ಕೊಡಗು-ಸಂಪಾಜೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ

January 5, 2020
2:03 PM

ಕೊಡಗು: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಜ.6ರ ಸೋಮವಾರದಂದು 2.30 ರಿಂದ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗದಲ್ಲಿ ರಸ್ತೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ. ಹರೀಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕುಮಾರ್, ತಾಲೂಕು ಪಂಚಾಯತ್ ಸದಸ್ಯರಾದ  ನಾಗೇಶ್ ಕುಂದಲ್ಪಾಡಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್, ಉಪಾಧ್ಯಕ್ಷರಾದ  ಸುಂದರ ಬಿಸಿಲುಮನೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ.ಸಂಪಾಜೆ ಗ್ರಾಮದ  ಗ್ರಾಮಸ್ಥರು ಹಾಜರಿರಬೇಕೆಂದು ತಿಳಿಸಿದ್ದಾರೆ.

Advertisement
Advertisement

ಸಂಪಾಜೆ ಗ್ರಾಮ ವ್ಯಾಪ್ತಿಯ ವಿವಿಧ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ವಿವರ:
1) ಸಂಪಾಜೆ -ಬೈಲು ಭಾಗದ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ.
2) ಸಂಪಾಜೆ-ಹೊದ್ದೆಟ್ಟಿ ಭಾಗದ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ.
3) ಕಡಂಬಡ್ಕ ರಸ್ತೆ ಕಾಂಕ್ರೀಟ್ ಕಾರಣ
4) ಅರೆಕಲ್ಲು ಪರಿಶಿಷ್ಟ ಪಂಗಡ ಭಾಗದ ರಸ್ತೆ ಕಾಂಕ್ರೀಟ್ ಕರಣ.
5) ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹತ್ತಿರ ರಸ್ತೆ.
6) ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ.
7) ಸಂಪಾಜೆ-ಕುಂಠಿಕಾನ ರಸ್ತೆ ಕಾಂಕ್ರೀಟ್.
8) ಸಂಪಾಜೆ-ಅಂಬಟೆಕಜೆ ಭಾಗದ ರಸ್ತೆ.
9) ಸಂಪಾಜೆ-ಚೆಡಾವು-ಮಂಗಳಪಾರೆ ರಸ್ತೆ ಡಾಮರೀಕರಣ.
10) ಚೆಡಾವು-ಮುಂಡಡ್ಕ ರಸ್ತೆ ಡಾಮರೀಕರಣ.
11) ಕೊಯನಾಡು-ಗುಡ್ಡೆಗದ್ದೆ ರಸ್ತೆ ಡಾಮರೀಕರಣ.
12) ಕೊಯನಾಡು-ಬೈಲು ರಸ್ತೆ ಡಾಮರೀಕರಣ.
13)ಕೊಯನಾಡು -ಕಲ್ಲಾಳ ರಸ್ತೆ ಡಾಮರೀಕರಣ.
14) ಕೊಯನಾಡು-ಕಲಾಯಿ ಧಾಮೋದರ ಮನೆ ಭಾಗದ ಗುಡ್ಡೆಗದ್ದೆ ರಸ್ತೆ.
15) ಕೊಯನಾಡು-ಬೈಲು ಭಾಗದ ಕುಡಿಯುವ ನೀರಿನ ನಳ್ಳಿ ನೀರು ಸಂಪರ್ಕಕ್ಕೆ ಪೈಪ್ ಲೈನ್ ಅಳವಡಿಕೆ.
16) ಸಂಪಾಜೆ-ಅಂಬಟೆಕಜೆ ಭಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ.
17) ಸಂಪಾಜೆ-ಅರೆಕಲ್ಲು ಭಾಗದಲ್ಲಿ ಕುಡಿಯುವ ನೀರಿಗೆ ಟ್ಯಾಂಕ್ ನಿರ್ಮಾಣ.
18) ಸಂಪಾಜೆ-ಕುವೇಕಾಡು ಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ.
19) ಸಂಪಾಜೆ- ಕುಂಬಾಡಿ ರಸ್ತೆಯಲ್ಲಿ ಬರುವ ಮರಿಕೆ ಭಾಗದಲ್ಲಿ ತಡೆಗೋಡೆ ಶಂಕುಸ್ಥಾಪನೆ.
20) ಸಂಪಾಜೆ-ಚೆಡಾವು ಬಾಳೆಹಿತ್ಲು ಭಾಗದಲ್ಲಿ ಸಂಪರ್ಕ ರಸ್ತೆ.
21) ಅರೆಕಲ್ಲು ರಸ್ತೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಂಕುಸ್ಥಾಪನೆ.
22) ಸಂಪಾಜೆ ಬೈಲು ಭಾಗದ ಗದ್ದೆ ಬೇಸಾಯಕ್ಕೆ ನೀರಿನ ಕಾಲುವೆ ನಿರ್ಮಾಣ.
23) ಸಂಪಾಜೆ ಕೊಲ್ಲೂರು ಕಟ್ಟದ ಹತ್ತಿರ ತಡೆಗೋಡೆ ನಿರ್ಮಾಣ.
24) ಕೊಯನಾಡು ರಬ್ಬರ್ ಎಸ್ಟೇಟ್ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ.
25) ಕೊಯನಾಡು ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ತಡೆಗೋಡೆ ನಿರ್ಮಾಣ.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group