ಬೆಳ್ಳಾರೆ: ಕಳಂಜ ಬಾಳಿಲ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕಳಂಜ ರೈತ ಸ್ನೇಹಿತರ ಕೂಟದ ಜಂಟಿ ಸಹಯೋಗದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಾಣು ಹಾಗು ಸಾವಯವ ಗೊಬ್ಬರ ತಯಾರಿಕ ಘಟಕದ ಉತ್ಪನ್ನ ಸಾವಯವ ಸೂಕ್ಷ್ಮಾಣು ಪೋಷಕಾಂಶ ಗೊಬ್ಬರದ ಕುರಿತು ಮಾಹಿತಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವು ಕೋಟೆಮುಂಡುಗಾರಿನ ಸಂಘದ ಪ್ರಧಾನ ಕಚೇರಿ ಸಭಾಭವನದಲ್ಲಿ ನಡೆಯಿತು.
ಮಾಹಿತಿ ಮತ್ತು ತರಬೇತುದಾರ ವಿಷ್ಣುಮೂರ್ತಿ.ಜಿ.ರಾವ್ ಸಾವಯವ ಪೋಷಕಾಂಶ ಗೊಬ್ಬರ ತಯಾರಿಕೆ ಮತ್ತು ಬಳಸುವಿಕೆಯ ರೀತಿ, ಗೊಬ್ಬರದ ಪ್ರಮಾಣದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಹಿತಿದಾರ ಮತ್ತು ಗ್ರಾಮದ ಕೃಷಿಕರ ಮಧ್ಯೆ ವಿವಿಧ ಪ್ರಶ್ನೋತ್ತರ ಹಾಗು ಚರ್ಚೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಕಳಂಜ ಬಾಳಿಲ ಪ್ರಾಕೃಪಸ ಸಂಘದ ಅಧ್ಯಕ್ಷ ಸುಧಾಕರ.ರೈ ಎ.ಎಂ, ಉಪಾಧ್ಯಕ್ಷ ಲಿಂಗಪ್ಪ ಗೌಡ ತಂಟೆಪ್ಪಾಡಿ, ನಿರ್ದೇಶಕರಾದ ಕುಞ್ಞಂಣ್ಣ ನಾಯ್ಕ ಬಾಳೆಗುಡ್ಡೆ, ಮುಗುಪ್ಪು ಕೂಸಪ್ಪ ಗೌಡ, ವಿಶ್ವನಾಥ ರೈ ಕಳಂಜ, ಕಾರ್ಯನಿರ್ವಹಣಾಧಿಕಾರಿ ವೆಂಕಪ್ಪಯ್ಯ.ಕೆ, ಹಾಗೂ ಕಳಂಜ ಗ್ರಾಮದ ರೈತರು, ಕೃಷಿಕರು ಉಪಸ್ಥಿತರಿದ್ದರು.
ಕಳಂಜ ರೈತ ಸ್ನೇಹಿತರ ಕೂಟದ ಸಂಚಾಲಕ ಪವನ ವೆಂಕಟ್ರಮಣ ಭಟ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…
ರಾಜ್ಯ ಬಜೆಟ್ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…