ಕುದ್ಲೂರು: ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ SKSSF ಶಾಖೆ ವತಿಯಿಂದ ಕುದ್ಲೂರಿನಲ್ಲಿ ಶಾಹ್ ಉಸ್ತಾದ್ ಅನುಸ್ಮರಣೆ ನಡೆಯಿತು.
ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖೆ ಇದರ ಜಂಟಿ ಆಶ್ರಯದಲ್ಲಿ ಮಸೀದಿಯ ಸ್ಥಾಪಿತ ಕಾಲದಿಂದ ಗೌರವಾಧ್ಯಕ್ಷರಾಗಿದ್ದ ಉಸ್ತಾದ್ ಡಾ.ಶಾಹ್ ಮುಸ್ಲಿಯಾರ್ ಅನುಸ್ಮರಣಾ ಸಂಗಮ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆತೂರು ಮುದರ್ರಿಸ್ ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಸಭೆಯನ್ನು ಉದ್ಘಾಟಿಸಿ ಉಸ್ತಾದರಜೀವನ ಶೈಲಿ ಜನರನ್ನು ಒಳಿತಿನೆಡೆಗೆ ಹಾಗೂ ಮರಣ ಸ್ಮರಣೆಗೆ ಸೆಳೆಯುತ್ತಿದೆ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಕುಂತೂರು ಬೇಳ್ಪಾಡಿ ಎ ಬಿ ಜುಮಾ ಮಸೀದಿ ಖತೀಬ್ ಮಜೀದ್ ದಾರಿಮಿ ಇಬಾದತ್ ಯಾವ ರೀತಿಯಾಗಬೇಕೆಂದು ಸ್ಮರಣೆಗೆ ಹೇತುವಾಗಲು ಏನೆಲ್ಲಾ ಮಾಡಬೇಕೆಂದು ತನ್ನ ಜೀವನ ಶೈಲಿಯಿಂದ ಉಸ್ತಾದ್ ತೋರಿಸಿಕೊಟ್ಟಿದ್ದರೆಂದು ಅಭಿಪ್ರಾಯಪಟ್ಟರು. ನಂತರ ಮಾಜಿ ಖತೀಬ್ ನಿಯಾಝ್ ಫೈಝಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್ ಕೋಲ್ಪೆ ಸಹಿತ ಹಲವು ಉಲಮಾಗಳು ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ವೈ ಕೋಶಾಧಿಕಾರಿ ಅಬ್ದುಲ್ ಖಾದರ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಶ್ರಫ್ ಕೊರೆಪದವು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೋಶಾಧಿಕಾರಿ ನಝೀರ್ ಮೌಲವಿ ಮುಂತಾದ ಊರ ಗಣ್ಯರು ಉಪಸ್ಥಿತರಿದ್ದರು.
ಜುನೈದ್ ಜಿಫ್ರಿ ತಂಙಳ್ ಆತೂರು ನೇತೃತ್ವದಲ್ಲಿ ಧಿಕ್ರ್ ದುಆ ಮಜ್ಲಿಸ್ ನಡೆಯಿತು. ಸಂಗಮದಲ್ಲಿ ಸ್ಥಳೀಯ ಖತೀಬ್ ಅಶ್ರಫ್ ರಹ್ಮಾನಿ ಸ್ವಾಗತಿಸಿ ವಂದಿಸಿದರು.
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…
ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…
ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…
ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…
ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್, ಕ್ಯಾಟರಿಂಗ್ ಹಾಗೂ ಹೋಟೆಲ್ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…