ಎಲಿಮಲೆ: ಕೊರೊನಾ ವೈರಸ್ ಹರಡುವ ಮುನ್ನಚ್ಚರಿಕಾ ಕ್ರಮವಾಗಿ ಭಾರತ ಲಾಕ್ ಡೌನ್ ಆಗಿದ್ದು, ಈ ಸಂದರ್ಭ ಗರ್ಭಿಣಿಯನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು SKSSF ಎಲಿಮಲೆ ವಿಖಾಯ ಸದಸ್ಯರು ನೆರವಾಗಿದ್ದಾರೆ.
ಕಾವು ಸಮೀಪದ ಮಾಣಿಯಡ್ಕ ರಾಘವ್ ಅವರ ಪತ್ನಿ ಸುಶೀಲ ಎಂಬವರು ಗರ್ಭಿಣಿಯಾಗಿದ್ದು, ಪ್ರಸವ ದಿನಾಂಕ ಆಗಿಲ್ಲ ಎಂದು ಡಾಕ್ಟರುಗಳು ನಿರ್ದೇಶಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಲು ಬಂದ್ ಹಿನ್ನಲೆ ಕಷ್ಟವಾದ್ದರಿಂದ, ತಾಲೂಕು ವಿಖಾಯ ವಿಂಗ್ ಇದರ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಅವರಿಗೆ ವಿಷಯ ತಿಳಿಸಿದ್ದು, ಅವರು ಸುಳ್ಯತಾಲೂಕು ವಿಖಾಯ ವಿಂಗ್ ಕನ್ವಿನರ್ ಆದ ಕಲಂದರ್ ಎಲಿಮಲೆಯವರೊಂದಿಗೆ ಚರ್ಚಿಸಿ ನಂತರ ಎಲಿಮಲೆ SKSSF ವಿಖಾಯ ವಿಂಗ್ ಸದಸ್ಯರಾದ ರಶೀದ್ ಎಲಿಮಲೆಗೆ ವಿಷಯ ತಿಳಿಸಿದ ಕೂಡಲೆ ಸ್ಪಂದಿಸಿ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಿದ್ದಾರೆ.
ಅದಲ್ಲದೆ ಕೊರೊನಾ ಭೀತಿಯಿಂದ ಜನರು ಹೆಚ್ಚು ಜಾಗೃತೆ ವಹಿಸುವ ಸಮಯದಲ್ಲಿ ತಮ್ಮ ಕಾರಿನ ಚಾಲಕ ಸೀಟನ್ನು ವಿಶೇಷ ತಂತ್ರಜ್ಞಾನದ ಮೂಲಕ ಹಿಂಬದಿ ಕೂತವರಿಗೆ ತೊಂದರೆಯಾಗದ ರೀತಿಯಲ್ಲಿ ಹೊದಿಕೆ ಮಾಡಿ ಕಾರನ್ನು ಚಲಾಯಿಸಿದ್ದಾರೆ.
ವಿದೇಶಿಯರು ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಈ ತಂತ್ರಜ್ಞಾನವನ್ನು ಬಳಸಿದ್ದರು, ಇದರ ವೀಡಿಯೋ ನೋಡಿ ಈ ರೀತಿ ಸಿದ್ದಪಡಿಸಿದ್ದೇವೆ ಎಂದು ಎಲಿಮಲೆ ವಿಖಾಯ ಸದಸ್ಯ ರಶೀದ್ ಅವರು ತಮ್ಮ ಅಭಿಪ್ರಾಯವನ್ನು ವೆಕ್ತಪಡಿಸಿದ್ದಾರೆ.
ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆಯ ಕಾರಣದಿಂದ ಮುಂಗಾರು ಸ್ವಲ್ಪ ಚುರುಕಾಗಿದ್ದು,…
ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಕ್ವಿಂಟಾಲ್ಗೆ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ…
ಒಬ್ಬರಿಂದೊಬ್ಬರು ಕಾಲೆದುಕೊಂಡರೆ ಹೇಗಾದೀತು..? ಇದರ ಬದಲಾಗಿ ನೆರವಾಗುವ ಸಂದೇಶ ಹರಿಡಿದರೆ ಹೇಗೆ.. ಈ…
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ಜೋರಾದ ಗಾಳಿಯೊಂದಿಗೆ ವ್ಯಾಪಕವಾಗಿ ಮಳೆಯಾಗಲಿದೆ…
ಪಶುಪಾಲಕರು ಗಮನಿಸಬೇಕಾದ ಹಲವು ಅಂಶಗಳಗಳ ಬಗ್ಗೆ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಔಷಧಶಾಸ್ತ್ರಮತ್ತು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490