Advertisement
ನಮ್ಮೂರ ಸುದ್ದಿ

ಕಾಮಗಾರಿ ಪ್ರಾರಂಭವಾಗಿ ವರ್ಷವಾದರೂ ಪೂರ್ತಿಯಾಗಿಲ್ಲ …! ಇದೆಂತ ಪಂಚವಾರ್ಷಿಕ ಯೋಜನೆಯಾ ಮಾರಾಯ್ರೆ….!

Share

ಮಡಪ್ಪಾಡಿ: ಒಂದು ಸಣ್ಣ ಸೇತುವೆ ನಿರ್ಮಾಣ. ಅಂದಾಜು ಒಂದು ವರ್ಷ ಆಯ್ತು ಮಾರಾಯ್ರೆ ಶುರು ಮಾಡಿ. ಇನ್ನೂ ಮುಗೀಲಿಲ್ಲ..!. ಯಾರೂ ಕೇಳುವವರು ಇಲ್ವಾ ? ಇಂಜಿನಿಯರ್ ಅಂತ ಇದ್ದಾರಾ ಇದಕ್ಕೆ ? ಬಿಲ್ ಪಾಸ್ ಆಗುತ್ತಾ ಹೀಗಾದರೆ ? ಜನರಿಂದ ಆಯ್ಕೆಯಾದವರೂ ಇದನ್ನು ನೋಡೋದಿಲ್ವಾ ? ಅಷ್ಟೂ ಅಲ್ಲ, ಇದೆಂತ ಪಂಚ ವಾರ್ಷಿಕ ಯೋಜನೆಯಾ ? ಹೀಗೆಲ್ಲಾ ಪ್ರಶ್ನೆ ಬರುವುದು  ಮಡಪ್ಪಾಡಿಯಲ್ಲಿ.

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ಹೋಗುವ ರಸ್ತೆ ಇದು. ಇದರ ಕತೆ ಹೇಳುವಾಗಲೇ ಇಲ್ಲೊಂದು ಸೇತುವೆ ಬರುತ್ತದೆ. ಮಳೆಗಾಲ ಕಷ್ಟವಾಗುತ್ತೆ ಸಾಗಲು ಅಂತ ಸೇತುವೆ ಮಂಜೂರಾಯ್ತು. ಅದು ಬಾಜಿನಡ್ಕ  ತೋಡಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಅದು. ಸರಿ ಸುಮಾರು ಒಂದು ವರ್ಷವಾಗಿರಬಹುದು ನಿರ್ಮಾಣ ಮಾಡಲು ಶುರು ಮಾಡಿ. ಇಂದಿಗೂ ಕಬ್ಬಿಣ ಮೇಲೆ ಕಾಣುತ್ತಿದೆ, ಕಾಂಕ್ರೀಟ್ ಕೆಲಸ ಮುಗಿದಿಲ್ಲ. ಇನ್ನೀಗ ಮಳೆಗಾಲ ಆರಂಭವಾಗುತ್ತದೆ, ಮಳೆ ಆರಂಭವಾದ ಮೇಲೆ ಹೇಗೆ ಕೆಲಸ ಮಾಡುವುದು  ಇತ್ಯಾದಿ ಪ್ರಶ್ನೆಗಳೆಲ್ಲಾ ಜನರಿಗೆ ಇದೆ. ಆದರೆ ಇದು  ಅಧಿಕಾರಿಗಳಿಗೆ  ಈ ಪ್ರಶ್ನೆ ಬರೋದಿಲ್ವಾ ಎಂಬುದು ಪ್ರಶ್ನೆ.

 

 

ಇಲ್ಲಿ ಅನುದಾನದ ಕೊರತೆ ಇದೆಯೇ ಅಥವಾ ಗುತ್ತಿಗೆದಾರರಿಗೆ ಬೇರೆ ಕಡೆ ಕೆಲಸ ಇದೆಯೇ ಅದೆಲ್ಲಾ ಎರಡನೆಯದು. ಒಂದು ಕೆಲಸ ಆರಂಭವಾಗುವ ಮುನ್ನವೇ ಅನುದಾನದ ವ್ಯವಸ್ಥೆಯೂ ಆಗದೇ ಇದ್ದರೆ ಎಲ್ಲಾ ಕಾಮಗಾರಿಗಳೂ ಇದೇ ಮಾದರಿಯಾಗಿ ಇದ್ದ ಹಣವೂ ಪೋಲಾಗುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನಹರಿಸಲೇಬೇಕು, ಏಕೆಂದರೆ ಇದು ಜನರ ದುಡ್ಡು. ಇನ್ನೊಂದು ಪ್ರಮುಖ ಅಂಶವೆಂದರೆ ಕಾಂಕ್ರೀಟ್ ಹಾಕಲು ಸಿದ್ಧವಾಗಿರುವ ಕಬ್ಬಿಣದ ರಾಡ್ ಮಳೆಗಾಲದಲ್ಲಿ ತುಕ್ಕು ಹಿಡಿದರೆ ನಂತರ ಕಾಮಗಾರಿ ಗುಣಮಟ್ಟದಿಂದ ಕೂಡಿರಬಹುದೇ ? ಕಬ್ಬಿಣದ ರಾಡ್ ಮುಂದೆ ಅಪಾಯವೂ ತರಬಲ್ಲುದಲ್ಲೇ ? ಹೀಗೆಲ್ಲಾ ಅತ್ಯಂತ ಬೇಸಿಕ್ ಪ್ರಶ್ನೆ ಜನರು ಕೇಳುತ್ತಾರೆ. ಇದೆಲ್ಲಾ  ಆ ಇಲಾಖೆಗೆ ತಿಳಿಯುವುದಿಲ್ವೇ ಎಂದು ಜನ ಕೇಳುತ್ತಾರೆ.

 

ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ಹೋಗುವ ಬಾಜಿನಡ್ಕ ತೋಡಿಗೆ ನಿರ್ಮಾಣವಾಗುತ್ತಿರುವ ಕೆಲಸ ಸೇತುವೆ ಬೇಗನೆ ಮುಗಿಯಬೇಕು ಎನ್ನುತ್ತಾರೆ ಸ್ಥಳೀಯರಾದ ಜಯಂತ್ ದೇವಸ್ಯ.

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

3 hours ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

4 hours ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

21 hours ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

23 hours ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

1 day ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

1 day ago