ನಮ್ಮೂರ ಸುದ್ದಿ

ಕೆರೆಯಿಂದ ಕಾಡಿಗೆ ಓಡಿತು ಕಾಡುಕೋಣ….

Share

ಸುಳ್ಯ:ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೆರೆಗೆ ಬಿದ್ದಿದ್ದ ಕಾಡುಕೋಣದ ಮರಿ ಶನಿವಾರ ಸಂಜೆಯ ಹೊತ್ತಿಗೆ ಕಾಡು ಸೇರಿತು. ಶನಿವಾರ ಬೆಳಗ್ಗಿನಿಂದಲೇ ಸತತ ಪ್ರಯತ್ನದ ಬಳಿಕ ಕಾಡು ಸೇರಲು ಸಾಧ್ಯವಾಯಿತು.

Advertisement

ಸುಳ್ಯ  ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಉದಯಗಿರಿ  ಇಲ್ಲಿಯ ಕೆರೆಗೆ ಶುಕ್ರವಾರ ರಾತ್ರಿ  ಆಯ ತಪ್ಪಿ ಕಾಡುಕೋಣ ಬಿದ್ದಿತ್ತು. ಶನಿವಾರ ಬೆಳಗ್ಗೆ ಸ್ಥಳೀಯರಿಗೆ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸಂಜೆಯವರೆಗೆ ಕಾರ್ಯಾಚರಣೆ ನಡೆದಿತ್ತು.

 

ಕಾಡುಕೋಣ ಬಿದ್ದ  ವಿಷಯ ತಿಳಿದು ಜನ ಸಾಗರವೇ ಕೆರೆಯ ಕಡೆಗೆ ಬಂದಿತ್ತು. ಬೆಳಗ್ಗಿನಿಂದಲೇ ಕಾಡು ಕೋಣ ರಕ್ಷಣೆ ಕಾರ್ಯ ಪ್ರಾರಂಭವಾಯಿತು. ನೀರಿಗೆ ಬಿದ್ದು ಸುಸ್ತಾಗಿದ್ದ ಕಾಡುಕೋಣವನ್ನು  ಕೋಣವನ್ನು ಹೊರ ಹಾಕುವುದು‌ ತ್ರಾಸದಾಯಕವಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಯುವಕರ ಶ್ರಮದಿಂದ ಸಂಜೆಯ ವರೆಗೂ ಕಾರ್ಯ ಮುಂದುವರೆಯಿತು. ಕಾಡುಕೋಣವನ್ನು ರಕ್ಷಣೆ ಮಾಡುವುದು ಎಲ್ಲರ ಕಾಳಜಿಯಾಗಿತ್ತು. ಬೆಳಗ್ಗೆ ಅಡಿಕೆ ಮರದ ಪಾಲ ಹಾಕಿದ್ದರೆ ನಂತರ ಹಗ್ಗದ ಸಹಾಯದಿಂದ ಮೇಲೆಳೆದು ಓಡುವಂತೆ ಮಾಡಲಾಯಿತು. ಕೊನೆಗೂ ಸಂಜೆಯ ವೇಳೆಗೆ ಕಾಡುಕೋಣ ಕಾಡು ಸೇರಿತು.

Advertisement

ಈ  ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಅರಣ್ಯ ಇಲಾಖೆ ವಂದನೆ ಸಲ್ಲಿಸಿದೆ. ವನ್ಯ ಜೀವಿಗಳ ರಕ್ಷಣೆ ನಮ್ಮದು. ಪರಿಸರ ಉಳಿಸಿ ಎಂಬ ಘೋಷ ವಾಕ್ಯ ಮೊಳಗಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…

28 minutes ago

ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |

ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…

3 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.

ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…

7 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್

ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…

7 hours ago

ಕೃಷಿ ವಲಯದಲ್ಲಿ ರೈತ ಕಲ್ಯಾಣಕ್ಕೆ ಒತ್ತು | ರಾಷ್ಟ್ರ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ

ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…

7 hours ago