ಸುಳ್ಯ:ಕೊರೊನಾ ವೈರಸ್ ದ ಕ ಜಿಲ್ಲೆ ಹಾಗೂ ಕಾಸರಗೋಡು ಪ್ರದೇಶದಲ್ಲಿ ಹರಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಸಂಪೂರ್ಣ ಬಂದ್ ಆಚರಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನಾದ್ಯಂತ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಪ್ರತೀ ಬಾರಿ ಹೇಳಿಯೂ ಅನಗತ್ಯವಾಗಿ ಪೇಟೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಸುಳ್ಯ ಪೇಟೆ ಸಂಪೂರ್ಣ ಬಂದ್ ಆಗಿದ್ದು ಹಾಲಿನ ಅಂಗಡಿಗಳು ಬೆಳಗ್ಗೆ ತೆರೆದಿತ್ತು. ಕೆಲವು ಮೆಡಿಕಲ್ ತೆರೆದಿದೆ. ಆಸ್ಪತ್ರೆ ಚಿಕಿತ್ಸೆಗೆ ಲಭ್ಯವಿದೆ.
ಉಳಿದಂತೆ ಸಂಪಾಜೆ, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಸೇರಿದಂತೆ ಗ್ರಾಮೀಣ ಭಾಗಗಳು ಬಂದ್ ಆಗಿವೆ. ಬಳ್ಪದಲ್ಲಿ ಬೆಳಗ್ಗೆ ಗುಂಪು ಸೇರಿದವರನ್ನು ಪೊಲೀಸರು ಚದುರಿಸಿದ್ದಾರೆ. ಗುತ್ತಿಗಾರಿನಲ್ಲಿ ಅನಗತ್ಯ ತಿರುಗಾಡಿದವರಿಗೆ ಪೊಲೀಸರು ಲಾಠಿ ಬೀಸಿದ್ದಾರೆ. ಬೆಳ್ಳಾರೆ, ಪಂಜದಲ್ಲೂ ಇದೇ ವಾತಾವರಣ ಕಂಡುಬಂದಿದೆ.
ಪಂಜ ಹಾಲು ಸಂಗ್ರಹಣಾ ಕೇಂದ್ರದಲ್ಲಿ ವಿವಿಧ ಸಹಕಾರಿ ಸಂಘದಿಂದ ಆಗಮಿಸುವ ಹಾಲು ಸೇರಿ ಸುಮಾರು 2500 ಲೀಟರ್ ಹಾಲು ಪ್ರತಿದಿನ ಸಂಗ್ರಹವಾಗುತ್ತದೆ. ಆದರೆ ಇದಕ್ಕೆ ಇಂದು ಅವಕಾಶ ಇರಲಿಲ್ಲ. ಕೆಲವು ಹೈನುಗಾರರು ಪ್ರತೀ ದಿನ 40-50 ಲೀಟರ್ ಹಾಲು ಸಂಘಕ್ಕೆ ಹಾಕುತ್ತಾರೆ.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…