Advertisement
ಯಕ್ಷಗಾನ : ಮಾತು-ಮಸೆತ

‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ……

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ

(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ. ಕೊನೆಗೆ ಷಣ್ಮುಖನು ವಿಶ್ವರೂಪ ತೋರಿಸಿದಾಗ)

“.. ಒಳಗಣ್ಣಿನಿಂದ ನೋಡಿದೆ.. ಈ ಪ್ರಪಂಚದಲ್ಲಿ ‘ಆದಿ-ಮಧ್ಯ-ಅಂತ್ಯ’ ಇಲ್ಲದೇ ಇದ್ದ ಶುದ್ಧ ಚೇತನವಿದು. ಶಕ್ತಿಯಿದು. ಅದಕ್ಕೆ ಹೆಸರಿಲ್ಲ, ರೂಪವಿಲ್ಲ. ಎಷ್ಟು ನಾಮಪದಗಳಿವೆ, ಎಷ್ಟು ರೂಪ ವಿನ್ಯಾಸಗಳಿವೆ. ಅವೆಲ್ಲವೂ ಇದೆ. ಶಾಸ್ತ್ರ ಓದಿದ್ದೇನೆ. ಅಧ್ಯಯನ ಮಾಡಿದ್ದು ಮಾತ್ರವಲ್ಲ, ಸಾಧನೆ ಮಾಡಿದ್ದೇನೆ. ತಪಸ್ಸನ್ನಾಚರಿಸಿದ್ದೇನೆ. ಆಮೇಲೆ ಪ್ರವೃತ್ತಿಯಲ್ಲಿ ಅಸುರನಾಗಿ ದುಡಿದಿದ್ದೇನೆ. ಈಗ ಸತ್ಯವನ್ನು ಕಂಡೆ. ಯಾವ ಬ್ರಹ್ಮದಿಂದ ಸಿಡಿದು ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮೊದಲಾದ ಮೂಲದ್ರವ್ಯಗಳು ವಿಕಾಸಗೊಂಡು ’ಪ್ರಪಂಚ’ ಅನ್ನಿಸಿತು. ‘ಕೂರ್ಮ’ ಅರ್ಥಾತ್ ಆಮೆ. ಇದು ಜಲದಲ್ಲೇ ಇರುತ್ತದೆ. ಇದಕ್ಕೆ ಈಜಬೇಕು ಅಂತ ತೋರಿದಾಗ ಒಂದೊಂದು ಅವಯವಗಳನ್ನು ತನ್ನ ಚಿಪ್ಪಿನಿಂದ ಹೊರ ಚಾಚುತ್ತದೆ. ಸಾಕು ಅಂತ ತೋರಿದಾಗ ಒಂದೊಂದೇ ಅವಯವಗಳನ್ನು ಒಳಗೆ ಎಳೆದುಕೊಳ್ಳುತ್ತದೆ. ಈ ಆಮೆಯ ಅವಯವಗಳನ್ನು ತನ್ನ ತಪಸ್ಸಿನಿಂದ, ಆತ್ಮವರ್ಚಸ್ಸಿನಿಂದ ನನ್ನ ನಿಯಂತ್ರಣಕ್ಕೆ ತಂದುಕೊಂಡಿದ್ದೇನೆ. ಆದ ಕಾರಣ ಕಾಣುವವರ ಕಣ್ಣಿಗೆ ಇದು ಕಾಣಿಸಲಿಲ್ಲ. ಆದರೆ ಇವನಿಗೆ ಕಂಡೀತಲ್ಲ. ನಾನು ಈ ಪ್ರಪಂಚವನ್ನು ಚಿದಾಕಾಶದಲ್ಲಿ ನಿಂತು ವಿಸ್ತಾರಗೊಳಿಸಿದುದನ್ನು ಇವನು ಹೀರುತ್ತಾ ಇದ್ದಾನೆ. ಸಾವಿರ ಮುಖಗಳು, ಸಾವಿರ ಬಾಹುಗಳು, ಸಾವಿರ ಮುಖಗಳಲ್ಲಿ ಸಾವಿರ ಭಾವಗಳು, ಸಾವಿರ ಭಾವಗಳಲ್ಲಿ ಸಾವಿರ ಕೃತಿಗಳು. ಇದಲ್ಲವೇ ಪರಮಾತ್ಮನ ಪ್ರಪಂಚ ವ್ಯಾಪಾರ, ವ್ಯವಹಾರ. ಇದು ವಿಶ್ವರ ರೂಪ…. ಕುಮಾರ……

‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ, ಇದು ಸದಾ ಕೌಮಾರ, ಬಾಲ್ಯವಿಲ್ಲ. ಬಾಲ್ಯ ಇದ್ದರೆ ಹುಡುಗಾಟಿಕೆಯಾಗುತ್ತದೆ. ಆ ಕೌಮಾರ ದಾಟಿದರೆ ಯೌವನ ಬಂದು ಇತರ ಇಂದ್ರಿಯ ದಾಹಗಳು ಹುಟ್ಟಿಕೊಳ್ಳುತ್ತಾವೆ. ಆವಾಗ ಭೋಗಾಸಕ್ತಿಯಿಂದ ಒಂದು ಎರಡಾಗುತ್ತದೆ. ಎರಡು ಹನ್ನೆರಡಾಗುತ್ತದೆ, ಅನಂತವಾಗುತ್ತದೆ. ಹಾಗೆನೇ ಕುಮಾರ ಕೌಮಾರ ಆದ ಕಾರಣವೇ ಸುಬ್ರಹ್ಮಣ್ಯ ಬ್ರಹ್ಮಣ್ಯ. ಅಂದರೆ ಬ್ರಹ್ಮ ತೇಜಸ್ಸು. ಇದಕ್ಕೆ ‘ಸು’ ವಿಶೇಷಣ ಹಚ್ಚಿದರೆ ಅದರಿಂದಾಚೆ ಬ್ರಾಹ್ಮಣ್ಯವಿಲ್ಲ.

ಅಗ್ನಿ ಅಂದರೆ ಜ್ಞಾನ. ಉರಿಯುವ ಬೇಂಕಿಯು ಪಾಪ, ಪುಣ್ಯ ಎಲ್ಲವನ್ನು ಸುಟ್ಟುಬಿಡುತ್ತದೆ. ದ್ರವ್ಯವನ್ನು ಕಾಣಿಸದೆ ಎಲ್ಲವನ್ನು ಹಿಡಿ ಬೂದಿಯಾಗಿಸುತ್ತದೆ. ಆದ ಕಾರಣವೇ ಬ್ರಹ್ಮಣ್ಯ ಸುಬ್ರಹ್ಮಣ್ಯ. ಇವನ ಹುಟ್ಟು ಅಗ್ನಿಯಲ್ಲಿ. ಎದ್ದು ಬಂದುದು ಶರಜನ್ಮ. ಅದು ದರ್ಭೆಹುಲ್ಲು. ದರ್ಭೆ ಎನ್ನುವುದು ನಮ್ಮ ಸನಾತನ ಕರ್ಮಕಾಂಡದಲ್ಲಿ ಬಿಡಲಾಗದೆ ಇದ್ದಂತಹ ಒಂದು ಹುಲ್ಲು. ಬ್ರಹ್ಮಚಾರಿಗೆ ಮುಂಚೆ ಹಲ್ಲು. ಹಾಗಾಗಿ ಶರವಣ, ಭವ, ಗುರು, ಗುಹ, ಸುಬ್ರಹ್ಮಣ್ಯ.. ಆಹಾ ಇವನ ಮುಂದೆ ನನ್ನ ಮಾಯೆ ಅಗದ್ದು ಮಾತ್ರವಲ್ಲ, ನಾನೇ ಅಡಗಿಬಿಟ್ಟೆ….

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

2 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

3 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

5 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

8 hours ago