ಸುಳ್ಯ: ಸರಳಿಕುಂಜದಲ್ಲಿರುವ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ಭಾನುವಾರ ಸುಳ್ಯ ಹವ್ಯಕ ವಲಯ ದ ವತಿಯಿಂದ ಸಂಧ್ಯಾ ಕುಮಾರ್ ಉಬರಡ್ಕ ಅವರ ಸ್ವರಚಿತ ಕವನ ಸಂಕಲನ ‘ಉಷಾಕಿರಣ’ದ ಬಿಡುಗಡೆ ಸಮಾರಂಭವು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಕುಮಾರ್ ಭಟ್ ವಹಿಸಿದ್ದರು. ಕವನ ಸಂಕಲನ ಬಿಡುಗಡೆ ಮಾಡಿದ ತಾಲುಕು ಕಸಾಪ ಅಧ್ಯಕ್ಷ ಡಾ| ಹರಪ್ರಸಾದ ತುದಿಯಡ್ಕ ಮಾತನಾಡಿ ಕವನ ಸಂಕಲನಕ್ಕೆ ಶುಭ ಹಾರೈಸಿ ಸಾಹಿತ್ಯಾಸಕ್ತರನ್ನು ಹುರಿದುಂಬಿಸಿದರು.
ಪ್ರಧಾನ ಭಾಷಣಕಾರರಾದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಉಪನ್ಯಾಸಕ ರಾಧೇಶ್ ತೋಳ್ಪಾಡಿ, ‘ಉಷಾಕಿರಣ’ದ ಕವನಗಳ ಕಿರುಚಿತ್ರಣ ನೀಡಿ, ವಿಮರ್ಶಿಸಿ ,ಶುಭ ಹಾರೈಸಿದರು. ಮೈತ್ರಿ ಯು. ಇವರು ‘ಉಷಾಕಿರಣ’ ಕವನ ಸಂಕಲನದಿಂದ ಆಯ್ದ ಎರಡು ಕವನಗಳನ್ನು ರಾಗಬದ್ಧವಾಗಿ ಹಾಡಿದರು.
ಮುಖ್ಯ ಅತಿಥಿಗಳಾದ ಪ್ರೊ| ಟಿ. ಶ್ರೀಕೃಷ್ಣಭಟ್ ಕವನ ಸಂಕಲನಕ್ಕೆ ಶುಭ ಕೋರಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕಿ ಸಂಧ್ಯಾ ಕುಮಾರ್ ಉಪಸ್ಥಿತರಿದ್ದರು.
ಶ್ರುತಿ ಯು. ಪ್ರಾರ್ಥಿಸಿದರು. ವಿಷ್ಣು ಕಿರಣ ನೀರಬಿದ್ರೆ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ಶಿವ ನಿವಾಸ ವಂದಿಸಿದರು. ಶ್ರುತಿ ಹಾಗೂ ಪ್ರೀತಿ ಯು ಕಾರ್ಯಕ್ರಮ ನಿರೂಪಿಸಿದರು.
ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…
2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…
ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…