ಸುದ್ದಿಗಳು

ಕೂತ್ಕುಂಜದಲ್ಲಿ ಯೋಧರಿಗೆ ಸನ್ಮಾನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪಂಜ: ಶಿವಾಜಿ ಯುವಕ ಮಂಡಲ ಕೂತ್ಕುಂಜ ಇದರ ವತಿಯಿಂದ ದೇಶ ಕಾಯುವ ಯೋಧರಿಗೆ  ಸನ್ಮಾನ ಕಾರ್ಯಕ್ರಮ  ಕೂತ್ಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ 17 ಮಂದಿ ಯೋಧರನ್ನು ಸನ್ಮಾನಿಸುವ ಕಾರ್ಯ ನೇರವೇರಿತು.

Advertisement

ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ ಗಡಿ ಕಾಯುವ ಸಾವಿರಾರು ಯೋಧರನ್ನು ನೀಡಿದ ಸುಳ್ಯದ ಮಣ್ಣಿಗೆ ತಲೆಬಾಗಿ ನಮಿಸುವೆನೆಂದರು.

ಅಭಿನಂದನಾ ಭಾಷಣ ನೆರವೇರಿಸಿದ ಮ್ಯಾಥ್ಯೂ ಟಿ.ಜಿ.  ಮಾತನಾಡಿ ದೇಶದ ಮೂರು ಮಹತ್ವಪೂರ್ಣ ಅಂಗಗಳು ಯೋಧ, ಶಿಕ್ಷಕ, ರೈತ ಇವರು ಸಂತುಷ್ಟರಾಗಿದ್ದರೆ ಆ ದೇಶವೂ ಸುಭಿಕ್ಷೆಯಾಗಿರುತ್ತದೆ ಎಂದರು.

ಈ ಶುಭ ಸಂದರ್ಭದಲ್ಲಿ ಸನ್ಮಾನಿತರಾದ ಕರ್ನಲ್ ಕೆ.ಲಕ್ಮೀನಾರಾಯಣ, ಬಿ.ಕೆ. ಮಾಧವ ಗೌಡ, ಬಿ.ಕೆ.ಕುಸುಮಾಧರ ಗೌಡ, ಚೆನ್ನಪ್ಪ ಗೌಡ ಬಪ್ಪನಮನೆ, ಸೀತಾರಾಮ ಗೌಡ ಚಿದ್ಗಲ್ಲು, ವಾಸುದೇವ ಕಕ್ಯಾನ , ಸುದರ್ಶನ್ ಕಕ್ಯಾನ, ಲಕ್ಷ್ಮ ಣ ಬೇರ್ಯ, ವಿಶ್ವನಾಥ ಬಪ್ಪನಮನೆ, ವೀರಪ್ಪ ಗೌಡ ಚಿದ್ಗಲ್ಲು, ಸುಕುಮಾರ ನಾಗತೀರ್ಥ, ರಾಮ ಭಟ್ ಪಂಜ, ರಾಮಯ್ಯ ಗೌಡ ಕುದ್ವ, ಗಂಗಾಧರ ಗೌಡ ಬಿಡಾರಕಟ್ಟೆ, ಇವರನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶಿವರಾಮಯ್ಯ ಕರ್ಮಾಜೆ ಉದ್ಘಾಟಿಸಿದರು. ವಿಠ್ಠಲ್‌ನಾಯಕ್ ಕಲ್ಲಡ್ಕ ಇವರ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

Advertisement

ಸಭಾಧ್ಯಕ್ಷತೆಯನ್ನು ಆಶಿತ್ ಕಲ್ಲಾಜೆ ವಹಿಸಿದ್ದರು, ಯೋಗಿಶ್ ಚಿದ್ಗಲ್ಲು,  ಕಾರ್ಯಪ್ಪ ಗೌಡ ಚಿದ್ಗಲ್, ಚಂದ್ರಶೇಖರ ಕುಕ್ಕುಪುಣಿ, ಭವಾನಿಶಂಕರ ದೇರಪ್ಪಜ್ಜನಮನೆ, ಸುಬ್ಬಣ್ಣ ನಾಯಿಕ, ದೇವಿಪ್ರಸಾದ್ ಕುಳ್ಳಾಜೆ, ಉಜ್ವಲ್ ಚಿದ್ಗಲ್ ಉಪಸ್ಥಿತರಿದ್ದರು.

ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |

ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.

9 hours ago

ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ

ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…

11 hours ago

ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ

ಹವಾಮಾನ ಬದಲಾವಣೆಯಿಂದ  ಹಾಗೂ ತಾಪಮಾನದ ದಿಢೀರ್‌ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…

15 hours ago

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ

ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…

15 hours ago

ಹೊಸರುಚಿ | ಹಲಸಿನ ಬೀಜದ ಪರೋಟ

ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

15 hours ago

ಮಂಗಳದ ದೃಷ್ಟಿ | ಈ ರಾಶಿಗಳಿಗೆ ಆಕ್ರಮಣಕಾರಿ ತೀರ್ಮಾನಗಳಿಂದ ಲಾಭ..!

ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…

16 hours ago