ಕುಕ್ಕೆ ಭಕ್ತರೇ, ಕುಕ್ಕೆಯನ್ನು ಸ್ವಲ್ಪ ಕ್ಲೀನ್ ಇರಿಸಿಕೊಳ್ಳಿ…. ಪ್ಲೀಸ್…

May 6, 2019
8:00 PM

ಸುಬ್ರಹ್ಮಣ್ಯ: ಮೊನ್ನೆ ಮೊನ್ನೆ ಯುವಬ್ರಿಗೆಡ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ಪುಣ್ಯ ನದಿ ಕುಮಾರಧಾರಾ ಸ್ವಚ್ಛತಾ ಕಾರ್ಯ ನಡೆಯಿತು. ಸುಮಾರು 10 ಟನ್ ತ್ಯಾಜ್ಯ ನದಿಯಿಂದ ಹಾಗೂ ಆಸುಪಾಸಿನಿಂದ ತೆಗೆಯಲಾಯಿತು. ಆದರೆ ಈಗ ಮತ್ತದೇ ಸ್ಥಿತಿ ನಿರ್ಮಾಣವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಕುಕ್ಕೆ ಭಕ್ತರೇ ಪ್ಲೀಸ್, ನದಿಯನ್ನು ಸ್ವಚ್ಛವಾಗಿರಿಸಿ, ಪುಣ್ಯ ಕ್ಷೇತ್ರದಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯಬೇಡಿ. ಇದು ನಮ್ಮ ರಿಕ್ವೆಸ್ಟ್….

ಕಳೆದ ವಾರ ಯುವಬ್ರಿಗೆಡ್ನ ಸುಮಾರು 300 ಯುವಕರು ಸುಬ್ರಹ್ಮಣ್ಯದ ಪವಿತ್ರ ನದಿಗಳಿಂದ ಸುಮಾರು 8-10 ಟನ್ ನಷ್ಟು ಬಟ್ಟೆ, ಬಾಟಲಿ ಹಾಗೂ ಪ್ಲಾಸ್ಟಿಕ್ ಗಳನ್ನು ತೆಗೆದು ಪುನರುಜ್ಜೀವ ನೀಡಿದ್ದರು. ಆದರೆ ಇಲ್ಲಿಗೆ ಬರುವ ಕೆಲವು ಬೇಜವಾಬ್ದಾರಿ ಪ್ರವಾಸಿಗರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ತ್ಯಾಜ್ಯವನ್ನು ರಸ್ತೆ ಬದಿ ಮಾತ್ರವಲ್ಲ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರ ಬಗ್ಗೆ ನಿಗಾ ಬೇಕಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ, ಸ್ಥಳಿಯ ಪಂಚಾಯತ್ ಸ್ವಚ್ಛತೆಗೆ ಆದ್ಯತೆ ನೀಡಿದರೂ ಭಕ್ತಾದಿಗಳಲ್ಲಿ ಜಾಗೃತಿ ಮೂಡಬೇಕು, ಸ್ಥಳೀಯ ವರ್ತಕರು ಎಚ್ಚರಿಸಬೇಕು. ಹೀಗಾಗಿ ಸ್ವಚ್ಛ ಕುಮಾರಧಾರಾ, ಸ್ವಚ್ಘ ಕುಕ್ಕೆ ಸುಬ್ರಹ್ಮಣ್ಯ ಕಾಣಲು ಸಾಧ್ಯವಿದೆ.

ನಾಗಾರಾಧನೆಗೆ ಜಗತ್ ಪ್ರಸಿದ್ಧವಾದ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು., ಸುತ್ತಮುತ್ತಲಿನ ಪರಿಸರಕ್ಕೆ ಮತ್ತು ನದಿಗಳಿಗೆ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇವೆ ಎಂದು “ನಮ್ಮ ಸುಬ್ರಹ್ಮಣ್ಯ” ದ ತಂಡ ಆಗಾಗ ಪ್ರಾರ್ಥನೆ ಮಾಡುತ್ತದೆ.

 

ಯುವಬ್ರಿಗೇಡ್ , ನಮ್ಮಸುಬ್ರಹ್ಮಣ್ಯ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ, ಪಂಚಾಯತ್ ಸೇರಿದಂತೆ ವಿವಿಧ ಸಂಘಟನೆಗಳು ಸ್ವಚ್ಛತೆಗೆ ನಿರಂತರ ಕೆಲಸ ಮಾಡುತ್ತಿದೆ. ಇದನ್ನು ಗಮನಿಸಿ ದಯವಿಟ್ಟು  ಸ್ವಚ್ಛತೆಗೆ ಎಲ್ಲಾ ಭಕ್ತರು, ಎಲ್ಲ ಸಾರ್ವಜನಿಕರು  ಕೈಜೋಡಿಸಿ ಎಂಬುದು “ಸುಳ್ಯನ್ಯೂಸ್.ಕಾಂ” ಆಶಯವೂ ಆಗಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಡ್ರ್ಯಾಗನ್‌ ಫ್ರೂಟ್‌ ಬೆಳೆದರೆ ಸಾಕೇ..? ದಕ್ಷಿಣ ಆಫ್ರಿಕಾದಲ್ಲಿ ರೈತರಿಗೆ ಎದುರಾದ ಸವಾಲುಗಳು ಭಾರತಕ್ಕೂ ಪಾಠ
August 21, 2026
6:41 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?
August 20, 2026
12:26 PM
by: ದ ರೂರಲ್ ಮಿರರ್.ಕಾಂ
ಚಂಡಮಾರುತದ ಗಾಳಿಗೂ ಬಗ್ಗಿ ಉಳಿಯುವ ಅಡಿಕೆ ತಳಿ..! ಮೊಹಿತ್‌ನಗರ ತಳಿಗೆ ಹಲವು ರಾಜ್ಯಗಳಲ್ಲಿ ಬೇಡಿಕೆ
August 8, 2026
6:48 AM
by: ದ ರೂರಲ್ ಮಿರರ್.ಕಾಂ
ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror