ಸುಳ್ಯ: ಕೊರೊನಾ ವೈರಸ್ ಸೋಂಕಾದ ವ್ಯಕ್ತಿಗಳು ಹಾಗೂ ಕ್ವಾಂರೇಂಟೈನ್ ನಲ್ಲಿರುವ ಮಂದಿ ಹಾಗೂ ಅವರ ಕುಟುಂಬದ ಮಂದಿ ಸಹಜವಾಗಿಯೇ ಮಾನಸಿಕವಾಗಿ ನೊಂದಿರುತ್ತಾರೆ. ಇಂತಹವರಿಗೆ ಆನ್ ಲೈನ್ ಮೂಲಕ ನೆರವಾಗಲು, ಆಪ್ತಸಮಾಲೋಚನೆ ಮಾಡಲು ತಂಡ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸೋಚರ ಸಂಸ್ಥೆಯ ಮೂಲಕ ರಚನೆಯಾಗಿರುವ ಕೌನ್ಸಿಲಿಂಗ್ ತಂಡವನ್ನು ಸುಳ್ಯದ ಅಕ್ಷರ ದಾಮ್ಲೆ ನಿರ್ವಹಿಸುತ್ತಿದ್ದು, ಸೋಚರ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ. ಎಲ್ಲಾ ವೈದ್ಯರು, ಆಪ್ತ ಸಮಾಲೋಚಕರು ಉಚಿತವಾಗಿ ಈಗ ಬಿಡುವು ಮಾಡಿಕೊಂಡು ಸಾರ್ವಜನಿಕ ಸೇವೆ ನಡೆಸುತ್ತಿದ್ದಾರೆ.
ಸೋಚರ ಎಂಬ ಸಂಸ್ಥೆ ಸುಮಾರು 30 ವರ್ಷಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಇದೀಗ ಈ ಸಂಸ್ತೆ ಸಾರ್ವಜನಿಕ ಕಾಳಜಿಯಿಂದ ಕೊರೊನಾ ಭಯ ನಿವಾರಣೆ ಮಾಡಲು ಹಾಗೂ ಈ ವೈರಸ್ ಸೋಂಕಾಗಿರುವ ವ್ಯಕ್ತಿಗಳ, ಕುಟುಂಬದೊಂದಿಗೆ ಆಪ್ತ ಸಮನಾಲೋಚನೆ ನಡೆಸಿ ಧೈರ್ಯ ತುಂಬುವ ಕಾರ್ಯವನ್ನು ಅನ್ ಲೈನ್ ಮೂಲಕ ಮಾಡುತ್ತಿದೆ. ಇದಕ್ಕೆ ಸುಳ್ಯದ ಅಕ್ಷರ ದಾಮ್ಲೆ ಅವರನ್ನು ಸಂಪರ್ಕಿಸಿ ಅವರ ನೇತೃತ್ವದಲ್ಲಿ ಇದೀಗ ಸಮಾಲೋಚನಾ ಚಟುವಟಿಕೆ ಆರಂಭಿಸಲಾಗಿದೆ.
ಇದೀಗ 3 ವಿಭಾಗದಲ್ಲಿ ಕೆಲಸ ಮಾಡಲಾಗುತ್ತದೆ, ಕೋವಿಡ್-19 ಸೋಂಕಿಗೆ ಒಳಗಾದವರು , ಕೋವಿಡ್-19 ಕ್ವಾರಂಟೇನ್ ನಲ್ಲಿ ಇರುವವರು ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಪ್ರತ್ಯೇಕವಾಗಿ ಹೀಗೆ 3 ವಿಭಾಗದಲ್ಲಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.
ಯಾವುದೇ ರೀತಿಯ ಸಹಾಯ ಬೇಕಿದ್ದರೆ, ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಪರ್ಕದ ಸಂಖ್ಯೆಗೆ ಕರೆ ಮಾಡಬಹುದು.
ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲು ಹಾಗೂ ಗಾಳಿ ಮಳೆಯ ಅಪಾಯ ಇರುವ ಹಿನ್ನೆಲೆಯಲ್ಲಿ…
ರಾಜ್ಯದಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೇರಳದಿಂದ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.…
ಅಕ್ಕಿ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಪರಿವರ್ತಿಸಿದಾಗ ಮಣ್ಣಿನ ನೈಟ್ರೋಜನ್ ಲಭ್ಯತೆ ಕಡಿಮೆಯಾಗುತ್ತದೆ ಎಂದು…
ರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಹಾಗೂ…
ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಬೆಳೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ವ್ಯವಸ್ಥೆಗಳನ್ನು ಸರ್ಕಾರ…
ಉತ್ತರ ಕನ್ನಡದಲ್ಲಿ ಎಲೆಚುಕ್ಕಿ ರೋಗದಿಂದ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಸಾಲ ಮರುಪಾವತಿ ಅವಧಿ…