Advertisement
ನಮ್ಮೂರ ಸುದ್ದಿ

ಒಬ್ಬಂಟಿ ವೃದ್ಧನಿಗೆ ಆಶ್ರಮ ಭಾಗ್ಯ ಕಲ್ಪಿಸಿದ ಸ್ಥಳೀಯರು

Share

ಸುಳ್ಯ:  ಮಗ ಹಾಗೂ ಪತ್ನಿ ವೃದ್ಧ ಪತಿಯನ್ನು ಬಿಟ್ಟು ಹಲವು ತಿಂಗಳ ಹಿಂದೆ ನಾಪತ್ತೆಯಾಗಿದ್ದು ಒಬ್ಬಂಟಿ ವೃದ್ಧನಿಗೆ ಸ್ಥಳೀಯರು ಮಾನವೀಯತೆ ಮೆರೆದು ಅನಾಥಾಶ್ರಮದ ಭಾಗ್ಯವನ್ನು ಕಲ್ಪಿಸಿದ್ದಾರೆ.
ಸುಳ್ಯದ ಶಾಂತಿನಗರದಲ್ಲಿ ವಾಸವಿದ್ದ ಗೋಪಾಲಕೃಷ್ಣ ಆಶ್ರಮ ಸೇರಿದ ವ್ಯಕ್ತಿಯಾಗಿದ್ದಾರೆ. ಗೋಪಾಲಕೃಷ್ಣ ಅವರ ಪತ್ನಿ ಹಾಗೂ ಮಗ ಕಳೆದ ಕೆಲವು ಸಮಯಗಳಿಂದ ನಾಪತ್ತೆಯಾಗಿದ್ದರು. ಗೋಪಾಲಕೃಷ್ಣ ಅವರ ಪುತ್ರನಿಗೆ ವ್ಯವಹಾರದ ಸಂಬಂಧ ಸಾಲವಾಗಿತ್ತು.  ಹೀಗಾಗಿ ಯಾರಿಗೂ ಹೇಳದೇ ವರ್ಷಗಳ ಹಿಂದೆ ಪರಾರಿಯಾಗಿದ್ದರು.  ಗೋಪಾಲಕೃಷ್ಣ ಅವರು ಕ್ಯಾಂಪ್ಕೋದ ನಿವೃತ್ತ ಉದ್ಯೋಗಿಯಾಗಿ ದ್ದು ಅವರ ಪತ್ನಿ  ಶಿಕ್ಷಕಿಯಾಗಿದ್ದರು. ಮಗನಿಗೆ ಸಾಲವನ್ನು ನೀಡಿದ ಸಾಲಗಾರರು ನಿವೃತ್ತ ದಂಪತಿಗಳನ್ನು ಕಾಡತೊಡಗಿ ದ್ದರು. ಈ ನಡುವೆ ಗೋಪಾಲಕೃಷ್ಣರಿಗೆ ಅಸೌಖ್ಯ ಕಾಡಿದ ಪರಿಣಾಮ ಪತಿ ಹಾಗೂ ಮನೆಯ ಜವಾಬ್ದಾರಿ ಪತ್ನಿಯ ಮೇಲೆ ಬಿದ್ದಿತ್ತು. ಸಾಲಗಾರರು ಪ್ರತಿನಿತ್ಯ ಕಾಡತೊಡಗಿದರು. ಸಾಲ ತೀರಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಹೀಗಾಗಿ ಬಾಧೆ ತಾಳಲಾರದೇ ಗೋಪಾಲಕೃಷ್ಣರನ್ನು ಅವರ ತಮ್ಮನ ಮನೆಯಲ್ಲಿ ಸೇರಿಸಿ 2 ದಿನ ಬಿಟ್ಟು ಬರುತ್ತೇನೆ ಎಂದು ಹೇಳಿ ಹೋದ ಅವರ ಪತ್ನಿ   ಇದುವರೆಗೂ ಮರಳಿ ಬಂದಿಲ್ಲ. ಕೆಲ ದಿನ ತಮ್ಮನ ಮನೆಯಲ್ಲೇ ಕಳೆದ ಗೋಪಾಲಕೃಷ್ಣ  ನಂತರ  ಶಾಂತಿನಗರದ ಮನೆಗೆ ಬಂದಿದ್ದಾರೆ. ತೀವ್ರ ಕೃಷಕಾಯರಾಗಿದ್ದ ಅವರಿಗೆ ಊಟೋಪಚಾರಗಳನ್ನು ಪಕ್ಕದ ಮನೆಯವರು ನೀಡುತ್ತಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ವೃದ್ಧನ ಕಥೆಯ ಕುರಿತು ವರದಿಯಾದ ಬಳಿಕ ಅವರ ಸಹೋದ್ಯೋಗಿಯೊಬ್ಬರು ಪರ್ಯಾ ಯ ವ್ಯವಸ್ಥೆ ಕಲ್ಪಿಸಲು ಮುಂದಾದರು. ಮಡಿಕೇರಿಯ ಶುಂಠಿಕೊಪ್ಪದ ಅನಾಥಾಶ್ರಮವೊಂದಕ್ಕೆ ಸ್ಥಳೀಯರ ಸಹಾಯದಿಂದ ಸೇರಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

2 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

6 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

14 hours ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

14 hours ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

16 hours ago

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ

ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…

23 hours ago