ಸುಳ್ಯ: ಸರಳಿಕುಂಜದಲ್ಲಿರುವ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ಭಾನುವಾರ ಸುಳ್ಯ ಹವ್ಯಕ ವಲಯ ದ ವತಿಯಿಂದ ಸಂಧ್ಯಾ ಕುಮಾರ್ ಉಬರಡ್ಕ ಅವರ ಸ್ವರಚಿತ ಕವನ ಸಂಕಲನ ‘ಉಷಾಕಿರಣ’ದ ಬಿಡುಗಡೆ ಸಮಾರಂಭವು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಕುಮಾರ್ ಭಟ್ ವಹಿಸಿದ್ದರು. ಕವನ ಸಂಕಲನ ಬಿಡುಗಡೆ ಮಾಡಿದ ತಾಲುಕು ಕಸಾಪ ಅಧ್ಯಕ್ಷ ಡಾ| ಹರಪ್ರಸಾದ ತುದಿಯಡ್ಕ ಮಾತನಾಡಿ ಕವನ ಸಂಕಲನಕ್ಕೆ ಶುಭ ಹಾರೈಸಿ ಸಾಹಿತ್ಯಾಸಕ್ತರನ್ನು ಹುರಿದುಂಬಿಸಿದರು.
ಪ್ರಧಾನ ಭಾಷಣಕಾರರಾದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಉಪನ್ಯಾಸಕ ರಾಧೇಶ್ ತೋಳ್ಪಾಡಿ, ‘ಉಷಾಕಿರಣ’ದ ಕವನಗಳ ಕಿರುಚಿತ್ರಣ ನೀಡಿ, ವಿಮರ್ಶಿಸಿ ,ಶುಭ ಹಾರೈಸಿದರು. ಮೈತ್ರಿ ಯು. ಇವರು ‘ಉಷಾಕಿರಣ’ ಕವನ ಸಂಕಲನದಿಂದ ಆಯ್ದ ಎರಡು ಕವನಗಳನ್ನು ರಾಗಬದ್ಧವಾಗಿ ಹಾಡಿದರು.
ಮುಖ್ಯ ಅತಿಥಿಗಳಾದ ಪ್ರೊ| ಟಿ. ಶ್ರೀಕೃಷ್ಣಭಟ್ ಕವನ ಸಂಕಲನಕ್ಕೆ ಶುಭ ಕೋರಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕಿ ಸಂಧ್ಯಾ ಕುಮಾರ್ ಉಪಸ್ಥಿತರಿದ್ದರು.
ಶ್ರುತಿ ಯು. ಪ್ರಾರ್ಥಿಸಿದರು. ವಿಷ್ಣು ಕಿರಣ ನೀರಬಿದ್ರೆ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ಶಿವ ನಿವಾಸ ವಂದಿಸಿದರು. ಶ್ರುತಿ ಹಾಗೂ ಪ್ರೀತಿ ಯು ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…
ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…
ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…
ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದಲ್ಲಿ ಸುಮಾರು 30…