇಂಗ್ಲೆಂಡ್(102), ಬಾಂಗ್ಲಾದೇಶ (104) ವಿರುದ್ಧ ರೋಹಿತ್ ಶತಕ ದಾಖಲಿಸಿದ್ದರು.

ಸೆಮಿಗೆ ಟಿಂ ಇಂಡಿಯಾ:

ಒಂದು ಪಂದ್ಯ ಉಳಿದಿರುವಂತೆಯೇ ಟಿಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. 8 ಪಂದ್ಯಗಳನ್ನು ಆಡಿದ ಭಾರತ 6 ಜಯ ದಾಖಲಿಸಿ ಉಪಾಂತ್ಯ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ವಿರುದ್ಧ ಟಿಂ ಇಂಡಿಯಾ ಜಯ ಗಳಿಸಿದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದಾದ ಕಾರಣ ಅಂಕವನ್ನು ಹಂಚಿಕೊಂಡರೆ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದೆ.
ಶ್ರೀಲಂಕಾ ವಿರುದ್ಧದ ಪಂದ್ಯ ಬಾಕಿ ಇದೆ. 8 ಪಂದ್ಯದಲ್ಲಿ ಒಟ್ಟು 13 ಅಂಕ ಪಡೆದಿರುವ ಭಾರತ ಎರಡನೇ ಸ್ಥಾನದಲ್ಲಿದೆ‌. 8 ಪಂದ್ಯದಲ್ಲಿ ಏಳು ಜಯ ಗಳಿಸಿ 14 ಅಂಕ ಪಡೆದಿರುವ ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ‌.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

4 hours ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

6 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

12 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

13 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

20 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

1 day ago