Advertisement
ರಾಷ್ಟ್ರೀಯ

ಕೊರೊನಾ ವೈರಸ್ ತವರು ವುಹಾನ್ ಈಗ ಕಡಿಮೆ ಅಪಾಯದ ಪ್ರದೇಶ ಎಂದು ಚೀನಾ ಘೋಷಣೆ | ಜ. 23 ರಿಂದ  ಲಾಕ್ಡೌನ್ ನಲ್ಲಿದ್ದ ವುಹಾನ್ |

Share

ಬೀಜಿಂಗ್: ಇಡೀ ಜಗತ್ತಿಗೆ ಕೊರೊನಾ ವೈರಸ್ ಹರಡಿದ ಚೀನಾದಲ್ಲಿ ಮೊದಲು ವೈರಸ್ ಕಂಡುಬಂದ ವುಹಾನ್ ಈಗ ಕಡಿಮೆ ಅಪಾಯದ ಪ್ರದೇಶ ಎಂದು ಚೀನಾ ಘೋಷಣೆ ಮಾಡಿದೆ. ಕಳೆದ ಕೆಲವು ದಿನಗಳ ನಿಗಾದ ಬಳಿಕ ಚೀನಾ ಈ ಘೋಷಣೆ ಮಾಡಿದೆ.

Advertisement
Advertisement
Advertisement
Advertisement

ಚೀನಾದ ಆರೋಗ್ಯ ಅಧಿಕಾರಿಗಳು ಭಾನುವಾರ ಈ ಮಾಹಿತಿ ತಿಳಿಸಿದ್ದು ಚೀನಾದ ಸ್ಟೇಟ್ ಕೌನ್ಸಿಲ್ ಹೊರಡಿಸಿದ ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಲಾದ ಅಪಾಯದ ಮಾನದಂಡಗಳ ಪ್ರಕಾರ, ಕಳೆದ 14 ದಿನಗಳಲ್ಲಿ ಹೊಸದಾಗಿ ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳಿಲ್ಲದ ನಗರಗಳು ಮತ್ತು ಜಿಲ್ಲೆಗಳನ್ನು ಈಗ ಕಡಿಮೆ-ಅಪಾಯದ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ  ಕೊರೊನಾ ವೈರಸ್ ತವರು ವುಹಾನ್ ಕೂಡಾ ಸೇರಿದೆ.

Advertisement

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (ಎನ್‌ಎಚ್‌ಸಿ) ಭಾನುವಾರ ದೇಶದಲ್ಲಿ 16 ಹೊಸ ಕೊರೊನಾ ಪ್ರಕರಣಗಳಿದೆ ಎಂದು  ಪ್ರಕಟಿಸಿದೆ. ಶನಿವಾರ ಯಾವುದೇ  ಮೃತಪಟ್ಟ ವರದಿಯಾಗಿಲ್ಲವಾದ್ದರಿಂದ ಸಾವಿನ ಸಂಖ್ಯೆ 4,632 ರಷ್ಟಿದೆ ಎಂದು ಅದು ಹೇಳಿದೆ. ಚೀನಾದಲ್ಲಿ ಒಟ್ಟಾರೆ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳು ಶನಿವಾರದ ವೇಳೆಗೆ 82,735 ಕ್ಕೆ ತಲುಪಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿರುವ 1,041 ರೋಗಿಗಳು, ಚೇತರಿಕೆಯ ನಂತರ ಬಿಡುಗಡೆಯಾದ 77,062 ಜನರು ಮತ್ತು ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 4,632 ಮಂದಿ ಎಂದು ವರದಿ ಹೇಳಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಚೀನಾದ ವುಹಾನ್ ನಲ್ಲಿ  ಕಂಡುಬಂದಿತ್ತು. ನಂತರ ಅದು ಹರಡಿತ್ತು. ಏ.16 ರ ಹೊತ್ತಿಗೆ, ವುಹಾನ್‌ನಲ್ಲಿ 50,333 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. 3,869  ಮಂದಿ ಸಾವನ್ನಪ್ಪಿದ್ದರು. ಆದರೆ ಇಡೀ ಚೀನಾದಲ್ಲಿ ಒಟ್ಟಾರೆ ಮೃತಪಟ್ಟವರು  4,632 ಜನ.

Advertisement

ಇದೀಗ ಅಧಿಕೃತ ಅಧಿಸೂಚನೆಗಳ ಪ್ರಕಾರ ವುಹಾನ್ ನಗರದಲ್ಲಿ ವೈರಸ್ ಹರಡಿದ ಪ್ರಕರಣಗಳು ಮತ್ತು ಸಾವುಗಳು ಕಡಿಮೆಯಾದ ಕಾರಣ ಕಡಿಮೆ ಅಪಾಯದ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ವುಹಾನ್ ನಿಂದ ಹೊರಹೋಗುವ ಹಾಗೂ ಒಳಬರುವ ಜನರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.

ಅಧಿಕ ಜನಸಂಖ್ಯೆ ಹೊಂದಿರುವ ಚೀನಾದ  ಹುಬೈ  ಹಾಗೂ ವುಹಾನ್ ಜ. 23 ರಿಂದ  ಲಾಕ್ಡೌನ್ ನಲ್ಲಿತ್ತು. ಎ.8 ರಂದು ಸಡಿಲಿಕೆ ಮಾಡಿತ್ತು. ಇದೀಗ ಕಡಿಮೆ ಅಪಾಯದ ಪ್ರದೇಶ ಎಂದು ಗುರುತಿಸಲಾಗಿದೆ.

Advertisement

( ಪಿಟಿಐ ವರದಿ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…

26 mins ago

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…

1 hour ago

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |

ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…

1 hour ago

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

15 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

15 hours ago

ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು

ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…

15 hours ago