MIRROR FOCUS

ಕೃಷಿ ಕೊಳದಲ್ಲಿ ಮೀನು ಸಾಕಾಣಿಕೆ ಸುಲಭ ಸಾಧ್ಯ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೃಷಿಕರು ಅಡಿಕೆ, ಮಾವು, ಪೇರಳೆ, ಕೊಕೋ, ಲವಂಗ, ತೆಂಗು ಇತ್ಯಾದಿಗಳ ಜೊತೆಗೆ ಕೃಷಿ ನೀರುಣಿಸುವ ಕೃಷಿ ಕೊಳಗಳ ಮೂಲಕವೂ ಮೀನು ಸಾಕಾಣಿಕೆ ಮಾಡಿ ಆದಾಯ ಗಳಿಸಬಹುದಾಗಿದೆ.  ಈ ಬಗ್ಗೆ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು  ಕೃಷಿ ಭೂಮಿಗೆ ಭೇಟಿ ನೀಡಿ ಜಮೀನಿನ ಕೊಳಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ರೈತರಿಗೆ ಸಲಹೆ ಸೂಚನೆ ನೀಡಿದರು.

Advertisement

ಪ್ರೊ. ಡಾ. ರಾಮಚಂದ್ರ ನಾಯ್ಕ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಚೇತನ್ ಎನ್. ಅವರು  ಬಾಯಾರು ಗ್ರಾಮದ ನಿವಾಸಿ, ವಕೀಲ ರಾಮಚಂದ್ರ ಭಟ್ ಅವರ ಜಮೀನಿಗೆ ಭೇಟಿ ನೀಡಿದರು.    ಕ್ಷೇತ್ರದ ಭೇಟಿಯ ಸಮಯದಲ್ಲಿ ವಿವಿಧ ಕೃಷಿ ಹಾಗೂ ಕೃಷಿಯೇತರ ಪದ್ದತಿಗಳ ಅಳವಡಿಕೆಗಳ ಬಗ್ಗೆ ಜೊತೆ ಮುಕ್ತವಾಗಿ ಚರ್ಚಿಸಿದರು.

ಬಾಯಾರು ಗ್ರಾಮದ ರಾಮಚಂದ್ರ ಭಟ್ ಎಂಬವರ ಕೃಷಿ ಭೂಮಿಗೆ ಭೇಟಿ ನೀಡಿದ ತಜ್ಞರ ತಂಡ ಚರ್ಚಿಸಿದರು. ಇಲ್ಲಿನ ಕೃಷಿಕರು ಅಡಿಕೆ, ಮಾವು, ಪೇರಳೆ, ಕೊಕೋ, ಲವಂಗ, ತೆಂಗು, ಮೆಣಸು, ಹಲಸು, ಬಾಳೆ, ಪುನ್ನಾರ್ಪುಳಿ, ಜೀಗುಜ್ಜೆ, ಚಿಕ್ಕು, ಬೆಟ್ಟದನೆಲ್ಲಿ, ಮೆಣಸು, ಜೇನು, ಜಾನುವಾರು, ಇತ್ಯಾದಿ ಬಗೆಯ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಈ ಭೂಮಿಯಲ್ಲಿ ನೀರು ಶೇಖರಣೆ ಮಾಡಲು ಅಲ್ಲಲ್ಲಿ ಹೊಂಡ, ಕೊಳ, ಕೆರೆ ಇತ್ಯಾದಿಗಳನ್ನು ಸಂರಕ್ಷಿಸಿದ್ದಾರೆ. ಇವುಗಳು ಕೇವಲ ನೀರಿಗಾಗಿ ಮತ್ತು ತೋಟದ ಗಿಡ-ಮರಗಳಿಗೆ ನೀರು ಹಾಯಿಸಲು ಮಾತ್ರ ಎಂದುಕೊಂಡ ರಾಮಚಂದ್ರ ಭಟ್ ರವರು ಮೀನುಗಾರಿಕಾ ಪದವಿಧರ ಗುರುರಾಜ್ ರವಲ್ಲಿ ಆಕಸ್ಮಿಕವಾಗಿ ಚರ್ಚಿಸಿ ಸೂಕ್ತವಾಗಿ ಬಳಸಿಕೊಳ್ಳಲು ಯೋಚಿಸಿದ್ದರು.

Advertisement

ಅದಕ್ಕೆ ಸೂಕ್ತವಾದ ಮಾಹಿತಿ ಪಡೆಯಲು ಮೀನುಗಾರಿಕಾ ಕಾಲೇಜಿನ ವಿಷಯ ತಜ್ಞ ಹಾಗೂ ಪ್ರೊಫೆಸರ್  ಡಾ. ರಾಮಚಂದ್ರ ನಾಯ್ಕರಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ ಕ್ಷೇತ್ರ ಬೇಟಿಗೆ ಮುಂದಾದರು. ಇವರು ಕೃಷಿ ವಿಜ್ಞಾನ ಕೇಂದ್ರದ ಮಾಜಿ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ ಅನುಭವವುಳ್ಳವರು ಹಾಗೂ ರೈತರಿಗೆ ಸಮಗ್ರ ಮೀನು ಕೃಷಿ ಪದ್ದತಿಗಳನ್ನು ಅಳವಡಿಕೆಗಳಲ್ಲಿ ವೈಜ್ಞಾನಿಕ ಸಲಹೆ ನೀಡಿಕೊಂಡು ಬಂದವರು.

Advertisement

ಜಮೀನಿನ ಮಾಲಿಕ ರಾಮಚಂದ್ರ ಭಟ್ ಈ ರೀತಿಯ ಕೃಷಿ ಭೂಮಿಯಲ್ಲಿನ ನೀರು ಶೇಖರಣೆಯ ಪ್ರದೇಶವು ಮೀನು ಸಾಕಾಣೆಮಾಡಲು ಹೇಗೆ ಉಪಯೋಗವಾಗುತ್ತದೆಂಬ ಸಂದೇಹದಲ್ಲಿದ್ದರು. ಇದಕ್ಕೆ ಮಾಹಿತಿ ತಿಳಿಸಿದ ವಿಷಯ ತಜ್ಞರು ಈ ನೀರಿನ ಪ್ರದೇಶಗಳ ಯೋಗ್ಯತೆಯ ಬಗ್ಗೆ ಕೂಲಂಕುಷವಾಗಿ ಮಹಿತಿ ನೀಡಿ ಜಮೀನಿನ ಉದ್ದಗಲಕ್ಕೂ ತಿರುಗಿ ಸಂಪನ್ಮೂಲದ ವೀಕ್ಷಿಣೆ ಮಾಡಿ ಸೂಕ್ತ ಸಲಹೆಯನ್ನು ನೀಡಿದರು. ಸಮಗ್ರ ಕೃಷಿ ಪದ್ದತಿಯಲ್ಲಿ ಎಲ್ಲಾ ಬಗೆಯ ಬೆಳೆಗಳನ್ನು ಕಡಿಮೆ ಪ್ರದೇಶದಲ್ಲಿ ಬೆಳೆಯುವುದರಿಂದ ಹೆಚ್ಚು ಅದಾಯವನ್ನು ಪಡೆಯುವುದರೊಂದಿಗೆ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿಯಾಗಲು ನೆರವಾಗಬಹುದಾದ ಮಾಹಿತಿಯನ್ನು ತಿಳಿಸಿಕೊಟ್ಟರು. ವಿವಿಧ ಬೆಳೆಗಳಿಗೆ ನೀರನ್ನು ಬಳಸುವ ಸಲುವಾಗಿ ಮೀಸಲಿಟ್ಟ ನೀರಿರುವ ಪ್ರದೇಶಗಳನ್ನು ಸಿಹಿನೀರು ಅಥವಾ ಚಪ್ಪೆನೀರಿನ ಮೀನುಗಳನ್ನು ಸಾಕಲು ಉಪಯೊಗಿಸುವುದರಿಂದ ಅನ್ಯ ಕೃಷಿ ಬೆಳೆಗಳಿಗೆ ಯಾವುದೇ ತೊಂದರೆಮಾಡದೆ ಸಂಪನ್ಮೂಲವನ್ನು ಸದ್ಬಳಕೆ ಮಾಡಿ ವೈಜ್ಞಾನಿಕ ರೀತಿಯ ಕೃಷಿ ಬೆಳೆಗಳನ್ನು ಮಾಡಿ ಹೆಚ್ಚಿನ ಅದಾಯವನ್ನು ಪಡೆಯಬಹುದಾಗಿದೆ ಎಂದರು.

ಇಂತಹ ನೀರು ಶೇಖರಿಸಿದ ಹೊಂಡಗಳಲ್ಲಿ ಕನಿಷ್ಟ 8 ರಿಂದ 9 ತಿಂಗಳುಗಳವರೆಗೆ ನೀರಿದ್ದಲ್ಲಿ ಮೀನು ಕೃಷಿಗೆ ಸೂಕ್ತವಾದುದು. ಮೀನುಕೃಷಿಯ ಮೀನು ಮರಿಗಳನ್ನು ಕೊಳದಲ್ಲಿ ಬಿತ್ತನೆ ಮಾಡುವ ಮುನ್ನ ಹೊಂಡಗಳಲ್ಲಿನ ಕಳೆ ಮೀನು, ಭಕ್ಷಕ ಮೀನು, ಕಪ್ಪೆ, ಜಲಚಿಟ್ಟೆ ಮುಂತಾದವುಗಳನ್ನು ತೆಗೆದು ಸಮವಾದ ತಳಬಾಗವನ್ನು ರಚಿಸುವುದು ಸೂಕ್ತ.

ಮೀನುಮರಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮೀನುಗಾರಿಕಾ ಮಹಾವಿದ್ಯಾಲಯದ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಡಾ. ರಾಮಚಂದ್ರ ನಾಯ್ಕರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯ ಸಂಶೋಧನಾ ವಿದ್ಯಾರ್ಥಿಗಳಾದ  ಕಿಶೋರ್ ಸಿ. ಮತ್ತು ಪ್ರವೀಣ್ ಜೋಶಿ ಎಚ್.ಎಸ್. ಸಹಕರಿಸಿದರು.  ಸಾರ್ವಜನಿಕರು  ತಮ್ಮ ಜಮೀನುಗಳಲ್ಲಿ ಇಂತಹ ಅವಕಾಶವಿದ್ದರೆ, ಸಂಭಂದಪಟ್ಟ ತಜ್ಞರನ್ನು (ಮೊಬೈಲ್ ನಂಬರ್ 99169 24084)ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…

5 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…

5 hours ago

ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….

ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…

5 hours ago

ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಕ್ರಮ | ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ

ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…

16 hours ago

ಅರಣ್ಯ ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ | ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…

1 day ago

ರಾಜಸ್ಥಾನದ 30 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ | ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮೆ

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದಲ್ಲಿ ಸುಮಾರು 30…

1 day ago