Advertisement
ಯಕ್ಷಗಾನ : ಮಾತು-ಮಸೆತ

ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು….

Share

(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ದಂಬ’)
ಪ್ರಸಂಗ : ಸಹಸ್ರಕವಚ ಮೋಕ್ಷ

(ಸಂದರ್ಭ : ನರನಾರಾಯಣರೊಂದಿಗೆ ಹೋರಾಡಿ ಸೋತ ದಂಬನಿಗೆ ಜ್ಞಾನೋದಯ)

“.. ಅಹಂಕಾರಕ್ಕೆ ಎಷ್ಟು ಪೊದರುಗಳು. ಸಾಮಾನ್ಯ ಮೃಗಪಕ್ಷಿಗಳಿಗಿದ್ದಂತಹ ತಪೋಗುಣದ ಅಹಂಕಾರವೇ ಒಂದು ಪೊದರಾಗಿ ಪರಿಣಮಿಸುತ್ತದೆ; ಬಂಧನಕಾರಕವಾಗುತ್ತದೆ. ಸೌಂದರ್ಯವೂ ಬಂಧನಕಾರವಾಗುತ್ತದೆ. ಕ್ರೌರ್ಯವೂ ಬಂಧನಕಾರಕವಾಗುತ್ತದೆ. ರಾಜರು ಹುಲಿ, ಶಾರ್ದೂಲಾದಿಗಳನ್ನು ಬಂಧನದಲ್ಲಿ ಕಟ್ಟಿ ಹಾಕುತ್ತಾರೆ. ಕೋಗಿಲೆ, ಗಿಳಿ, ನವಿಲು.. ಇತ್ಯಾದಿ ಪ್ರಾಣಿಪಕ್ಷಿಗಳನ್ನು ಬಂಧಿಸುತ್ತಾರೆ… ನಾನು ನಾನಾಗಿ ನನ್ನ ಮೈಮೇಲೆ ಹಾಕಿಕೊಂಡ ಮುಸುಕುಗಳು ಎಷ್ಟು? ಒಂದೋ.. ಎರಡೋ… ಮೂರೋ.. ನೂರೋ… ಒಂಬೈನೂರ ತೊಂಭತ್ತೊಂಭತ್ತು. ಇದು ಕತ್ತಲೆಯ ಆವರಣಗಳು. ನಾನು ಎದ್ದು ಬಂದದ್ದೇ ವಿಚತ್ರ! ಬಹುಶಃ ನಮ್ಮದ್ದಾದ ವಿಭೂತಿಮತ್ತಾದ ಶಕ್ತಿ ವಿಶೇಷವದು.

ಆದರೆ ಒಂದು ವಿಶ್ವಾಸ. ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು. ಆದರೆ ಒಂದು ದೀಪ ಉರಿಸಿದರೆ ಅದರ ನಾಶಕ್ಕೆ ನೂರು ವರುಷ ಬೇಕಾಗುವುದಿಲ್ಲ. ಈಗ ನಿಮ್ಮಲ್ಲಿ ಹೋರಾಟ ಮಾಡಿದ್ದರಿಂದ ನಿಮ್ಮಿಂದ ಕಳಚಲ್ಪಟ್ಟಂತಹ ಕವಚಗಳು ಒಂಭೈನೂರ ತೊಂಭತ್ತ ಒಂಭತ್ತು ಹೋಗಿ ಈಗ ಕೇವಲ ಒಬ್ಬ ಜೀವ ಮಾತ್ರನಿಗೆ ಮೋಕ್ಷ ಸಾಧನೆಗೆ ಬೇಕಾದ ಮಾರ್ಗವೆಂಬಂತೆ ಒಂದೇ ಕವಚ ಉಳಿದಿದೆ. ಸೂರ್ಯನಿಂದ ಏನು ಅನುಗ್ರಹ ಪಡೆದರೇನು? ಸಾವಿರಾರು ವರುಷಗಳಿಂದ ‘ಪುನರಪಿ ಜನನಂ, ಪುನರಪಿ ಮರಣಂ’ ಕಾಮ, ಕಾಂಚನ, ಕೀರ್ತಿ.. ಹೀಗೆ ಹೊದಿಕೆಯೇ ತುಂಬಿದೆ. ಇಂತಹ ಮಾಯೆಯ ಹೊದಿಕೆಯಿಂದ ಇಂದು ಹೊರಗೆ ಬಂದಿದ್ದೇನೆ. ನಿಮ್ಮ ಅನುಗ್ರಹದಿಂದ ಕೃತಾರ್ಥನಾದೆ…

ಊರ್ವಶಿ ಎಂಬವಳು ದಂಬೋದ್ಬವ ಎಂಬ ಜೀವನಿಗೆ ಕತ್ತಲೆಯನ್ನು ಬೀರಿದಂತಹ ನಾರಾಯಣನ ಮಾಯೆ. ಯಾವ ತಾಯಿ ಹೆತ್ತ ಮಗಳು ಅವಳಲ್ಲ. ಕೇವಲ ನಿಮ್ಮ ಸಂಕಲ್ಪದಿಂದ ಹುಟ್ಟಿದ್ದು. ಮೋಹದ ಅಂಧಕಾರದಲ್ಲಿ ಕೆಡಹಿ ಅವಳ ಜನ್ಮಸ್ಥಾನವಾದಂತಹ ಪಿತೃವಿನ ಸನ್ನಿಧಾನಕ್ಕೆ ನನ್ನನ್ನು ಎಳೆತಂದದ್ದು. ಪ್ರಕೃತಿಯಾಗಲೀ, ಮಾಯೆಯಾಗಲೀ ಅವಳು ಯೋಗ ಮಾಯೆಯಾಗಿ ಜೀವನನ್ನು ಆಕರ್ಷಿಸಿದಳು ಎಂತಾದರೆ, ನಿಜವಾದ ಪಿತೃ ಸ್ಥಾನಕ್ಕೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುತ್ತಾಳೆ. ನರನಾರಾಯಣರೆಂಬ ಉಭಯರಿಗೆ ಹುಟ್ಟಿದಂತಹ ಮಗಳು ಅವಳು. ಇದು ನಿಮ್ಮ ಸಂಕಲ್ಪ. ನಿಮ್ಮ ಶುದ್ಧ ಸಂಕಲ್ಪದ ಆವರಣವೇ ಅವಳ ಮೈ ಆಗಿರುತ್ತದೆಯೇ ಹೊರತು ಶುಕ್ಲ ಶೋಣಿತ ಸಮ್ಮಿಶ್ರಣವಾದುದಲ್ಲ. ಆದ ಕಾರಣ ಅವಿದ್ಯಾ ರೂಪಿಣಿಯಾಗಿ ನನ್ನನ್ನು ಎಳೆದರೂ ಕೊನೆಗೆ ವಿದ್ಯಾರೂಪಿಣಿಯಾಗಿ ನಿಮ್ಮ ದರ್ಶನವನ್ನು ಮಾಡಿದ್ದರಿಂದ ಈ ಹೊತ್ತು ಒಂದು ಬಯಕೆ ಉಳಿದಿದೆ…. ಉಳಿದೊಂದು ಕವಚಕ್ಕೆ ಮಾರ್ಗ ಸೂಚಿಸಿ…..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

5 hours ago

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

14 hours ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

14 hours ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

14 hours ago

ರಾಜ್ಯಾದ್ಯಂತ ಆಹಾರ ಸುರಕ್ಷತೆ ಪರಿಶೀಲನೆಗೆ ದಾಳಿ ಮುಂದುವರಿಕೆ : ಉಲ್ಲಂಘನೆಗೆ ಕ್ಷಮೆಯಿಲ್ಲ ಎಂದ ಆರೋಗ್ಯ ಸಚಿವ

ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್‌, ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…

14 hours ago

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

1 day ago