ಗುತ್ತಿಗಾರು: ಕಮಿಲದ ಅಂಚೆ ಕಚೇರಿ ಬಳಿ ಚರಂಡಿಗೆ ಅಳವಡಿಸಲು ತಂದಿಟ್ಟಿದ್ದ ಮೋರಿಯನ್ನು ಬಾಂಧವ್ಯದ ಗೆಳೆಯರ ಬಳಗದ ವತಿಯಿಂದ ಶ್ರಮದಾನ ಮೂಲಕ ಅಳವಡಿಸಲಾಯಿತು. ಮಳೆಗಾಲಕ್ಕೂ ಮುನ್ನವೇ ಮೋರಿ ತಂದು ಹಾಕಲಾಗಿತ್ತು. ಆದರೆ ಚರಂಡಿಗೆ ಅಳವಡಿಸುವ ಕಾರ್ಯ ಮಾತ್ರಾ ಆಗಿರಲಿಲ್ಲ. ಹೀಗಾಗಿ ಅಂಚೆ ಕಚೇರಿಗೆ ತೆರಳುವ ವೃದ್ಧರು ಹಾಗೂ ಅಶಕ್ತರಿಗೆ ಸಮಸ್ಯೆಯಾಗುತ್ತಿತ್ತು. ಬಾಂಧವ್ಯ ಗೆಳೆಯರ ಬಳಗದ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ಮೋರಿ ಅಳವಡಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel