Advertisement
ಸುದ್ದಿಗಳು

ಕುಕ್ಕೆಯಲ್ಲಿ ತಪ್ಪಿದ ಬೆಂಕಿ ಅವಘಡ : ಅಂಗಿಯನ್ನೇ ರಕ್ಷಣಾ ಕಾರ್ಯದಲ್ಲಿ ಬಳಸಿದ ಗ್ರಾಪಂ ಸದಸ್ಯ

Share

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯಲ್ಲಿ ಹುರಿದಿಟ್ಟ ಮಸಾಲೆ ಕಟಾರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಸಾರ್ವಜನಿಕರು,  ಗ್ರಾಪಂ ಸದಸ್ಯರೊಬ್ಬರು ಸೇರಿದಂತೆ ಸ್ಥಳೀಯ ಭಕ್ತಾದಿಗಳ ಕರ್ತವ್ಯ ಪ್ರಜ್ಞೆ ಅನಾಹುತ ತಪ್ಪಿಸಿತು.

ಆದದ್ದು ಏನು ?

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಹುರಿದಿಟ್ಟ ಮಸಾಲೆ ಕಟಾರದಲ್ಲಿ ತಡರಾತ್ರಿ  ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ಹೊತ್ತಿಕೊಂಡ ಬೆಂಕಿ ಬಳಿಯೇ ಸುಮಾರು ತುಂಬಿದ 30 ಕ್ಕೂ ಅಧಿಕ  ಗ್ಯಾಸ್ ಸಿಲಿಂಡರ್ ಕೂಡಾ ಇತ್ತು. ಅಪಾಯವನ್ನು ಅರಿತ ಸ್ಥಳೀಯರು ಜಾಗೃತರಾದರು.

ಭೋಜನಶಾಲೆಯಲ್ಲಿ ಬೆಂಕಿ ಗಮನಿಸಿದ ಸ್ಥಳೀಯರೊಬ್ಬರು ರಮೇಶ ಎನ್ನುವವರಿಗೆ ಕರೆ ಮಾಡಿದರು. ಈ ಸಂದರ್ಭ  ಸಮೀಪದ  ನೂಚಿಲದಲ್ಲಿ  ದೈವದ ನೇಮದಲ್ಲಿದ್ದ ಅವರು ಇತರರಿಗೂ ಮಾಹಿತಿ ನೀಡಿದರು. ತಕ್ಷಣವೇ ಅಲ್ಲಿದ್ದ ಸುಮಾರು 600 ರಷ್ಟು ಮಂದಿ  ದೇವಸ್ಥಾನದ ಭೋಜನ ಶಾಲೆಗೆ ಬಂದು ಬೆಂಕಿ ನಂದಿಸಿದರು. ಬಳಿಕ ಮಸಾಲೆ ಸಹಿತ ಭೋಜನಶಾಲೆಯಿಂದ ಹೊರಗೆ ತಂದು ಭೋಜನ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು.

 ಬೆಂಕಿ ಹಿಡಿದ ಕಠಾರವನ್ನು ನಂದಿಸಲು ತಕ್ಷಣವೇ ಬಟ್ಟೆ ಸಿಗದೆ ಇದ್ದಾಗ ಗ್ರಾ.ಪಂ ಸದಸ್ಯ ಮಣಿಕಂಠ ಎಂಬವರು ಧರಿಸಿದ ಅಂಗಿ ಕಳಚಿ ಅದರ ಸಹಾಯದಿಂದ ಕಠಾರವನ್ನು ಹೊರಹಾಕಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಝಾರ್ಖಂಡ್‌ನ ಮಹಿಳಾ ರೈತರಿಂದ ಬೆಳೆದ ಮಾವು ಈಗ ಲಂಡನ್‌ಗೆ…! ಬ್ರಿಟನ್‌ಗೆ ಮೊದಲ ಬಾರಿಗೆ ರಫ್ತು

ಝಾರ್ಖಂಡ್‌ನ ಮಹಿಳಾ ರೈತರು ಬೆಳೆದ 1.5 ಮೆಟ್ರಿಕ್ ಟನ್ ಆಮ್ರಪಾಲಿ ಮಾವುಗಳು ಮೊದಲ…

5 hours ago

ಮುಂಗಾರು ಅಬ್ಬರ | ಕರ್ನಾಟಕ ಸೇರಿ ದೇಶದ ಹಲವೆಡೆ ಭಾರೀ ಮಳೆ – ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಕೇರಳದಲ್ಲಿ ರೆಡ್ ಅಲರ್ಟ್

ದೇಶದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ…

17 hours ago

ಕೀಟನಾಶಕವೇ ರೈತರ ಜೀವಕ್ಕೆ ಕಂಟಕ…? ರಾಜಸ್ಥಾನದಲ್ಲಿ 2 ವರ್ಷದಲ್ಲಿ 535 ರೈತರ ಸಾವು – ಬೆಚ್ಚಿಬೀಳಿಸಿದ ವರದಿ..!

ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…

1 day ago

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…

1 day ago