ಕಳಂಜ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

August 28, 2019
11:00 AM

ಬೆಳ್ಳಾರೆ: ಕಳಂಜ ಗ್ರಾಮ ಪಂಚಾಯತ್ ನ  2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಅಧ್ಯಕ್ಷತೆಯೊಂದಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಾಮಾಜಿಕ ಲೆಕ್ಕ ಪರಿಶೋಧನಾ ತಾಲೂಕು ಸಂಯೋಜನಾಧಿಕಾರಿ ರೋಹಿತ್ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಕೇಂದ್ರ ಸರ್ಕಾರದ ಅತೀ ದೊಡ್ಡ ಯೋಜನೆ ಇದಾಗಿದೆ. ನರೇಗಾ ಯೋಜನೆಯ ಫಲವನ್ನು ಗರಿಷ್ಠ ಮಟ್ಟದಲ್ಲಿ ಗ್ರಾಮದ ಜನರು ಬಳಸಿಕೊಳ್ಳಬೇಕು ಎಂದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ್ ಕೆ.ಆರ್ ಮಾಹಿತಿ ನೀಡುತ್ತಾ 2019-20ನೇ ಸಾಲಿನಲ್ಲಿ ಸರಕಾರದಿಂದ ದೊರೆಯುವ ಅನುದಾನದ ಪಟ್ಟಿ ವಾಚಿಸುತ್ತಾ ಬಾವಿ ನಿರ್ಮಾಣಕ್ಕೆ 1 ಲಕ್ಷದ 28 ಸಾವಿರ ರೂಪಾಯಿ, ಜಲಮರುಪೂರಣ ಘಟಕ ನಿರ್ಮಾಣಕ್ಕೆ 22 ಸಾವಿರ ರೂಪಾಯಿ, ದನದ ಹಟ್ಟಿ ನಿರ್ಮಾಣಕ್ಕೆ 23 ಸಾವಿರ ರೂಪಾಯಿ, ಕೃಷಿಹೊಂಡ ನಿರ್ಮಾಣಕ್ಕೆ 85ಸಾವಿರ ರೂಪಾಯಿ, ಆಡು ಮತ್ತು ಕುರಿ ಶೆಡ್ ನಿರ್ಮಾಣಕ್ಕೆ 19600 ರೂಪಾಯಿ, ಕೋಳಿ ಶೆಡ್ ನಿರ್ಮಾಣಕ್ಕೆ 50 ಸಾವಿರ ರೂಪಾಯಿ, ಶೌಚಾಲಯ ನಿರ್ಮಾಣಕ್ಕೆ 12 ಸಾವಿರ ರೂಪಾಯಿ ದೊರೆಯವುದೆಂದು ಹೇಳಿದರು.
ತೋಟಗಾರಿಕಾ ತಾಂತ್ರಿಕ ಸಹಾಯಕಿ ನಿಶಾ ಮಾಹಿತಿ ನೀಡುತ್ತಾ ಅಡಿಕೆ ಪುನಶ್ಚೇತನಕ್ಕೆ ಹಾಗು ಬಾಳೆಕೃಷಿಗೆ ಇಲಾಖೆಯಿಂದ ಸಹಕಾರವಿದೆ ಎಂದರು. ಅಡಿಕೆ ಒಂದು ಗುಂಡಿ 2.30 ಫೀಟು ಉದ್ದ ಅಗಲ ಇದ್ದರೆ 310 ರೂಪಾಯಿಗಳಂತೆ, 3ಫೀಟು ಉದ್ದ ಮತ್ತು ಅಗಲದ ತೆಂಗು ಗುಂಡಿಯೊಂದಕ್ಕೆ 310 ರೂಪಾಯಿಗಳಂತೆ, 1.30 ಫೀಟು ಆಳದ ಕಾಳು ಮೆಣಸು ಗುಂಡಿಗೆ 50ರೂಪಾಯಿ, ವೀಳ್ಯದೆಲೆಗೆ 40ರೂಪಾಯಿ, ಗೇರು ಕೃಷಿಯಲ್ಲಿ 3ಫೀಟು ಉದ್ದ ಮತ್ತು ಅಗಲದ ಗುಂಡಿಯೊಂದಕ್ಕೆ 70ರೂಪಾಯಿಯಂತೆ ಇಲಾಖೆಯಿಂದ ನೀಡಲಾಗುವುದು ಎಂದರು.

Advertisement
Advertisement

ವೇದಿಕೆಯಲ್ಲಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ .ಎಂ, ಸದಸ್ಯರಾದ ಲಕ್ಷ್ಮೀಶ ಕಜೆಮೂಲೆ, ಸೌಮ್ಯ.ಕೆ ಉಪಸ್ಥಿತರಿದ್ದರು.

ಪಿಡಿಒ ಶ್ರೀಧರ್ ಕೆ.ಆರ್ ಸ್ವಾಗತಿಸಿ ವಂದಿಸಿದರು. ದಿವ್ಯ ವರದಿ ವಾಚಿಸಿದರು. ಜಯರಾಮ್ ನಿರೂಪಿಸಿದರು.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24-05-2025 | ರಾಜ್ಯದಾದ್ಯಂತ ಮುಂಗಾರು ಮಳೆ ಆರಂಭ | ಜೂನ್‌ 2 ರಿಂದ ಅಲ್ಪ ಅವಧಿಯ ಬಿಡುವು ಪಡೆಯುವ ಸಾಧ್ಯತೆ
May 24, 2025
9:23 PM
by: ಸಾಯಿಶೇಖರ್ ಕರಿಕಳ
ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ | ಇಂದಿನಿಂದಲೇ ಮುಂಗಾರು ಆರಂಭ | 8 ದಿನ ಮುಂಚಿತವಾಗಿ ಆರಂಭವಾದ ಮಳೆಗಾಲ |
May 24, 2025
4:43 PM
by: ಮಹೇಶ್ ಪುಚ್ಚಪ್ಪಾಡಿ
ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ
May 24, 2025
11:10 AM
by: ದ ರೂರಲ್ ಮಿರರ್.ಕಾಂ
50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18
May 24, 2025
10:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group