ಕೃಷ್ಣಜನ್ಮಾಷ್ಟಮಿ ಶುಭಾಶಯ | ಕೃಷ್ಣನೆಂದರೆ ಪ್ರೀತಿ…..

August 11, 2020
10:50 AM

ಅದೊಂದು ವಿಶೇಷ ಸಮಾರಂಭ.  ರಂಗು ರಂಗಿನ ಕಾರ್ಯಕ್ರಮ. ನಗುವಿನಲೆಯಲ್ಲಿ  ತುಂಬಿರುವ  ವಾತಾವರಣ . ಪುಟ್ಟ ಪುಟ್ಟ  ಕಂದಮ್ಮಗಳು.    ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿ ಚೆಂದಕೆ ಆಭರಣಗಳನ್ನು ಹಾಕಿ ಅಚೀಚೆ ತಿರುಗುತ್ತಾ , ಮಕ್ಕಳ ಹಿಂದೆ ಅವರ ಅಮ್ಮಂದಿರೂ  ಹೆಜ್ಜೆ ಹಾಕುತ್ತಾ  ಪರಿಸರಕ್ಕೊಂದು ವಿಶೇಷ ಕಳೆ ಬಂದಂತಾಗಿದೆ. ಏನು  ಸ್ಕೂಲ್ ಡೇ ವರ್ಣನೆ ಅಂದುಕೊಂಡಿರಾ

Advertisement
Advertisement
? ಅಲ್ಲಪ್ಪಾ ಅಲ್ಲ. ಇದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದ ದೃಶ್ಯ.  ಅಲ್ಲಿ ಮಕ್ಕಳ ಕಲರವವೇ ತುಂಬಿತ್ತು. ತೊದಲು ನುಡಿಗೆ ಸಣ್ಣನೆಯ ದನಿಯ ಸಂಗೀತ  ಹೊಸ ಲೋಕವನ್ನೇ ಸೃಷ್ಟಿ ಸಿತ್ತು. ಮಕ್ಕಳ ಚಟುವಟಿಕೆಗೆ, ಹೆತ್ತವರ ಸೃಜನಶೀಲತೆಗೊಂದು ವೇದಿಕೆ ಸಿದ್ದವಾಗಿತ್ತು.  ಮಕ್ಕಳೆಂದರೆ  ದೇವರೇ ಅಲ್ಲವೆ ? ಮುಗ್ಧ ಮನಸಿನ ಕಂದಮ್ಮಗಳು. ಅವುಗಳ ಜಗತ್ತೇ ಸುಂದರ. ಅಲ್ಕಿ ಕಳೆಯುವ ಕ್ಷಣಗಳೇ ಅಮೂಲ್ಯ.
ಕೃಷ್ಣ ನೆಂದರೆ ಮನಸಿಗೆ ಹತ್ತಿರದವನು. ಗಣೇಶನನ್ನು ಎಷ್ಟು ಆರಾಧಿಸುತ್ತೇವೋ ಕೃಷ್ಣ ನನ್ನು ಅಷ್ಟೇ ಪ್ರೀತಿಸುತ್ತೇವೆ.  ನಾವು ನ ಎಳೆಯುತ್ತಾ ಕೃಷ್ಣ ನ ಬಾಲ್ಯ ಲೀಲೆಗಳನ್ನು ಕೇಳುತ್ತಾ ಬೆಳೆದುದು. ಕೃಷ್ಣ ನ ಬಗ್ಗೆ   ಎಷ್ಟು ಹೇಳಿದರೂ ಮುಗಿಯದ ಕಥೆಗಳು . ಒಂದಕ್ಕಿಂತ ಒಂದು ವಿಭಿನ್ನ ಸಾಹಸಗಳು. ಹುಟ್ಟಿದ ದಿನದಿಂದಲೇ ಅವನ ಸಾಹಸ ಯಾತ್ರೆಗಳು ಆರಂಭ. ಸೆರೆ ಮನೆಯಿಂದ  ಗೋಕುಲದ  ಪಯಣವೂ ರೋಚಕವೇ. ಇನ್ನೂ ಗೋಕುಲದಲ್ಲಿ ಶ್ರೀ ಕೃಷ್ಣ ನ ಬೆಳವಣಿಗೆಯ ಪ್ರತಿ ಹಂತವೂ ಒಂದು ಕಥೆಯೇ. ಕೃಷ್ಣ ನೆಂದು ಒಡೆಯನಾಗಿಯೇ  ಇರಲಿಲ್ಲ. ಸಾಮಾನ್ಯ ರಲ್ಲಿ ಸಾಮಾನ್ಯ ನಾಗಿ ಇದ್ದವ. ಎಲ್ಲಿ ಬೇಕೋ ಅಲ್ಲಿ ತನ್ನ ಶಕ್ತಿಯ ಉಪಯೋಗ ಮಾಡುತ್ತಿದ್ದವ. ಎಲ್ಲಾ ಮಕ್ಕಳಂತೆ   ತುಂಟ. ಇಂದೂ ಮಕ್ಕಳು ಜಾಸ್ತಿ ಉಪದ್ರ ಮಾಡಿದರೂ  ಹೇಳುವುದು ಕೃಷ್ಣನ ನ್ನೇ. ಇವ ನೋಡು ಕೃಷ್ಣನಂತೆ  ತುಂಟನೆಂದು. ಕೃಷ್ಣ  ಎಲ್ಲರಿಗೂ ಇಷ್ಟವಾಗುವಂತವ. ಅವನು  ದೇವರಾದರೂ ನಮ್ಮ ನಿಮ್ಮೆಲ್ಲರಂತೆ.  ಸ್ವಯಂ ಶಕ್ತಿ ವಂತನಾದರೂ ಎಲ್ಲೂ ಅನಗತ್ಯ ಪ್ರದರ್ಶನ ಮಾಡದೆ  ಅಗತ್ಯವಿದ್ದಾಗ ಪ್ರಯೋಗಿಸುವವ. ಯಾರು ಸಂಪೂರ್ಣ ಆತನಿಗೆ ಶರಣಾಗುತ್ತರೋ ಅವರನ್ನು ಸದಾ ಕಾಯುವವ.  ಕಷ್ಟಗಳು ಬಂದಾಗ , ನೆನೆದವರ ಮನದಲ್ಲಿ ನಾ ಬಂದೆ ಎಂದು ಅಲ್ಲಿರುವನಾತ.
ಬದುಕಿನ  ದುಃಖದ ಕ್ಷಣದಲ್ಲಿ ಎಲ್ಲರನ್ನು ನೆನಪಿಸಿ ಕೊಳ್ಳುತ್ತೇವೆ. ಆದರೆ ಖುಷಿಯಲ್ಲಿದ್ದಾಗಲೂ ನೆನಪಾಗುವವರು, ಮನಸ್ಸಿಗೆ  ಹತ್ತಿರದವರು. ಕೃಷ್ಣ ಕಷ್ಟದಲ್ಲೂ, ಖುಷಿಯಲ್ಲೂ  ನೆನಪಾಗುವವ. ಅವನ ಹುಟ್ಟು ಹಬ್ಬವೆಂದರೆ ಸಂಭ್ರಮವಲ್ಲವೆ?  ತಿಂಡಿಗಳೆಂದರೆ  ,ಅದರಲ್ಲೂ ಸಿಹಿಯೆಂದರೆ ಬಲು ಇಷ್ಟ. ಕೃಷ್ಣಾಷ್ಟಮಿಯಂದು  ತರತರದ ಉಂಡೆಗಳು , ಚಕ್ಕುಲಿಗಳು, ಉದ್ದಿನ ಕಡುಬು, ಪಾಯಸ , ರಸಾಯನ , ಹಾಲು, ಬೆಣ್ಣೆ , ಮೊಸರು ಹೀಗೆ ಬಗೆಬಗೆಯ ನೈವೇದ್ಯವನ್ನು ಸಮರ್ಪಿಸುವುದು  ಮೆಚ್ಚಿನ ಕೆಲಸ.  ಬಹಳ ನಿರೀಕ್ಷಿಸಿ ಆಚರಿಸುವ ತಿಂಡಿಗಳ ಹಬ್ಬವೇ ಅಷ್ಟಮಿ.
ಎಲ್ಲರಿಗೂ ಹಬ್ಬದ ಶುಭಾಶಯ ಗಳು.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ  ಜನಜಾಗೃತಿ ಮೂಡಿಸುವ  ವಿನೂತನ ಪ್ರಯತ್ನ
June 27, 2025
8:40 PM
by: ದ ರೂರಲ್ ಮಿರರ್.ಕಾಂ
ನಿರಂತರ ಮಳೆಯಿಂದಾಗಿ ತರಕಾರಿಗಳ ಬೆಲೆ ನಗರದಲ್ಲಿ ಏನಾಗಿದೆ..?
June 27, 2025
3:51 PM
by: The Rural Mirror ಸುದ್ದಿಜಾಲ
ಮಲೆ ಮಹದೇಶ್ವರ ಅರಣ್ಯದಲ್ಲಿ 4 ಹುಲಿಗಳ ಅಸಹಜ ಸಾವು | ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ
June 27, 2025
6:38 AM
by: The Rural Mirror ಸುದ್ದಿಜಾಲ
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ | ರಾಜ್ಯದ ಪ್ರಮುಖ ನದಿ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಳ
June 27, 2025
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group