Advertisement
ಸುದ್ದಿಗಳು

ಕೊರೊನಾ ಲಾಕ್ಡೌನ್ | ಗ್ರಾಮೀಣ ಭಾಗದ ಈ ಯುವಕರ ಸೇವೆಗೊಂದು ಸಲಾಂ | ಮನೆ ಮನೆಗೆ ಔಷಧಿ ವಿತರಣೆಯ ಸೇವೆಯಲ್ಲಿದೆ ಈ ತಂಡ | ತಹಶೀಲ್ದಾರ್ ನೀಡಿದರು ಅಭಯ |

Share

ಸುಳ್ಯ: ಕೊರೊನಾ ಲಾಕ್ಡೌನ್ ಜನರಿಗೆ ಎಲ್ಲಾ ಪಾಠ ಕಲಿಸಿದೆ. ಮನೆಯಿಂದ ಹೊರಬಾರಲಾಗದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ  ನಿಜವಾದ ಸೇವೆ ಮಾಡುವ ಮಂದಿ ಪ್ರಚಾರವಿಲ್ಲದೆ ಈ ಕಾರ್ಯವನ್ನು ಈಗಲೂ  ಮಾಡುತ್ತಿದ್ದಾರೆ. ಸಂಕಷ್ಟಗಳನ್ನು  ಎದುರಿಸಿಕೊಂಡು ಸಮಾಜಕ್ಕಾಗಿ, ತನ್ನೂರಿನ ಮಂದಿಗಾಗಿ ಕೆಲಸ ಮಾಡುವ ಮಂದಿಯನ್ನು  ಸಮಾಜ   ಗುರುತಿಸಿಬೇಕಾದ್ದು ಕರ್ತವ್ಯ. ಸೇವೆ ಎಂಬ ಯಜ್ಞದಲ್ಲಿ  ತೊಡಗಿಸಿಕೊಂಡ ನಿಜವಾದ ಕಾರ್ಯಕರ್ತರಿಗೆ ಬೆಂಬಲವಾಗಬೇಕಾದ್ದು ಸಮಾಜದ ಕರ್ತವ್ಯವೂ ಹೌದು.

ಈಗ ಹೇಳಲು ಹೊರಟಿರುವುದು  ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಕೊಲ್ಲಮೊಗ್ರದ 3 ಜನ ಯುವಕರ ತಂಡ 6 ಗ್ರಾಮಗಳ ಜನರಿಗೆ ಅಗತ್ಯ ವಸ್ತುಗಳಲ್ಲಿ ಒಂದಾಗಿ ಔಷಧಿ ತಂದು ಕೊಡುವ ಕೆಲಸ ಮಾಡುತ್ತಿದೆ. ಯಾವುದೇ ಶುಲ್ಕ ಪಡೆಯದೆ ಮನೆ ಮನೆಗೆ ತೆರಳಿ ಔಷಧಿಯನ್ನು ನೀಡುವ ಕಾರ್ಯ  ಕಳೆದ 15 ದಿನಗಳಿಂದ ಮಾಡುತ್ತಿದೆ. ಈ ತಂಡದಲ್ಲಿ  ಉದಯ ಶಿವಾಲ , ತಾಪಂ ಸದಸ್ಯ  ಉದಯ  ಕೊಪ್ಪಡ್ಕ  ಹಾಗೂ ಜಯಪ್ರಕಾಶ್ ಕಜ್ಜೋಡಿ ಈ ಸೇವೆಯಲ್ಲಿ  ತೊಡಗಿಕೊಂಡವರು.

ಉದಯ ಶಿವಾಲ

 

ಉದಯ ಕೊಪ್ಪಡ್ಕ

 

ಜಯಪ್ರಕಾಶ್ ಕಜ್ಜೋಡಿ

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಅಗತ್ಯವಾಗಿ  ಔಷಧಿ  ಬೇಕಾಗಿರುವ ಮಂದಿ ಚೀಟಿ ಸಹಿತ ಹಣ ನೀಡುತ್ತಾರೆ. ಅದನ್ನು  ಸಂಗ್ರಹಿಸಿ ಸುಳ್ಯ ಅಥವಾ ಪುತ್ತೂರಿಗೆ ತೆರಳಿ ಔಷಧಿ ತಂದು ಸಂಜೆ ಮನೆ ಮನೆಗೆ ನೀಡುತ್ತಾರೆ. ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದಾರೆ.  ಕೊಲ್ಲಮೊಗ್ರ ಸಹಿತ ಆಸುಪಾಸಿನ 3 ಗ್ರಾಮಗಳಲ್ಲಿ ಈ ಸೇವೆ ಆರಂಭ ಮಾಡಿ ಇಂದು 6 ಗ್ರಾಮದ ಜನರಿಗೆ ತಮ್ಮ ಸೇವೆ ನೀಡುತ್ತಿದ್ದಾರೆ.ಈಗ ಕೆಲವೊಂದು ಜೌಷಧಗಳು ಪೂರೈಕೆ ಇಲ್ಲದ ಕಾರಣ ಸಮಸ್ಯೆ  ಉಂಟಾಗಿದೆ. ಈ ಹಿನ್ನಲೆಯಲ್ಲಿ ಈ ತಂಡ ಬುಧವಾರ  ಮಂಗಳೂರು ತೆರಳಿ  ಜೌಷಧ ತರುವ ಬಗ್ಗೆಯೂ ಸಿದ್ಧತೆ ನಡೆಸಿದೆ. ಇದೇ ಸಂದರ್ಭ ಈ ಮಾಹಿತಿ ಪಡೆದ ಸುಳ್ಯ ತಹಶೀಲ್ದಾರ್ ಅನಂತ ಶಂಕರ್ ಅವರು ತಂಡದ ಉದಯ ಶಿವಾಲ ಅವರ ಜೊತೆ ಮಾತುಕತೆ ನಡೆಸಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆ ಸುಳ್ಯ ಹಾಗೂ ಪುತ್ತೂರು ಶಾಸಕರ ಜೊತೆಯೂ ಮಾತುಕತೆ ನಡೆಸಿ ಅನುಮತಿ ಬಗ್ಗೆ ಮಾತನಾಡಿದ್ದಾರೆ.

ಲಾಕ್ಡೌನ್ ಇರುವ ಸಂದರ್ಭ ವಾಹನಗಳ ಓಡಾಟಕ್ಕೆ ಮಿತಿ ಇದೆ. ಈ ತಂಡದ ಸದಸ್ಯರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದು ಅಗತ್ಯ ಔಷಧಿ ಸರಬರಾಜು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಇದೊಂದು ಉತ್ತಮವಾದ ಸೇವೆಯಾಗಿದೆ.

ಈಗಾಗಲೇ 170 ಕ್ಕೂ ಅಧಿಕ  ಮನೆಗಳಿಗೆ ಔಷಧಿ ತಲುಪಿಸಿದ್ದಾರೆ.  ಸುಮಾರು 35 ಸಾವಿರ ರೂಪಾಯಿಯಷ್ಟು ಮೌಲ್ಯದ ಔಷಧಿ ತರಲಾಗಿದೆ ಎನ್ನುತ್ತಾರೆ ಉದಯ ಶಿವಾಲ. ಕೆಲವು ಔಷಧಿಗಳು ಸುಳ್ಯ, ಪುತ್ತೂರಿನಲ್ಲಿ ಲಭ್ಯವಿಲ್ಲ.ಅಂತಹವರಿಗೆ ಕಷ್ಟವಾಗುತ್ತಿದೆ. ಇದಕ್ಕಾಗಿ ಮಂಗಳೂರಿಗೆ ಅವಕಾಶ ಕೇಳಿದ್ದೇವೆ ಎನ್ನುತ್ತಾರೆ ಅವರು. ಬೆಳಗ್ಗೆ ಬೇಗನೆ ಹೊರಟು ಮಧ್ಯಾಹ್ನ 2 ಗಂಟೆ ಒಳಗಡೆ ಕೊಲ್ಲಮೊಗ್ರ ತಲುಪುವ ಗುರಿ ಇರಿಸಿದ್ದೇವೆ. ಆ ಬಳಿಕ ಮನೆ ಮನೆಗೆ ವಿತರಣೆ ಮಾಡುತ್ತೇವೆ. ಇದೊಂದು ಸೇವೆ ಎನ್ನುತ್ತಾರೆ ಉದಯ.

ಕೆಲವೊಂದು ಕಾಲನಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಅಗತ್ಯ ಜೌಷಧ ಬೇಕಾದವರನ್ನು ಸಂಪರ್ಕಿಸಿ ಅವರ ಮನೆಗೆ ತೆರಳಿ ಜೌಷಧ ಚೀಟಿಯನ್ನೂ ಪಡೆದುಕೊಂಡು ತೆರಳಿ ಸಂಜೆ ಪುನಃ ಅವರ ಮನೆಗೆ ಜೌಷಧ ತಲುಪಿಸಲಾಗುವುದು. ಯಾವುದೇ ಶುಲ್ಕವನ್ನೂ ಪಡೆಯದೆ
ಕರೆ ಮಾಡಿದ ತಕ್ಷಣ ಅವರ ಮನೆಗೆ ತೆರಳುತ್ತೇವೆ ಎನ್ನುತ್ತಾರೆ ಉದಯ. ನಮ್ಮ ಕಾರ್ಯಕ್ಕೆ ನೆರವಾದ, ಶ್ಲಾಘಿಸಿದ ತಹಶೀಲ್ದಾರ್ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎನ್ನುತ್ತಾರೆ ಉದಯ ಶಿವಾಲ.

ಈ ಬಗ್ಗೆ ಸಂಪರ್ಕಕ್ಕೆ , 

ಉದಯ ಶಿವಾಲ :  9483904542

ಉದಯ ಕೊಪ್ಪಡ್ಕ (ತಾಪಂ ಸದಸ್ಯ):  9449366163

ಜಯಪ್ರಕಾಶ್ ಕಜ್ಜೋಡಿ : 9449751757

( ಬೆಳಗ್ಗೆ  6 ಗಂಟೆ ಒಳಗೆ ಜೌಷಧಿ ಚೀಟಿಗಳ ಬಗ್ಗೆ ಮಾಹಿತಿ ನೀಡಬೇಕು)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

6 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

14 hours ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

20 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

21 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

21 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

21 hours ago