Advertisement
ಮಾಹಿತಿ

ಕ್ಯಾಂಪ್ಕೋದಿಂದ ಅಡಿಕೆ ಸುಲಿಯುವ ಯಂತ್ರಕ್ಕೆ ಬಹುಮಾನ

Share

ಸುಳ್ಯ: ಚಾಲಿ ಅಡಿಕೆ ಕೃಷಿಕರಿಗೆ ಅಡಿಕೆ ಸುಲಿಸುವ ಕಾರ್ಯ ಸಲೀಸಾಗಿ ನಡೆಯುತ್ತಿಲ್ಲ. ಸಾಂಪ್ರದಾಯಿಕ ಶೈಲಿಯಲ್ಲಿಅಡಿಕೆ ಸುಲಿಯುವ ತಂಡಗಳಿದ್ದರೂ ಕೃಷಿಕರ ಅಗತ್ಯಕ್ಕೆ ಅವರು ಒದಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಅಡಿಕೆ ಸುಲಿಯುವ ಅನೇಕ ಯಂತ್ರಗಳು ಈಗಾಗಲೆ ಬಂದಿದ್ದರೂ ನೂರಕ್ಕೆ ನೂರು ನಿಖರ ಕಾರ್ಯಕುಶಲತೆ ಹೊಂದಿದವು ಕಡಿಮೆ.

ಈ ನಿಟ್ಟಿನಲ್ಲಿ ಪ್ರಯೋಗಗಳು, ಆವಿಷ್ಕಾರಗಳು ಮತ್ತುಇನ್ನಷ್ಟು ಸಂಶೋಧನೆಗಳು ನಡೆಯುತ್ತಿರುವುದು ಸಮಾಧಾನಕರ. ಈ ಕಾರ್ಯವನ್ನು ಪ್ರೋತ್ಸಾಹಿಸಿ ಇನ್ನಷ್ಟು ಪೂರ್ಣ ಪ್ರಮಾಣದಲ್ಲಿಉತ್ತಮ ಗುಣಮಟ್ಟದ ಕೆಲಸ ನಿರ್ವಹಿಸಿಕೊಡುವ ಯಂತ್ರಗಳು ಬಂದು ಅಡಿಕೆ ಕೃಷಿಕರಿಗೆ ನೆರವಾಗಬೇಕೆನ್ನುವುದು ಕ್ಯಾಂಪ್ಕೋದ ಆಶಯ. ಅದಕ್ಕಾಗಿ ಚಾಲಿ ಅಡಿಕೆ ಸುಲಿಯುವ ಯಂತ್ರಗಳ ನಡುವೆ ಸ್ಪರ್ಧೆಯೊಂದನ್ನು ಏರ್ಪಡಿಸಿ ಉತ್ತಮ ಕಾರ್ಯಕುಶಲತೆ ಹೊಂದಿದ ಯಂತ್ರ ಆವಿಷ್ಕಾರ ಮಾಡಿದವರಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲು ಕ್ಯಾಂಪ್ಕೋ ಮುಂದಾಗಿದೆ.

ಸ್ಪರ್ಧಾ ವಿಜೇತರಿಗೆ ಫೆಬ್ರವರಿ 8ರಂದು ಕಾಸರಗೋಡು ಜಿಲ್ಲೆಯ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಬಹುಮಾನವನ್ನು ವಿತರಿಸಲಾಗುವುದು. ಯಂತ್ರ ಕಾರ್ಯನಿರ್ವಹಿಸುವ ಸ್ಥಳಕ್ಕೆ ಬಂದು ಯಂತ್ರದ ಕಾರ್ಯಕುಶಲತೆಯನ್ನು ಖುದ್ದಾಗಿ ಗಮನಿಸಿ ಅಂಕ ನೀಡುವ ತಂಡವನ್ನು ಕ್ಯಾಂಪ್ಕೋ ನಿಯೋಜಿಸಲಿದ್ದುಇದಕ್ಕಾಗಿ ಯಂತ್ರ ಆವಿಷ್ಕಾರ ಮಾಡಿದವರು ನೋಂದಾವಣೆ ಮಾಡಬೇಕಿದೆ.

ನೋಂದಾವಣೆ ಮಾಡಲು ಕೊನೆಯ ದಿನ 25 ಜನವರಿ 2020. ನೋಂದಾಯಿಸಲು ಮತ್ತು ಸಂಪರ್ಕಕ್ಕೆ : ಕಿಶನ್ ಪಳ್ಳತ್ತಡ್ಕ, ಕ್ಯಾಂಪ್ಕೊ ಮುಖ್ಯಕಚೇರಿ, ಮಂಗಳೂರು,0824-2441594, ಮೊ.-9495096848, ಈ-ಮೇಲ್ – hrdcampcoho@gmail.com

ಷರತ್ತುಗಳಿಗಾಗಿ ಸಂಸ್ಥೆಯ ಜಾಲತಾಣ www.campco.orgಗೆ ಭೇಟಿ ನೀಡಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

2 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

2 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

4 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

7 hours ago