ಕನಕಮಜಲು : ಕನಕಮಜಲು ಯುವಕಾರ್ಯ ಹಾಗು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಯುವಕಮಂಡಲ(ರಿ ) ಕನಕಮಜಲು ಇದರ ಆಶ್ರಯದಲ್ಲಿ ಹಿಂದಿ ದಿನಾಚರಣೆಯನ್ನು ಅಡ್ಕಾರು ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರದಲ್ಲಿ ನಡೆಸಲಾಯಿತು.
ಹಿಂದಿ ದಿನಾಚರಣೆಯ ಮಹತ್ವದ ಕುರಿತು ಆಂಗ್ಲ ಮಾಧ್ಯಮ ಪ್ರೌಡಶಾಲೆಯ ಮುಖ್ಯಗುರುಗಳಾದ ಎನ್ ಗೋಪಾಲ್ ರಾವ್ ಮಾತನಾಡಿ, ಹಿಂದಿಯು ನಮ್ಮ ರಾಷ್ಟ್ರೀಯ ಭಾಷೆ ನಾವು ಕನ್ನಡವನ್ನು ಯಾವರೀತಿ ಸರಾಗವಾಗಿ ಮಾತನಾಡ ಬಲ್ಲೆವೋ ಅದೇ ರೀತಿಯಲ್ಲಿ ಹಿಂದಿಯು ಕೂಡ ಅತೀ ಸುಲಭವಾಗಿ ಮಾತನಾಡಬಲ್ಲ ಭಾಷೆಯಾಗಿದೆ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಗೆ ಹಿಂದಿ ದೇಶಭಕ್ತಿಗೀತೆ, ಹಿಂದಿ ಪ್ರಬಂಧ ಸ್ಪರ್ಧೆಯನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕನಕಮಜಲು ಯುವಕಮಂಡಲದ ಅಧ್ಯಕ್ಷರು ಹಾಗು ಶಾಲಾ ಮುಖ್ಯ ಶಿಕ್ಷಕಾರದ ಜಯಪ್ರಸಾದ್ ಕಾರಿಂಜ, ಸಹಶಿಕ್ಷಕ ಶಶಿಧರ ಎಂ ಹಿಂದಿ ಶಿಕ್ಷಕಿ ದೀಪಶಂಕರಿ ಉಪಸ್ಥಿತರಿದ್ದರು.
ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…
ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿದ್ದು, ಸಾರ್ವಜನಿಕರ ಜೀವಹಾನಿ ತಪ್ಪಿಸಲು ಸರಕಾರ ಗರಿಷ್ಠ…
01.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…