ನಾವು 2017 ರ ಜುಲೈ ತಿಂಗಳಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಒಂದು ವಾರ ಇದ್ದೆವು.ಅಲ್ಲಿನ ಜನಜೀವನದಲ್ಲಿ ಸ್ಥಳೀಯರು ಭಯದಿಂದ ವಾಸಿಸುತ್ತಿದ್ದರು ಮತ್ತು ಸದ್ಯ ನಡೆಯುತ್ತಿದ್ದ ಭಯೋತ್ಪಾದಕತೆಯ ಚಲನವಲನಗಳಿಂದ ಆಗಿರುವ ನಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು.ಮುಖ್ಯವಾಗಿ ಕಾಶ್ಮೀರವನ್ನು ಭಾರತದ ಭಾಗವೆಂದು ಹೊರರಾಜ್ಯದವರು ಪರಿಗಣಿಸಿದ್ದರು.ಅಲ್ಲಿ ವಾಸಿಸುತ್ತಿದ್ದ ಯುವಕರಿಗೆ ಆ ಭಾವನೆಇರಲಿಲ್ಲ, ಆದರೆ, ಅಲ್ಲಿನ ಬಹುತೇಕ ಮಂದಿಗೆ ಇದರಿಂದ ಲಾಭವೇನು ಇರಲಿಲ್ಲ. ದೇಶ-ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆಕಡಿಮೆ ಆಗಿತ್ತು.ಅವರು ನಿರುದ್ಯೋಗದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು.
ಇಂದು ಕೇಂದ್ರ ಸರ್ಕಾರದ ತೀರ್ಮಾನದಿಂದ ಅನಿಶ್ಚಿತತೆಯಿಂದಿರುವ ರಾಜ್ಯಕ್ಕೆ ಸ್ಪಷ್ಟ ನಿಲುವು ಸಿಕ್ಕಿದೆ. ಯಾವುದೇ ಕಾರಣಕ್ಕೂ ಕಾಶ್ಮೀರ ಭಾರತದ ಅಂಗವೆಂದು ಇದ್ದಧೋರಣೆಗೆ ಸಂವಿಧಾನತ್ಮಕವಾದ ನಿಲುವು ಮತ್ತು ದೃಢವಾದ ಮುದ್ರೆ ಬಿದ್ದಿದೆ.ಇನ್ನು ಮುಂದಾದರೂ ಕಣಿವೆ ರಾಜ್ಯಗಳಲ್ಲಿ ಭಾರತೀಯತೆ ಹೆಚ್ಚಲಿ ಮತ್ತು ಹಿಂಸೆ ನಿಲ್ಲಲಿ. ಇದುವರೆಗೆ ಬಲಿದಾನವಾದ ಭಾರತೀಯ ಸೈನಿಕರಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ.
– ಡಾ.ಡಿ.ವೀರೇಂದ್ರ ಹೆಗ್ಗಡೆಯವರು
ಧರ್ಮಸ್ಥಳ
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…
ರಾಜ್ಯದಲ್ಲಿ ಹೋಟೆಲ್ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.…
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.…
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…
ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…