ಕಾಣಿಯೂರು : ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿ ಗೌತಮ್ (15) ಶವ ಕಾಲೇಜಿನ ಪಕ್ಕದ ದೊಡ್ಡದಾದ ಇಂಗು ಗುಂಡಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.
ಚಾರ್ವಾಕ ಗ್ರಾಮದ ಬೊಮ್ಮೊಳಿಕೆ ನಿವಾಸಿ ಲಕ್ಷ್ಮಣ ಗೌಡರ ಪುತ್ರ ಗೌತಮ್ ನೀರಿಗೆ ಸ್ನಾನಕ್ಕೆ ಇಳಿದು ಈ ದುರ್ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವಿತ್ತು. ಬೆಳಿಗ್ಗೆಯಿಂದ ಸಂಜೆ 3.30 ರ ತನಕ ಕಾರ್ಯಕ್ರಮ ನಡೆದಿತ್ತು ಈ ಮಧ್ಯೆ ಈತ ಹೊರ ಬಂದು ವಿಶಾಲ ಹಾಗೂ ಆಳವಿರುವ ಇಂಗು ಗುಂಡಿಗೆ ಇಳಿದಿರಬಹುದೆಂದು ಶಂಕಿಸಲಾಗಿದೆ. ಈತ ಸಂಜೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಮನೆಯವರು ಹಾಗೂ ನೆರೆಹೊರೆಯವರು ಹುಡುಕಾಟ ಶುರು ಮಾಡಿಕೊಂಡಿದ್ದಾರೆ.
ನೆರೆಯ ಗಣೇಶ್ ಉದನಡ್ಕ ಹಾಗೂ ಇತರರು ಕಾಲೇಜಿಗೆ ಬಂದು ಸುತ್ತ ಹುಡುಕಾಟ ನಡೆಸಿದ್ದಾರೆ. ಇಂಗು ಗುಂಡಿಯ ಬಳಿ ಬಂದಾಗ ಬಾಲಕನ ಪ್ಯಾಂಟ್, ಶರ್ಟ್ ಚಪ್ಪಲಿ ಕಂಡು ಬಂತು, ಪ್ಯಾಂಟ್ ಜೇಬಿನಲ್ಲಿ ಆತನ ಬಸ್ ಪಾಸ್ ಪತ್ತೆಯಾಯಿತು. ತಕ್ಷಣ ಬೆಳ್ಳಾರೆ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ ಗ್ರಾಮಸ್ಥರು , ಪೋಲೀಸರ ಆಗಮನದ ಬಳಿಕ ಸ್ಥಳೀಯರೊಬ್ಬರು ಇಂಗು ಗುಂಡಿಗೆ ಇಳಿದು ಜಾಲಾಡಿದಾಗ ಬಾಲಕನ ಶವ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಪೋಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ. ಬೆಳ್ಳಾರೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ದೇಶದಲ್ಲಿ ರಬ್ಬರ್ ಉತ್ಪಾದನೆ ಹೆಚ್ಚಳದ ನಡುವೆ ಇದೀಗ ರಬ್ಬರ್ ಆಮದು ನೀತಿಯು ರಬ್ಬರ್…
ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ…
ಸುಳ್ಯದ ಬಹುತೇಕ ಪ್ರದೇಶ ಅರಣ್ಯದಿಂದ ಕೂಡಿದೆ. ಮಲೆನಾಡು ತಪ್ಪಲು ಪ್ರದೇಶವಾದ್ದರಿಂದ ಮಳೆಯೂ ಹೆಚ್ಚು,…
ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆಯ ಕಾರಣದಿಂದ ಮುಂಗಾರು ಸ್ವಲ್ಪ ಚುರುಕಾಗಿದ್ದು,…
ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಕ್ವಿಂಟಾಲ್ಗೆ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ…
ಒಬ್ಬರಿಂದೊಬ್ಬರು ಕಾಲೆದುಕೊಂಡರೆ ಹೇಗಾದೀತು..? ಇದರ ಬದಲಾಗಿ ನೆರವಾಗುವ ಸಂದೇಶ ಹರಿಡಿದರೆ ಹೇಗೆ.. ಈ…