ಸುಳ್ಯ: ಸರಳಿಕುಂಜದಲ್ಲಿರುವ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ಭಾನುವಾರ ಸುಳ್ಯ ಹವ್ಯಕ ವಲಯ ದ ವತಿಯಿಂದ ಸಂಧ್ಯಾ ಕುಮಾರ್ ಉಬರಡ್ಕ ಅವರ ಸ್ವರಚಿತ ಕವನ ಸಂಕಲನ ‘ಉಷಾಕಿರಣ’ದ ಬಿಡುಗಡೆ ಸಮಾರಂಭವು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಕುಮಾರ್ ಭಟ್ ವಹಿಸಿದ್ದರು. ಕವನ ಸಂಕಲನ ಬಿಡುಗಡೆ ಮಾಡಿದ ತಾಲುಕು ಕಸಾಪ ಅಧ್ಯಕ್ಷ ಡಾ| ಹರಪ್ರಸಾದ ತುದಿಯಡ್ಕ ಮಾತನಾಡಿ ಕವನ ಸಂಕಲನಕ್ಕೆ ಶುಭ ಹಾರೈಸಿ ಸಾಹಿತ್ಯಾಸಕ್ತರನ್ನು ಹುರಿದುಂಬಿಸಿದರು.
ಪ್ರಧಾನ ಭಾಷಣಕಾರರಾದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಉಪನ್ಯಾಸಕ ರಾಧೇಶ್ ತೋಳ್ಪಾಡಿ, ‘ಉಷಾಕಿರಣ’ದ ಕವನಗಳ ಕಿರುಚಿತ್ರಣ ನೀಡಿ, ವಿಮರ್ಶಿಸಿ ,ಶುಭ ಹಾರೈಸಿದರು. ಮೈತ್ರಿ ಯು. ಇವರು ‘ಉಷಾಕಿರಣ’ ಕವನ ಸಂಕಲನದಿಂದ ಆಯ್ದ ಎರಡು ಕವನಗಳನ್ನು ರಾಗಬದ್ಧವಾಗಿ ಹಾಡಿದರು.
ಮುಖ್ಯ ಅತಿಥಿಗಳಾದ ಪ್ರೊ| ಟಿ. ಶ್ರೀಕೃಷ್ಣಭಟ್ ಕವನ ಸಂಕಲನಕ್ಕೆ ಶುಭ ಕೋರಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕಿ ಸಂಧ್ಯಾ ಕುಮಾರ್ ಉಪಸ್ಥಿತರಿದ್ದರು.
ಶ್ರುತಿ ಯು. ಪ್ರಾರ್ಥಿಸಿದರು. ವಿಷ್ಣು ಕಿರಣ ನೀರಬಿದ್ರೆ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ಶಿವ ನಿವಾಸ ವಂದಿಸಿದರು. ಶ್ರುತಿ ಹಾಗೂ ಪ್ರೀತಿ ಯು ಕಾರ್ಯಕ್ರಮ ನಿರೂಪಿಸಿದರು.
ಗುತ್ತಿಗಾರಿನಲ್ಲಿ ‘ಮಾನ್ಸೂನ್ ಕಲರ್ಸ್’ ಜಲವರ್ಣ ಚಿತ್ರಕಲಾ ಶಿಬಿರ ನಡೆಯುತ್ತಿದೆ. ಮಲೆನಾಡಿನ ನಿಸರ್ಗ ಸೌಂದರ್ಯವನ್ನು…
ಗೋಮಯವನ್ನು ಶುದ್ಧ ಇಂಧನ ಹಾಗೂ ಸಾವಯವ ಗೊಬ್ಬರವಾಗಿ ಬಳಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉತ್ತರ…
ಬ್ರೆಜಿಲ್ನಲ್ಲಿ ಮಳೆಯಿಂದ ಕಾಫಿ ಕೊಯ್ಲು ವಿಳಂಬವಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ…
ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…