MIRROR FOCUS

ಕೃಷಿ ಪಂಡಿತರ ತೋಟದಲ್ಲಿ ಹಣ್ಣುಗಳ ವೈವಿಧ್ಯತೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಬೆಳೆತು ನಿಂತಿರುವ ಥಾಯ್‍ಲ್ಯಾಂಡಿನ ಹಲಸಿನ ಕಾಯಿ. ಹಣ್ಣಾಗಿ ನಿಂತಿರುವ ಕಿತ್ತಳೆ , ಸೇಬು ಹಣ್ಣುಗಳ ರಾಶಿ… ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್ಟರ ತೋಟಕ್ಕೆ ಹೋದರೆ ಅಲ್ಲಿ ಬಾಯಲ್ಲಿ ನೀರೂರಿಸುವ ದೇಶ ವಿದೇಶಗಳ ವೈವಿಧ್ಯಮಯ ಹಣ್ಣುಗಳು ನಮ್ಮನ್ನು ಸ್ವಾಗತಿಸುತ್ತದೆ.

Advertisement
Advertisement

ತನ್ನ ಕೃಷಿಯ ಜೊತೆಗೆ ವೈವಿಧ್ಯಮಯ ಹಣ್ಣುಗಳ ವಿಸ್ಮಯ ಲೋಕವನ್ನು ಸೃಷ್ಠಿಸಿ ಗಮನ ಸೆಳೆಯುತ್ತಾರೆ ಕರ್ನಾಟಕ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿಯನ್ನು ಪಡೆದಿರುವ ಕೃಷಿಕ ತಿರುಮಲೇಶ್ವರ ಭಟ್. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿರುವ ಹಲವು ಹಣ್ಣುಗಳೂ ಕರಾವಳಿಯ ಈ ಮಣ್ಣಿನಲ್ಲಿ ಫಲವತ್ತಾಗಿ ಬೆಳೆಯಬಲ್ಲುದು ಎಂದು ಇವರ ಪ್ರಯೋಗ ತೋರಿಸಿ ಕೊಟ್ಟಿದೆ.

 

 

Advertisement

ಸುಮಾರು ಹತ್ತಕ್ಕೂ ಹೆಚ್ಚು ದೇಶ ವಿದೇಶದ ತಳಿಯ ಹಲಸು, ಹತ್ತಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಮಾವು ತಳಿಗಳು, ರಂಬೂಟಾನ್, ಮ್ಯಾಂಗೋ ಸ್ಟೇನ್, ಮಿರಾಕ್ಕಲ್ ಪ್ರೂಟ್ಸ್, ಡ್ರಾಗನ್ ಫ್ರೂಟ್ಸ್, ಹೀಗೆ ಸುಮಾರು ಒಂದು ಎಕ್ರೆ ಸ್ಥಳವನ್ನು ಪೂರ್ತಿಯಾಗಿ ಹಣ್ಣು ಬೆಳೆಯುವುದಕ್ಕಾಗಿಯೇ ಮೀಸಲಿಟ್ಟಿದ್ದು 25ಕ್ಕೂ ಹೆಚ್ಚು ವಿಧದ ಹಣ್ಣುಗಳನ್ನು ಬೆಳೆಸಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಮತ್ತು ವಿದೇಶಗಳಾದ ಮಲೇಶಿಯಾ. ಥಾಯ್‍ಲ್ಯಾಂಡ್‍ಗಳಿಂದ ತಂದಿರುವ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಅಚ್ಚು ಕಟ್ಟಾಗಿ ನೆಟ್ಟು ಬೆಳೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇವರು ನಿರಂತರವಾಗಿ ನಡೆಸಿದ ಪ್ರಯತ್ನದ ಫಲವಾಗಿ ಇಂದು ಮನಮೋಹಕವಾದ ಹಣ್ಣಿನ ತೋಟ ಸೃಷ್ಠಿಯಾಗಿದೆ. ಇವರು ಭೇಟಿ ನೀಡಿದ ಸ್ಥಳಗಳಿಂದೆಲ್ಲಾ ಒಂದಲ್ಲಾ ಒಂದು ರೀತಿಯ ಹಣ್ಣಿನ ಗಿಡಗಳನ್ನು ಸಂಗ್ರಹಿಸಿ ತರುತ್ತಾರೆ. ಕೆಲವೊಂದು ಅಪರೂಪದ ಗಿಡಗಳನ್ನು ಸಂಗ್ರಹಿಸಲು ಸಾವಿರಾರು ರೂಗಳನ್ನು ವ್ಯಯಿಸಿದ್ದೂ ಇದೆ.

 

 

ಸಾವಯವ ಕೃಷಿಯ ಸರದಾರ:

Advertisement

ಕಳೆದ ಹಲವು ದಶಕಗಳಿಂದ ಸಾವಯವ ಕ್ರಷಿಯನ್ನು ನೆಚ್ಚಿಕೊಂಡಿರುವ ತಿರುಮಲೇಶ್ವರ ಭಟ್ಟರ ಕೃಷಿ ಭೂಮಿ ಮತ್ತು ತೋಟ ಒಂದು ಸುಂದರ ನಂದನವನದಂತೆ ನಳ ನಳಿಸುತಿದೆ. ಮೂರು ಎಕ್ರೆ ಅಡಕೆ ತೋಟ ಮತ್ತು ಮೂರು ಎಕ್ರೆ ರಬ್ಬರ್ ಕೃಷಿಯನ್ನು ನಡೆಸುತ್ತಿರುವ ಇವರು ಎಲ್ಲಾ ತರಹದ ಕೃಷಿಯನ್ನೂ ಮಾಡಿ ಯಶಸ್ವಿಯಾಗಿದ್ದಾರೆ. ಆದುದರಿಂದಲೇ ಇವರ ಸಮಗ್ರ ಕೃಷಿ ಮತ್ತು ಬೆಳೆಗಳ ವೈವಿದ್ದೀಕರಣವನ್ನು ಮೆಚ್ಚಿ 2007-2008ನೇ ಸಾಲಿನಲ್ಲಿ ಸರ್ಕಾರ ಇವರಿಗೆ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿದೆ. ಸಾವಯವ ಕೃಷಿಯನ್ನು ಅಳವಡಿಸಿ ಅಡಕೆ, ತೆಂಗು, ಕಾಳು ಮೆಣಸು, ರಬ್ಬರ್, ಬಾಳೆ, ಕೊಕ್ಕೊ, ಜಾಯಿ ಕಾಯಿ, ದೇಶಿ ಹಾಗು ವಿದೇಶಿ ಹಣ್ಣುಗಳನ್ನು ಸಮರ್ಪಕವಾಗಿ ಬೆಳೆಸಿ ಇವರು ಪ್ರಶಸ್ತಿಗೆ ಪಾತ್ರರಾಗಿದ್ದರು. ಪ್ರಶಸ್ತಿ ಮುಡಿಗೇರಿ ಸುಮಾರು ಒಂದು ದಶಕದ ಬಳಿಕವೂ ತನ್ನ ಕೃಷಿ ಸಾಧನೆಯನ್ನು ಅದೇ ರೀತಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿವಿಧ ತಳಿಯ ಅಡಕೆ ಗಿಡಗಳು, ಹಲವು ವಿದಧ ಕಾಳು ಮೆಣಸಿನ ಗಿಡಗಳು ಇವರ ತೋಟವನ್ನು ವೈವಿಧ್ಯಮಯವನ್ನಾಗಿಸುತ್ತದೆ. ಅದು ಕೃಷಿ ಗಿಡಗಳೇ ಇರಲಿ, ಹಣ್ಣಿನ ಗಿಡಗಳೇ ಇರಲಿ ವಿಶೇಷವಾದುದನ್ನು ಎಲ್ಲಿ ನೋಡಿದರೂ ಅದನ್ನು ತಂದು ತನ್ನು ತೋಟದಲ್ಲಿ ಬೆಳೆಸುವುದು ಇವರ ಹವ್ಯಾಸ. ಭಿನ್ನ ರೀತಿಯಲ್ಲಿ ಕೃಷಿ ಮಾಡಿ ಕೃಷಿ ಪಂಡಿತ ಪ್ರಶಸ್ತಿ ಪಡೆದ ಇವರು ಮನೆಯ ಸುತ್ತಲೂ ತಮ್ಮ ಹಸಿರ ಪ್ರೇಮವನ್ನು ಪ್ರದರ್ಶಿಸಿ ಮನೆಯ ಪರಿಸರ ಮತ್ತು ತನ್ನ ಕೃಷಿ ಭೂಮಿಯನ್ನು ಆಕರ್ಷಣೆಯ ತಾಣವಾಗಿಸಿದ್ದಾರೆ.

 

 

ಸುಳ್ಯನ್ಯೂಸ್.ಕಾಂ ಜೊತೆ ಮಾತನಾಡಿದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಕೃಷಿಕ ತಿರುಮಲೇಶ್ವರ ಭಟ್ ಕುರಿಯಾಜೆ “ಹಣ್ಣಿನ ಗಿಡಗಳನ್ನು ಬೆಳೆಸುವುದು ಒಂದು ಹವ್ಯಾಸ. ಕೃಷಿಯ ಜೊತೆಗೆ ಒಂದು ಎಕ್ರೆ ಸ್ಥಳವನ್ನು ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸುವುದಕ್ಕಾಗಿ ಮೀಸಲಿಟ್ಟಿದ್ದೇನೆ. ಎಲ್ಲೇ ಹೋದರೂ ಅಲ್ಲಿಂದ ಆ ಭಾಗದ ವಿಶೇಷವಾದ ಮತ್ತು ಅಪರೂಪದ ಗಿಡಗಳನ್ನು ಸಂಗ್ರಹಿಸಿ ತಂದು ತೋಟದಲ್ಲಿ ಬೆಳೆಸುತ್ತೇನೆ” ಎನ್ನುತ್ತಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮುಂದುವರಿದ ಮಳೆಯಬ್ಬರ | 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ |

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…

7 hours ago

ಹವಾಮಾನ ವರದಿ | 15.06.2025 | ಜೂನ್.18ರಿಂದ ಮಳೆ ಪ್ರಮಾಣ ಕಡಿಮೆ ನಿರೀಕ್ಷೆ| ವಾಯುಭಾರ ಕುಸಿತ -ಮುಂಗಾರು ದುರ್ಬಲ ಸಾಧ್ಯತೆ

16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

17 hours ago

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

18 hours ago

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…

23 hours ago

ಗುರು ಆದಿತ್ಯ ರಾಜಯೋಗ | ಯಾರಿಗೆಲ್ಲಾ ಕುಬೇರ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

23 hours ago

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

1 day ago