Advertisement
ಯಕ್ಷಗಾನ : ಮಾತು-ಮಸೆತ

ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು….

Share

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ದಂಬ’)
ಪ್ರಸಂಗ : ಸಹಸ್ರಕವಚ ಮೋಕ್ಷ

Advertisement
Advertisement

(ಸಂದರ್ಭ : ನರನಾರಾಯಣರೊಂದಿಗೆ ಹೋರಾಡಿ ಸೋತ ದಂಬನಿಗೆ ಜ್ಞಾನೋದಯ)

Advertisement

“.. ಅಹಂಕಾರಕ್ಕೆ ಎಷ್ಟು ಪೊದರುಗಳು. ಸಾಮಾನ್ಯ ಮೃಗಪಕ್ಷಿಗಳಿಗಿದ್ದಂತಹ ತಪೋಗುಣದ ಅಹಂಕಾರವೇ ಒಂದು ಪೊದರಾಗಿ ಪರಿಣಮಿಸುತ್ತದೆ; ಬಂಧನಕಾರಕವಾಗುತ್ತದೆ. ಸೌಂದರ್ಯವೂ ಬಂಧನಕಾರವಾಗುತ್ತದೆ. ಕ್ರೌರ್ಯವೂ ಬಂಧನಕಾರಕವಾಗುತ್ತದೆ. ರಾಜರು ಹುಲಿ, ಶಾರ್ದೂಲಾದಿಗಳನ್ನು ಬಂಧನದಲ್ಲಿ ಕಟ್ಟಿ ಹಾಕುತ್ತಾರೆ. ಕೋಗಿಲೆ, ಗಿಳಿ, ನವಿಲು.. ಇತ್ಯಾದಿ ಪ್ರಾಣಿಪಕ್ಷಿಗಳನ್ನು ಬಂಧಿಸುತ್ತಾರೆ… ನಾನು ನಾನಾಗಿ ನನ್ನ ಮೈಮೇಲೆ ಹಾಕಿಕೊಂಡ ಮುಸುಕುಗಳು ಎಷ್ಟು? ಒಂದೋ.. ಎರಡೋ… ಮೂರೋ.. ನೂರೋ… ಒಂಬೈನೂರ ತೊಂಭತ್ತೊಂಭತ್ತು. ಇದು ಕತ್ತಲೆಯ ಆವರಣಗಳು. ನಾನು ಎದ್ದು ಬಂದದ್ದೇ ವಿಚತ್ರ! ಬಹುಶಃ ನಮ್ಮದ್ದಾದ ವಿಭೂತಿಮತ್ತಾದ ಶಕ್ತಿ ವಿಶೇಷವದು.

ಆದರೆ ಒಂದು ವಿಶ್ವಾಸ. ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು. ಆದರೆ ಒಂದು ದೀಪ ಉರಿಸಿದರೆ ಅದರ ನಾಶಕ್ಕೆ ನೂರು ವರುಷ ಬೇಕಾಗುವುದಿಲ್ಲ. ಈಗ ನಿಮ್ಮಲ್ಲಿ ಹೋರಾಟ ಮಾಡಿದ್ದರಿಂದ ನಿಮ್ಮಿಂದ ಕಳಚಲ್ಪಟ್ಟಂತಹ ಕವಚಗಳು ಒಂಭೈನೂರ ತೊಂಭತ್ತ ಒಂಭತ್ತು ಹೋಗಿ ಈಗ ಕೇವಲ ಒಬ್ಬ ಜೀವ ಮಾತ್ರನಿಗೆ ಮೋಕ್ಷ ಸಾಧನೆಗೆ ಬೇಕಾದ ಮಾರ್ಗವೆಂಬಂತೆ ಒಂದೇ ಕವಚ ಉಳಿದಿದೆ. ಸೂರ್ಯನಿಂದ ಏನು ಅನುಗ್ರಹ ಪಡೆದರೇನು? ಸಾವಿರಾರು ವರುಷಗಳಿಂದ ‘ಪುನರಪಿ ಜನನಂ, ಪುನರಪಿ ಮರಣಂ’ ಕಾಮ, ಕಾಂಚನ, ಕೀರ್ತಿ.. ಹೀಗೆ ಹೊದಿಕೆಯೇ ತುಂಬಿದೆ. ಇಂತಹ ಮಾಯೆಯ ಹೊದಿಕೆಯಿಂದ ಇಂದು ಹೊರಗೆ ಬಂದಿದ್ದೇನೆ. ನಿಮ್ಮ ಅನುಗ್ರಹದಿಂದ ಕೃತಾರ್ಥನಾದೆ…

Advertisement

ಊರ್ವಶಿ ಎಂಬವಳು ದಂಬೋದ್ಬವ ಎಂಬ ಜೀವನಿಗೆ ಕತ್ತಲೆಯನ್ನು ಬೀರಿದಂತಹ ನಾರಾಯಣನ ಮಾಯೆ. ಯಾವ ತಾಯಿ ಹೆತ್ತ ಮಗಳು ಅವಳಲ್ಲ. ಕೇವಲ ನಿಮ್ಮ ಸಂಕಲ್ಪದಿಂದ ಹುಟ್ಟಿದ್ದು. ಮೋಹದ ಅಂಧಕಾರದಲ್ಲಿ ಕೆಡಹಿ ಅವಳ ಜನ್ಮಸ್ಥಾನವಾದಂತಹ ಪಿತೃವಿನ ಸನ್ನಿಧಾನಕ್ಕೆ ನನ್ನನ್ನು ಎಳೆತಂದದ್ದು. ಪ್ರಕೃತಿಯಾಗಲೀ, ಮಾಯೆಯಾಗಲೀ ಅವಳು ಯೋಗ ಮಾಯೆಯಾಗಿ ಜೀವನನ್ನು ಆಕರ್ಷಿಸಿದಳು ಎಂತಾದರೆ, ನಿಜವಾದ ಪಿತೃ ಸ್ಥಾನಕ್ಕೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುತ್ತಾಳೆ. ನರನಾರಾಯಣರೆಂಬ ಉಭಯರಿಗೆ ಹುಟ್ಟಿದಂತಹ ಮಗಳು ಅವಳು. ಇದು ನಿಮ್ಮ ಸಂಕಲ್ಪ. ನಿಮ್ಮ ಶುದ್ಧ ಸಂಕಲ್ಪದ ಆವರಣವೇ ಅವಳ ಮೈ ಆಗಿರುತ್ತದೆಯೇ ಹೊರತು ಶುಕ್ಲ ಶೋಣಿತ ಸಮ್ಮಿಶ್ರಣವಾದುದಲ್ಲ. ಆದ ಕಾರಣ ಅವಿದ್ಯಾ ರೂಪಿಣಿಯಾಗಿ ನನ್ನನ್ನು ಎಳೆದರೂ ಕೊನೆಗೆ ವಿದ್ಯಾರೂಪಿಣಿಯಾಗಿ ನಿಮ್ಮ ದರ್ಶನವನ್ನು ಮಾಡಿದ್ದರಿಂದ ಈ ಹೊತ್ತು ಒಂದು ಬಯಕೆ ಉಳಿದಿದೆ…. ಉಳಿದೊಂದು ಕವಚಕ್ಕೆ ಮಾರ್ಗ ಸೂಚಿಸಿ…..

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

Published by
ನಾ.ಕಾರಂತ ಪೆರಾಜೆ

Recent Posts

ಯೋಚಿಸಿ… ಚಿಂತನೆ ನಡೆಸಿ… ಮತದಾನ ಮಾಡಬೇಕು… | ಏಕೆ ಗೊತ್ತಾ….?

ಮತದಾನ ಏಕೆ ಮಾಡಬೇಕು, ಯೋಚಿಸಿ ಏಕೆ ಮತದಾನ ಮಾಡಲೇಬೇಕು..? ಈ ಬಗ್ಗೆ ಅಭಿಪ್ರಾಯ…

1 hour ago

ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ರಾಜ್ಯಕ್ಕೆ ಕೇಂದ್ರದಿಂದ(Central Govt) ಬರಬೇಕಾದ ಬರ ಪರಿಹಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ…

2 hours ago

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!

ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…

4 hours ago

ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ

ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…

5 hours ago

ರೈತರ ಪಾಲಿಗೆ ನೆರವಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : 17ನೇ ಕಂತಿನ ಹಣ ರೈತರ ಖಾತೆಗೆ ಯಾವಗ ಬರುತ್ತೆ..?

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌(PM Kisan) ಯೋಜನೆ ಆರಂಭವಾದಗಿಂದಲೂ ರೈತರ(Farmer) ಖಾತೆಗೆ ನೇರವಾಗಿ…

5 hours ago