Advertisement
ಸುದ್ದಿಗಳು

ಕಲೆಯಲ್ಲಿ ಹೊಸದೊಂದು ಅಪವಾದಕ್ಕೆ ಕಾರಣವಾದ “ಕಟೀಲು ಮೇಳ”

Share

ಮಂಗಳೂರು: ಕಟೀಲು ಮೇಳದಲ್ಲಿ  ಏನಾಗುತ್ತಿದೆ..? ಹೀಗೊಂದು ಚರ್ಚೆಯಾಗುತ್ತಿರುವಾಗಲೇ ಇದೀಗ ಹೊಸದೊಂದು ಅಪವಾದಕ್ಕೆ ಕಟೀಲು ಮೇಳ ಎಡೆಮಾಡಿಕೊಟ್ಟಿದೆ. ಇದುವರೆಗಿನ ತಿಳಿದ ಇತಿಹಾಸದಲ್ಲಿ ಕಲಾವಿದನೊಬ್ಬನನ್ನು ರಂಗಸ್ಥಳದಿಂದ ಅರ್ಧದಿಂದ ಇಳಿಸಿದ ಉದಾಹರಣೆಯೇ ಇಲ್ಲ. ಹೀಗಿರುವಾಗ ಮೇಳದಲ್ಲಿ  ಹೊಸದೊಂದು ಅಪವಾದ ಸೃಷ್ಟಿಸಿದ್ದು ಹರಕೆಯಾಟ ಆಡಿಸುವ ಭಕ್ತಾದಿಗಳೂ ಚರ್ಚೆ ಮಾಡುವುದಕ್ಕೆ ಆರಂಭ ಮಾಡಿದ್ದಾರೆ. ಹಾಗಿದ್ದರೆ ಈ ಚರ್ಚೆಗೆ ಕಾರಣವಾದ್ದು ಯಾವುದು ?

ನ.22 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 6 ಯಕ್ಷಗಾನ ಮೇಳಗಳ 2019 -2020 ಸಾಲಿನ ತಿರುಗಾಟಕ್ಕೆ ಚಾಲನೆ ನೀಡಲಾಗಿತ್ತು. ಅಂದು ಅಲ್ಲಿ ಆರು ಮೇಳದ ಕಲಾವಿದರೂ ಯಕ್ಷಗಾನದಲ್ಲಿ ಭಾಗವಹಿಸುತ್ತಾರೆ ಮತ್ತು ಮೇಳದ ಎಲ್ಲಾ ಭಾಗವತರು ಭಾಗವತಿಕೆ ನಡೆಸುವುದು ಅಲ್ಲಿ ನಿರಂತರವಾಗಿ ನಡೆದು ಬರುತ್ತಿರುವ ಸಂಪ್ರದಾಯ. ಶುಕ್ರವಾರವೂ ಆರು ಭಾಗವತರು ಭಾಗವತಿಕೆ ಮುಗಿಸಿದ್ದು, ಬಳಿಕ ಪುತ್ತೂರಿನ ರಮೇಶ್ ಭಟ್ ಅವರು ಭಾಗವತಿಕೆ ನಡೆಸುತ್ತಿದ್ದರು. ಆ ಸಂದರ್ಭ ಭಾಗವತಿಕೆ ಮಾಡಲು ಪಟ್ಲ ಸತೀಶ್ ಶೆಟ್ಟಿಯವರು ರಂಗ ಸ್ಥಳಕ್ಕೆ ಬಂದಿದ್ದು, ರಮೇಶ್ ಭಟ್ ಅವರು ಪಟ್ಲರಿಗೆ ಭಾಗವತಿಕೆ ನಡೆಸಲು ಅವಕಾಶ ಮಾಡಿ ವೇದಿಕೆ ಬಿಟ್ಟು ಕೊಟ್ಟರು. ಆ ಸಂದರ್ಭ ಬಂದ ಮೇಳದ ವ್ಯವಸ್ಥಾಪಕ ಹಾಗೂ ಅವರ ತಂಡ ಸತೀಶ್ ಶೆಟ್ಟಿ ಪಟ್ಲ ಅವರನ್ನು ಭಾಗವತಿಕೆ ಮಾಡದಂತೆ ತಿಳಿಸಿ ರಂಗ ಸ್ಥಳದಿಂದ ಹೊರನಡೆಯುವಂತೆ ತಿಳಿಸಿದರು ಎನ್ನಲಾಗಿದೆ. ಇಷ್ಟಾಗುವ ವೇಳೆಗೆ ರಾತ್ರಿ 1.30. ಈ ಮೂಲಕ ಯಕ್ಷಲೋಕದಲ್ಲಿ  ಪ್ರಥಮ ಬಾರಿಗೆ ಇಂತಹದ್ದೊಂದು ಅಪವಾದಕ್ಕೆ ಕಟೀಲು ಮೇಳ ಸಾಕ್ಷಿಯಾಯಿತು.

ಪಟ್ಲ ಸತೀಶ್ ಶೆಟ್ಟಿ

 

ಮೇಳದ ತಿರುಗಾಟ ಆರಂಭ ಹಿನ್ನೆಲೆ ದೇಗುಲ ಆವರಣದಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು. ಈ ಹಿಂದೆ ಕಟೀಲು ಮೇಳದ ವಿವಾದವು ಹೈಕೋರ್ಟ್ ಮೆಟ್ಟಿಲೇರಿತ್ತು. ಇಲ್ಲಿ ಮೇಲದ ಯಜಮಾನ ಹಾಗೂ ಕಲಾವಿದರ ನಡುವೆ ವಿವಾದ ಇತ್ತು.  ಎರಡು ದಿನಗಳ ಹಿಂದಷ್ಟೇ ತೀರ್ಪು ಪ್ರಕಟವಾಗಿತ್ತು. ಮೇಳದ ಕಲಾವಿದರ ಪರವಾಗಿ ತೀರ್ಪು ಪ್ರಕಟವಾಗಿತ್ತು .ಇದನ್ನು ಪ್ರಶ್ನಿಸಿ ದೇವಸ್ಥಾನದ ಆಡಳಿತ ಮೊಕ್ತೇಸರರು ಕೋರ್ಟ್ ಮೆಟ್ಟಿಲು ಏರಿದ್ದರು. ಎರಡು ದಿನಗಳ ಹಿಂದೆ ಇದರ ಬಗ್ಗೆ ಕೋರ್ಟ್ ಮದ್ಯಂತರ ಆದೇಶ ಜಾರಿ ಮಾಡಿದ್ದು ಸದ್ಯ ಮೇಳಗಳು ಯಥಾ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕು ,ಮೇಳದ ಲೆಕ್ಕಪತ್ರಗಳ ಬಗ್ಗೆ ದಕ ಜಿಲ್ಲಾಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಆದೇಶ ನೀಡಿತ್ತು .

ಕಲಾವಿದರ  ಹಿಂದೆ ಪಟ್ಲ ಸತೀಶ್ ಶೆಟ್ಟಿಯವರು ಇದ್ದಾರೆ ಎಂಬ ಆಧಾರ ರಹಿತ ಅಪವಾದದ ಕಾರಣದಿಂದ ಹೀಗ ಅಪಮಾನ ಮಾಡಿದ್ದಾರೆ ಎಂದು ಸಾರ್ವಜನರಿಕರು  ಹೇಳುತ್ತಾರೆ. ಇದರಿಂದಾಗಿ ಕಲೆಗೆ ಹಾಗೂ ಯಕ್ಷಗಾನ ಲೋಕಕ್ಕೆ ಅಪಮಾನವಾಗಿದೆ ಎಂದು ಹಿರಿಯ ಕಲಾವಿದರು ನೋವು ತೋಡಿಕೊಳ್ಳುತ್ತಾರೆ. ಯಾವುದೇ ಜಗಳ ಇದ್ದರೂ ರಂಗಸ್ಥಳದಲ್ಲಿ  ತೋರಿಸಬಾರದು ಎಂಬುದು  ಹಿರಿಯ ಕಲಾವಿದರ ಅಭಿಪ್ರಾಯ.ಒಂದು ವೇಳೆ ಸತೀಶ್ ಪಟ್ಲ ಅವರನ್ನು  ಈ ಬಾರಿ ಕೈಬಿಡುವುದಾದರೆ ಮೊದಲೇ ಹೇಳಬೇಕಾಗಿತ್ತು. ರಂಗಸ್ಥಳಕ್ಕೆ ಬಂದ ಬಳಿಕ ಅಪಮಾನ ಸರಿಯಲ್ಲ ಎಂಬುದು ಹಿರಿಯ ಕಲಾವಿದರ ಅಭಿಪ್ರಾಯ.

ಇದೀಗ ಪಟ್ಲ ಅಭಿಮಾನಿಗಳು ಪಟ್ಲ ಫೌಂಡೇಶನ್ ವತಿಯಿಂದ ಸಭೆ ನಡೆಸಲಾಗುತ್ತಿದ್ದು  ಸಂಜೆ 4-00 ಗಂಟೆಗೆ ಹೋಟೆಲ್ ಜನತಾ ಡಿಲೆಕ್ಸ್ ಸಭಾಂಗಣದಲ್ಲಿ ಸಭೆ ನಡೆಯಲಿದೆ, ಮುಂದೆ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ.

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಘವೇಶ್ವರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…

5 hours ago

ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಾವಕಾಶ : ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ

ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ…

5 hours ago

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…

23 hours ago

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

1 day ago

ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…

1 day ago

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

2 days ago