ಮಡಿಕೇರಿ : ಕಣ್ ಸನ್ನೆಯ ವೀಡಿಯೋ ವೈರಲ್ ಆಗಿ ದೇಶದ ಎಲ್ಲೆಡೆ ಪ್ರಸಿದ್ಧವಾದ ಕೇರಳದ ಯುವನಟಿ ಪ್ರಿಯಾ ವಾರಿಯರ್ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದರು.
ನೆರೆಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನವರು ಎನ್.ಟಿ.ಸಿ ಗೆ ಭೇಟಿ ನೀಡಲೆಂದು ಆಹ್ವಾನಿಸಿದ ಹಿನ್ನಲೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಗೆ ಭೇಟಿ ಕೊಟ್ಟ ಪ್ರಿಯಾ ವಾರಿಯರ್, ಕೊಡಗಿನ ಜನತೆ ಒಗ್ಗಟ್ಟಿನಿಂದ ಇರಬೇಕು. ಕೊಡಗಿನ ಜನತೆ ಸತತ ಎರಡನೇ ಭಾರಿ ಪ್ರವಾಹವನ್ನು ಎದಿರಿಸುತ್ತಿದ್ದು, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸಹಾಯ ಮಾಡುವುದರ ಮೂಲಕ ಒಗ್ಗಟ್ಟಿನಿಂದಿರಬೇಕು ಎಂದರು.
ಕೊಡಗಿಗೆ ಮೂರನೇ ಭಾರಿ ಭೇಟಿ ಮಾಡುತ್ತಿರುವ ಅವರು, ಕೊಡಗಿನಲ್ಲಿ ರಮಣೀಯವಾದ ಹಾಗೂ ಅದ್ಭುತವಾದ ಪ್ರವಾಸಿ ತಾಣಗಳಿವೆ. ಪ್ರವಾಹದ ಗುಂಗಿನಲ್ಲಿರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂದರು. ಕೊಡಗಿನ ಜನತೆ ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. “ವಿಸಿಟ್ ಟು ಸೇಫ್ ಆಂಡ್ ಪೀಸ್ ಕೂರ್ಗ್” ಎಂದು ಪ್ರಿಯಾ ವಾರಿಯರ್ ಪ್ರವಾಸಿಗರಿಗೆ ಕರೆ ನೀಡಿದರು.
ಮುಂದೆ ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಮಾತನಾಡಿದ ಅವರು, ಹಿಂದಿ, ತೆಲುಗು, ಹಾಗು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಲಿದ್ದೇನೆ. ‘ಅಡಾರ್ ಲವ್’ ಮಲಯಾಳಂ ಚಿತ್ರಕ್ಕೆ ನೀಡಿದ ಬೆಂಬಲವನ್ನು ನನ್ನ ಮುಂದಿನ ಸಿನಿಮಾಗಳಿಗೂ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.
ಈ ಸಂದರ್ಭ ಪ್ರಿಯಾ ವಾರಿಯರ್ ಅಭಿಮಾನಿಗಳು ನಟಿಯೊಡನೆ ಸೆಲ್ಫಿ ತೆಗೆದುಕೊಂಡು ಆನಂದಿಸಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೊಮ್ಮೆ ಕಣ್ ಸನ್ನೆಯನ್ನು ಮಾಡಿ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಸ್ಪೈಸಸ್ ಮಳಿಗೆ, ಬಟ್ಟೆ ಮಳಿಗೆ, ಹಾಗೂ ಫ್ಯಾನ್ಸಿ ಮಳಿಗೆಗಳಿಗೆ ಭೇಟಿ ಶಾಪಿಂಗ್ ಮಾಡಿದರು.ಈ ಸಂದರ್ಭ ಪ್ರಿಯಾ ವಾರಿಯರ್ ಸ್ನೇಹಿತರು ಇದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …
ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…