ಯಕ್ಷಗಾನ : ಮಾತು-ಮಸೆತ

ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ದಂಬ’)
ಪ್ರಸಂಗ : ಸಹಸ್ರಕವಚ ಮೋಕ್ಷ

Advertisement

(ಸಂದರ್ಭ : ನರನಾರಾಯಣರೊಂದಿಗೆ ಹೋರಾಡಿ ಸೋತ ದಂಬನಿಗೆ ಜ್ಞಾನೋದಯ)

“.. ಅಹಂಕಾರಕ್ಕೆ ಎಷ್ಟು ಪೊದರುಗಳು. ಸಾಮಾನ್ಯ ಮೃಗಪಕ್ಷಿಗಳಿಗಿದ್ದಂತಹ ತಪೋಗುಣದ ಅಹಂಕಾರವೇ ಒಂದು ಪೊದರಾಗಿ ಪರಿಣಮಿಸುತ್ತದೆ; ಬಂಧನಕಾರಕವಾಗುತ್ತದೆ. ಸೌಂದರ್ಯವೂ ಬಂಧನಕಾರವಾಗುತ್ತದೆ. ಕ್ರೌರ್ಯವೂ ಬಂಧನಕಾರಕವಾಗುತ್ತದೆ. ರಾಜರು ಹುಲಿ, ಶಾರ್ದೂಲಾದಿಗಳನ್ನು ಬಂಧನದಲ್ಲಿ ಕಟ್ಟಿ ಹಾಕುತ್ತಾರೆ. ಕೋಗಿಲೆ, ಗಿಳಿ, ನವಿಲು.. ಇತ್ಯಾದಿ ಪ್ರಾಣಿಪಕ್ಷಿಗಳನ್ನು ಬಂಧಿಸುತ್ತಾರೆ… ನಾನು ನಾನಾಗಿ ನನ್ನ ಮೈಮೇಲೆ ಹಾಕಿಕೊಂಡ ಮುಸುಕುಗಳು ಎಷ್ಟು? ಒಂದೋ.. ಎರಡೋ… ಮೂರೋ.. ನೂರೋ… ಒಂಬೈನೂರ ತೊಂಭತ್ತೊಂಭತ್ತು. ಇದು ಕತ್ತಲೆಯ ಆವರಣಗಳು. ನಾನು ಎದ್ದು ಬಂದದ್ದೇ ವಿಚತ್ರ! ಬಹುಶಃ ನಮ್ಮದ್ದಾದ ವಿಭೂತಿಮತ್ತಾದ ಶಕ್ತಿ ವಿಶೇಷವದು.

ಆದರೆ ಒಂದು ವಿಶ್ವಾಸ. ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು. ಆದರೆ ಒಂದು ದೀಪ ಉರಿಸಿದರೆ ಅದರ ನಾಶಕ್ಕೆ ನೂರು ವರುಷ ಬೇಕಾಗುವುದಿಲ್ಲ. ಈಗ ನಿಮ್ಮಲ್ಲಿ ಹೋರಾಟ ಮಾಡಿದ್ದರಿಂದ ನಿಮ್ಮಿಂದ ಕಳಚಲ್ಪಟ್ಟಂತಹ ಕವಚಗಳು ಒಂಭೈನೂರ ತೊಂಭತ್ತ ಒಂಭತ್ತು ಹೋಗಿ ಈಗ ಕೇವಲ ಒಬ್ಬ ಜೀವ ಮಾತ್ರನಿಗೆ ಮೋಕ್ಷ ಸಾಧನೆಗೆ ಬೇಕಾದ ಮಾರ್ಗವೆಂಬಂತೆ ಒಂದೇ ಕವಚ ಉಳಿದಿದೆ. ಸೂರ್ಯನಿಂದ ಏನು ಅನುಗ್ರಹ ಪಡೆದರೇನು? ಸಾವಿರಾರು ವರುಷಗಳಿಂದ ‘ಪುನರಪಿ ಜನನಂ, ಪುನರಪಿ ಮರಣಂ’ ಕಾಮ, ಕಾಂಚನ, ಕೀರ್ತಿ.. ಹೀಗೆ ಹೊದಿಕೆಯೇ ತುಂಬಿದೆ. ಇಂತಹ ಮಾಯೆಯ ಹೊದಿಕೆಯಿಂದ ಇಂದು ಹೊರಗೆ ಬಂದಿದ್ದೇನೆ. ನಿಮ್ಮ ಅನುಗ್ರಹದಿಂದ ಕೃತಾರ್ಥನಾದೆ…

Advertisement

ಊರ್ವಶಿ ಎಂಬವಳು ದಂಬೋದ್ಬವ ಎಂಬ ಜೀವನಿಗೆ ಕತ್ತಲೆಯನ್ನು ಬೀರಿದಂತಹ ನಾರಾಯಣನ ಮಾಯೆ. ಯಾವ ತಾಯಿ ಹೆತ್ತ ಮಗಳು ಅವಳಲ್ಲ. ಕೇವಲ ನಿಮ್ಮ ಸಂಕಲ್ಪದಿಂದ ಹುಟ್ಟಿದ್ದು. ಮೋಹದ ಅಂಧಕಾರದಲ್ಲಿ ಕೆಡಹಿ ಅವಳ ಜನ್ಮಸ್ಥಾನವಾದಂತಹ ಪಿತೃವಿನ ಸನ್ನಿಧಾನಕ್ಕೆ ನನ್ನನ್ನು ಎಳೆತಂದದ್ದು. ಪ್ರಕೃತಿಯಾಗಲೀ, ಮಾಯೆಯಾಗಲೀ ಅವಳು ಯೋಗ ಮಾಯೆಯಾಗಿ ಜೀವನನ್ನು ಆಕರ್ಷಿಸಿದಳು ಎಂತಾದರೆ, ನಿಜವಾದ ಪಿತೃ ಸ್ಥಾನಕ್ಕೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುತ್ತಾಳೆ. ನರನಾರಾಯಣರೆಂಬ ಉಭಯರಿಗೆ ಹುಟ್ಟಿದಂತಹ ಮಗಳು ಅವಳು. ಇದು ನಿಮ್ಮ ಸಂಕಲ್ಪ. ನಿಮ್ಮ ಶುದ್ಧ ಸಂಕಲ್ಪದ ಆವರಣವೇ ಅವಳ ಮೈ ಆಗಿರುತ್ತದೆಯೇ ಹೊರತು ಶುಕ್ಲ ಶೋಣಿತ ಸಮ್ಮಿಶ್ರಣವಾದುದಲ್ಲ. ಆದ ಕಾರಣ ಅವಿದ್ಯಾ ರೂಪಿಣಿಯಾಗಿ ನನ್ನನ್ನು ಎಳೆದರೂ ಕೊನೆಗೆ ವಿದ್ಯಾರೂಪಿಣಿಯಾಗಿ ನಿಮ್ಮ ದರ್ಶನವನ್ನು ಮಾಡಿದ್ದರಿಂದ ಈ ಹೊತ್ತು ಒಂದು ಬಯಕೆ ಉಳಿದಿದೆ…. ಉಳಿದೊಂದು ಕವಚಕ್ಕೆ ಮಾರ್ಗ ಸೂಚಿಸಿ…..

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ

ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…

1 hour ago

ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ

15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

2 hours ago

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!

ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…

9 hours ago

ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…

9 hours ago

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌

ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…

17 hours ago

ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …

19 hours ago