MIRROR FOCUS

ಕೀಟನಾಶಕಗಳ ಪರ್ಯಾಯ ಬಳಕೆಯತ್ತ ನಡೆಯುತ್ತಿದೆ ಲಸಿಕೆ ಸಂಶೋಧನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಆಹಾರ ವಸ್ತುಗಳಿಗೆ ವಿಪರೀತ ರಾಸಾಯನಿಕ ಬಳಕೆಯಾಗುತ್ತಿದೆ. ಅದರಲ್ಲೂ ಕೀಟನಾಶಕ ಬಳಕೆ ಮಾಡದೆ ತರಕಾರಿ ಸಹಿತ ಆಹಾರ ಬೆಳೆ ಸಾಧ್ಯವೇ ಇಲ್ಲ ಎಂಬ ಮಾತು ಬರುತ್ತಿದೆ. ಇದೀಗ ಸಂಶೋಧನಕರು ಸಸ್ಯಗಳಿಗೆ ಬರುವ ವೈರಲ್ ಸೋಂಕಿನ ವಿರುದ್ಧ ಕೀಟನಾಶಕಗಳ ಪರ್ಯಾಯ ಬಳಕೆಯತ್ತ ಸಂಶೋಧನೆ ಮಾಡುತ್ತಿದ್ದಾರೆ.

Advertisement
Advertisement

ಗಿಡಗಳಿಗೆ ಬರುವ ವೈರಸ್‌ಗಳ ವಿರುದ್ಧ ಸಸ್ಯಗಳಿಗೆ ಲಸಿಕೆ ಹಾಕುವ ಹೊಸ ವಿಧಾನವನ್ನು ಕೀಟಗಳು ಮತ್ತು ಪರಿಸರಕ್ಕೆ ಹಾನಿಕಾರಕ ವಿಷಕಾರಿ ಕೀಟನಾಶಕಗಳಿಗೆ ಪರ್ಯಾಯವಾಗಿ ಬಳಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ತಂಡವು ಅಭಿವೃದ್ಧಿಪಡಿಸಿದ ಈ ವಿಧಾನವು ಸಸ್ಯಗಳಲ್ಲಿನ ವಿಭಿನ್ನ ರೋಗಕಾರಕಗಳನ್ನು ಎದುರಿಸಲು ಅನುಗುಣವಾಗಿ ಲಸಿಕೆಗಳನ್ನು ವೇಗವಾಗಿ ಪತ್ತೆಹಚ್ಚಲು ಮತ್ತು ಉತ್ಪಾದಿಸಲು ಸಹಾಯ ಮಾಡುತ್ತದೆ.

ವೈರಸ್ ದಾಳಿಯ ಸಮಯದಲ್ಲಿ, ಸಸ್ಯಗಳು ಎರಡು ಹಂತದ ಸೂಕ್ಷ್ಮ ರಕ್ಷಣಾ ಚಟುವಟಿಕೆ ಇದೆ. ಅದು ಅವುಗಳನ್ನು ಸೋಂಕಿನ ಸ್ಥಳದಲ್ಲಿ ಮತ್ತು ಅದರ ರಚನೆಯ ಉದ್ದಕ್ಕೂ ರಕ್ಷಿಸುತ್ತದೆ. ಇದರಲ್ಲಿ   ವೈರಸ್ ವಿರುದ್ಧ ಸಸ್ಯಗಳೇ ಹೋರಾಡಲು ಬೇಕಾಗುವ ಶಕ್ತಿ ನೀಡುತ್ತದೆ, ಅದರ ಜೊತೆಗೆ  ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

ಇಂದು ರೋಗ ಬಾಧಿತ ವೈರಸ್ ಕೊಲ್ಲುವ ಸಲುವಾಗಿ ಬಹುಪಾಲು ಜನರು ಔಷಧಿ ಸಿಂಪಡನೆ ಮಾಡುತ್ತಾರೆ. ಇದರಿಂದ ಗಿಡಕ್ಕೆ ಬೇಕಾದ ಅಂಶಗಳೂ ಸಾಯುತ್ತವೆ. ಹೀಗಾಗಿ ಗಿಡಗಳಿಗೆ ಬೇಕಾದ ಪ್ರೋಟೀನ್ ಹಾಗೂ ಇತರ ವಸ್ತುಗಳು ಇಲ್ಲವಾಗಿ ಪ್ರತೀ ಬಾರಿಯೂ ಗಿಡಕ್ಕೆ ರಾಸಾಯನಿಕ ಬಳಕೆ ಮಾಡಲೇಬೇಕಾದ ಅನಿವಾರ್ಯತೆ ಬರುತ್ತದೆ. ಆದರೆ ಈ ಮಾದರಿಯಲ್ಲಿ ಅಂತಹ ಅವಶ್ಯಕತೆ ಇರುವುದಿಲ್ಲ.

Advertisement

ಆರಂಭದಲ್ಲಿ ಸಂಶೋಧನಾ ತಂಡವು ಟೊಮೆಟೊ ಮತ್ತು ತಂಬಾಕಿನ ಮೇಲೆ ದಾಳಿ ಮಾಡುವ ಮಾದರಿ ವೈರಸ್‌ನಿಂದ ತಂಬಾಕು ಸಸ್ಯ ಎನ್ ಬೆಂಥಾಮಿಯಾನಾದ ಎರಡು ಗುಂಪುಗಳಿಗೆ ಸೋಂಕು ತಗುಲಿತು. ಒಂದು ಗುಂಪಿಗೆ ಹೆಚ್ಚು ಪರಿಣಾಮಕಾರಿಯಾದ ಅಣುಗಳೊಂದಿಗೆ ಲಸಿಕೆ ನೀಡಲಾಯಿತು.

ಆದರೆ ಇನ್ನೊಂದು ಗುಂಪು ಯಾವುದೇ ಚಿಕಿತ್ಸೆಯನ್ನು ಪಡೆಯಲಿಲ್ಲ. ಆರು ವಾರಗಳ ನಂತರ, ಶೇಕಡಾ 90 ರಷ್ಟು ಲಸಿಕೆ ಹಾಕಿದ ಸಸ್ಯಗಳು ಸೋಂಕಿನ ಯಾವುದೇ ಲಕ್ಷಣಗಳನ್ನು ಕಂಡುಬರಲಿಲ್ಲ. ಆದರೆ ಲಸಿಕೆ ನೀಡದ ಎಲ್ಲಾ ಸಸ್ಯಗಳು ವೈರಸ್‌ನಿಂದ ಕೊಲ್ಲಲ್ಪಟ್ಟವು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಆದರೆ ಈ ಲಸಿಕೆಯ ಅವಧಿ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಹೇಗೆ ಉತ್ಪಾದಿಸುವುದು ಮತ್ತು ಇವುಗಳನ್ನು ಸಸ್ಯಗಳಿಂದ ಹೇಗೆ  ಹೀರಿಕೊಳ್ಳಬಹುದು ಎಂಬುದರ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದಲ್ಲಿ 15 ಬಗೆಯ ಔಷಧಗಳು, ಸೌಂದರ್ಯ ವರ್ಧಕಗಳ ಬಳಕೆಗೆ ನಿಷೇಧ

ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…

2 hours ago

ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲ | ಬಾಹ್ಯಾಕಾಶದಲ್ಲಿ ಧಾರವಾಡದ ಹೆಸರು, ಮೆಂತೆಕಾಳು

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…

2 hours ago

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಕೊಡಗಿನಲ್ಲಿ ವ್ಯಾಪಕ ಮಳೆ | ಕೆ ಆರ್ ಎಸ್ ಅಣೆಕಟ್ಟು ಭರ್ತಿ | ಶಿರಾಡಿ ಸಂಚಾರ ಸಂಕಷ್ಟ |

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…

2 hours ago

ಅಮ್ಮನ ಪ್ರೀತಿಗೆ ಎಣೆಯುಂಟೇ?

ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…

3 hours ago

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

16 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

17 hours ago