ಸುಳ್ಯ: ಮಗ ಹಾಗೂ ಪತ್ನಿ ವೃದ್ಧ ಪತಿಯನ್ನು ಬಿಟ್ಟು ಹಲವು ತಿಂಗಳ ಹಿಂದೆ ನಾಪತ್ತೆಯಾಗಿದ್ದು ಒಬ್ಬಂಟಿ ವೃದ್ಧನಿಗೆ ಸ್ಥಳೀಯರು ಮಾನವೀಯತೆ ಮೆರೆದು ಅನಾಥಾಶ್ರಮದ ಭಾಗ್ಯವನ್ನು ಕಲ್ಪಿಸಿದ್ದಾರೆ.
ಸುಳ್ಯದ ಶಾಂತಿನಗರದಲ್ಲಿ ವಾಸವಿದ್ದ ಗೋಪಾಲಕೃಷ್ಣ ಆಶ್ರಮ ಸೇರಿದ ವ್ಯಕ್ತಿಯಾಗಿದ್ದಾರೆ. ಗೋಪಾಲಕೃಷ್ಣ ಅವರ ಪತ್ನಿ ಹಾಗೂ ಮಗ ಕಳೆದ ಕೆಲವು ಸಮಯಗಳಿಂದ ನಾಪತ್ತೆಯಾಗಿದ್ದರು. ಗೋಪಾಲಕೃಷ್ಣ ಅವರ ಪುತ್ರನಿಗೆ ವ್ಯವಹಾರದ ಸಂಬಂಧ ಸಾಲವಾಗಿತ್ತು. ಹೀಗಾಗಿ ಯಾರಿಗೂ ಹೇಳದೇ ವರ್ಷಗಳ ಹಿಂದೆ ಪರಾರಿಯಾಗಿದ್ದರು. ಗೋಪಾಲಕೃಷ್ಣ ಅವರು ಕ್ಯಾಂಪ್ಕೋದ ನಿವೃತ್ತ ಉದ್ಯೋಗಿಯಾಗಿ ದ್ದು ಅವರ ಪತ್ನಿ ಶಿಕ್ಷಕಿಯಾಗಿದ್ದರು. ಮಗನಿಗೆ ಸಾಲವನ್ನು ನೀಡಿದ ಸಾಲಗಾರರು ನಿವೃತ್ತ ದಂಪತಿಗಳನ್ನು ಕಾಡತೊಡಗಿ ದ್ದರು. ಈ ನಡುವೆ ಗೋಪಾಲಕೃಷ್ಣರಿಗೆ ಅಸೌಖ್ಯ ಕಾಡಿದ ಪರಿಣಾಮ ಪತಿ ಹಾಗೂ ಮನೆಯ ಜವಾಬ್ದಾರಿ ಪತ್ನಿಯ ಮೇಲೆ ಬಿದ್ದಿತ್ತು. ಸಾಲಗಾರರು ಪ್ರತಿನಿತ್ಯ ಕಾಡತೊಡಗಿದರು. ಸಾಲ ತೀರಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಹೀಗಾಗಿ ಬಾಧೆ ತಾಳಲಾರದೇ ಗೋಪಾಲಕೃಷ್ಣರನ್ನು ಅವರ ತಮ್ಮನ ಮನೆಯಲ್ಲಿ ಸೇರಿಸಿ 2 ದಿನ ಬಿಟ್ಟು ಬರುತ್ತೇನೆ ಎಂದು ಹೇಳಿ ಹೋದ ಅವರ ಪತ್ನಿ ಇದುವರೆಗೂ ಮರಳಿ ಬಂದಿಲ್ಲ. ಕೆಲ ದಿನ ತಮ್ಮನ ಮನೆಯಲ್ಲೇ ಕಳೆದ ಗೋಪಾಲಕೃಷ್ಣ ನಂತರ ಶಾಂತಿನಗರದ ಮನೆಗೆ ಬಂದಿದ್ದಾರೆ. ತೀವ್ರ ಕೃಷಕಾಯರಾಗಿದ್ದ ಅವರಿಗೆ ಊಟೋಪಚಾರಗಳನ್ನು ಪಕ್ಕದ ಮನೆಯವರು ನೀಡುತ್ತಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ವೃದ್ಧನ ಕಥೆಯ ಕುರಿತು ವರದಿಯಾದ ಬಳಿಕ ಅವರ ಸಹೋದ್ಯೋಗಿಯೊಬ್ಬರು ಪರ್ಯಾ ಯ ವ್ಯವಸ್ಥೆ ಕಲ್ಪಿಸಲು ಮುಂದಾದರು. ಮಡಿಕೇರಿಯ ಶುಂಠಿಕೊಪ್ಪದ ಅನಾಥಾಶ್ರಮವೊಂದಕ್ಕೆ ಸ್ಥಳೀಯರ ಸಹಾಯದಿಂದ ಸೇರಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…