ಕರೋನಾ ವೈರಸ್ ತಡೆಯ ಸ್ವಯಂಸೇವಕನಾಗಬಹುದು | ಸರಕಾರದ ಜೊತೆ ಹೀಗೆ ಕೈಜೋಡಿಸಬಹುದು | ನೀವು ಆಸಕ್ತರೇ….

March 22, 2020
1:02 PM

ಮಂಗಳೂರು: ಕರೋನಾ ಭೀತಿ ಎಲ್ಲೆಡೆ ಹರಡಿದೆ. ಯುವಕರು ನಾವಾದರೆ , ವೈರಸ್ ತೊಲಗಿಸಿ ಈ ದೇಶದ ಜನರ ರಕ್ಷಣೆಯ ಜವಾಬ್ದಾರಿ ನಾವು ಹೊರುವವರಾದರೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ಅವಕಾಶ ಇದೆ. ರೆಡ್ ಕ್ರಾಸ್, ಕರ್ನಾಟಕ ಮತ್ತು ಡಿಐಪಿಆರ್ (ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರಕಾರ)  ಜೊತೆ ಕೈಜೋಡಿಸುವ ಮೂಲಕ ಕರೋನಾ ವಿರುದ್ಧ ಹೋರಾಡಲು  ಅವಕಾಶವಿದೆ. ಇಲ್ಲಿ

 ಹೇಗೆ ಸ್ವಯಂಸೇವಕನಾಗುವುದು?:

ಕರೋನಾ ವೈರಸ್ ತಡೆಯಲು ಈಗ ಭಯಗೊಳ್ಳುವುದರ ಬದಲಾಗಿ ಜಾಗೃತಿ ಅನಿವಾರ್ಯವಾಗಿದೆ. ಜನರಿಗೆ ಸೂಕ್ತ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಬೇಕಿದೆ. ಜನರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಭಯಗೊಳ್ಳುವುದರಿಂದ ವೈರಸ್ ಹರಡುವುದು  ತಡೆಯುವುದು  ಸಾದ್ಯವಿಲ್ಲ, ಬದಲಾಗಿ ಜಾಗೃತಗೊಳ್ಳುವುದು ಪರಿಹಾರ. ಹೀಗಾಗಿ ಯಾರೂ ನಾವು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕಾಗಿ ಹೋರಾಟ ಅಗತ್ಯ, ನಾಯಕತ್ವ ಅಗತ್ಯ. ಇಂತಹ ನಾಯಕನಾಗುವವರು ಸರಕಾರದ ಜೊತೆ ಕೈಜೋಡಿಸಬಹುದು. ಇಂತಹ   ಸೇವೆ ಸಲ್ಲಿಸಲು ಸ್ವಯಂಸೇವಕರಿಗೆ ವೇದಿಕೆ ನೀಡುವಲ್ಲಿ ಮಾಹಿತಿ ಮತ್ತು ಪ್ರಚಾರ ಇಲಾಖೆ (ಡಿಐಪಿಆರ್) ಭಾರತೀಯ ರೆಡ್‌ಕ್ರಾಸ್,  ಮತ್ತು ಕರ್ನಾಟಕ ರಾಜ್ಯ ಕಾರ್ಮಿಕ ಸಂಸ್ಥೆಯೊಂದಿಗೆ ಮುಂದೆ ಬಂದಿದೆ.  ಎರಡು ವಿಧದಲ್ಲಿ  ಕೆಲಸ ಮಾಡಬಹುದಾಗಿದೆ. ಮನೆಯಲ್ಲಿ  ಕುಳಿತು ಜಾಗೃತಿ ಮಾಡಬಹುದು, ಕಣದಲ್ಲಿ  ಇಳಿದು ಕೆಲಸ ಮಾಡಬಹುದು. ಇದಕ್ಕಿಂತಲೂ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ..

https://covid19.karnataka.gov.in/

ಮನೆಯಲ್ಲಿಯೇ ಕುಳಿತು ಇಂಟರ್ನೆಟ್ ಮೂಲಕ  ಕೆಲಸ ಮಾಡಬಹುದು. ವಿವಿಧ ಗ್ರೂಪು, ಯೂಟ್ಯೂಬ್ ಮೂಲಕ ಕಳಿಸುವ ಲಿಂಕ್ ಗಳ ಮೂಲಕ ಜಾಗೃತಿಗೊಳಿಸುವ ಕೆಲಸ ಮಾಡಬಹುದು.

ಕಣದಲ್ಲಿ  ಇಳಿದು ಕೆಲಸ ಮಾಡುವ ಸಂದರ್ಭ ಸ್ಥಳಗಳಿಗೆ ತೆರಳಿ ಪರಿಶೀಲನೆಯೂ ಇರುತ್ತದೆ. ಸುಳ್ಳು ಸುದ್ದಿ ಹರಡುವುದು  ತಡೆಯಲಾಗುತ್ತದೆ. ನಾಗರಿಕ ವರದಿಗಾರರಾಗಿ ಅಥವಾ ಸರ್ಕಾರಿ ಅಧಿಕಾರಿಯಾಗಿ ರೀತಿಯಲ್ಲಿ  ಕೆಲಸ ಮಾಡಬೇಕಾಗುತ್ತದೆ.

 

 

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಕ್ಷಣ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಿ – ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹ
June 22, 2026
2:27 PM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ
June 22, 2026
2:01 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆ – ದೇಶದ ಕೃಷಿಯ ಹೃದಯಭಾಗದಲ್ಲಿ ಮೋಡಗಳೇ ಇಲ್ಲ..!
June 22, 2026
1:27 PM
by: ದ ರೂರಲ್ ಮಿರರ್.ಕಾಂ
ಕೇರಳ ಬಜೆಟ್‌ನಲ್ಲಿ ರಬ್ಬರ್‌ ಬೆಳೆಗಾರರಿಗೆ ಬಂಪರ್‌ ಸಿಹಿ ಸುದ್ದಿ- ಬೆಂಬಲ ಬೆಲೆ ₹250ಕ್ಕೆ ಏರಿಕೆ
June 22, 2026
7:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror