ಯಕ್ಷಗಾನ : ಮಾತು-ಮಸೆತ

ಕ್ರೋಧ ಬಂದಾಗ ಬುದ್ಧಿ ನಷ್ಟ, ಬುದ್ಧಿ ನಷ್ಟವಾದರೆ ಸರ್ವನಾಶ……

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ

Advertisement

 

(ಶಾರದೆಗೆ ವಿದ್ಯಾಧಿದೇವತೆಯ ಸ್ಥಾನವನ್ನು ಕೊಡಲುದ್ಯುಕ್ತನಾದ ಬ್ರಹ್ಮನು ಮನ್ಮಥ ಮತ್ತು ಈಶ್ವರನಿಗೆ ಪಟ್ಟಾಭಿಷೇಕ ಸಮಾರಂಭಕ್ಕೆ ಆಮಂತ್ರಣವಿಲ್ಲ – ಎನ್ನುವ ಸಂದರ್ಭ)

“… ಶಾರದಾ…. ನಿನ್ನ ಪಟ್ಟಾಭಿಷೇಕಕ್ಕೆ ಕಾಮ ಬರಕೂಡದು. ಕಾಮದ ನಂತರ ಕ್ರೋಧ. ಕ್ರೋಧ ಬಂದಾಗ ಬುದ್ಧಿ ನಷ್ಟ. ಬುದ್ಧಿ ನಷ್ಟವಾದರೆ ಸರ್ವನಾಶ. ಈ ಕಾಮಕ್ಕೆ ಗಂಡು ಹೆಣ್ಣನ್ನು ಒಂದುಗೂಡಿಸುವ ಕೆಲಸ. ನೀನು ಕಾಳನ್ನು ನೋಡಿರಬಹುದು. ಅದರಲ್ಲಿ ಹೊಟ್ಟು ಇದ್ದರೆ ಪ್ರಯೋಜನವಿಲ್ಲ. ಈ ಹೊಟ್ಟಿಗೂ ಕಾಳಿಗೂ ಸಂಬಂಧ ಕಲ್ಪಿಸುವ ಯಾವ ಸ್ನಿಗ್ಧ ಪದಾರ್ಥ ಇದೆಯೋ ಅದಕ್ಕೆ ‘ಸ್ನೇಹ’ ಅಂತ ಹೆಸರು. ಇದು ಕಾಮದ ಸೂಕ್ಷ್ಮ ಸ್ವರೂಪ. ಆ ಸ್ನಿಗ್ಧ ಪದಾರ್ಥ ಹುರಿಯುವುದರಿಂದಲೋ, ಸುಡುವುದರಿಂದಲೋ ನಷ್ಟವಾದರೆ ಬಿತ್ತಿದರೆ ಬೆಳೆ ಬರುವುದಿಲ್ಲ ಎಂಬ ನ್ಯಾಯೇಣ ಕಾಮನ ಸಂಪರ್ಕವೂ ಈ ವಿದ್ಯಾಪೀಠಕ್ಕೆ ಬರಕೂಡದು. ಆದ್ದರಿಂದ ಅವನು ತಿರಸ್ಕರಣೀಯ.
ಮತ್ತೊಬ್ಬನಿದ್ದಾನೆ. ತತ್ವತಃ ನಾವೆಲ್ಲಾ ಒಂದೇ. ‘ಸತ್ಯಂ ಶಿವಂ ಸುಂದರಂ’. ಅವನೀಗ ರುದ್ರನಾಗಿ ಪ್ರಪಂಚವನ್ನೇ ನಾಶ ಮಾಡುವಂತಹ ಒಂದು ಕರ್ತವ್ಯ ವಹಿಸಿಕೊಂಡಿದ್ದಾನೆ. ‘ಶಿವ’ನೆಂಬ ಅರ್ಥದಲ್ಲೂ ಅವನಿಗೆ ಜ್ಞಾನದೇವತೆಯ ಅವಶ್ಯಕತೆಯಿಲ್ಲ. ಪ್ರಾಪಂಚಿಕವಾಗಿ ರುದ್ರನಾಗಿದ್ದ ಅವನಿಗೆ ಯಾಕೆ ವಿದ್ಯಾಪೀಠ? ತಮೋಗುಣದಿಂದ ಎಲ್ಲವನ್ನೂ ನಾಶಮಾಡುವವನು. ಹಾಗಾಗಿ ತಮೋಗುಣ ಅಧಿಷ್ಠಾನನೆನಿಸಿದ ಶಂಕರನಿಗೂ ಆಮಂತ್ರಣವಿಲ್ಲ. ಕಾಮನಿಗೂ ಆಮಂತ್ರಣವಿಲ್ಲ.
ನರಕಕ್ಕೆ ಮೂರು ಹೆಬ್ಬಾಗಿಲು. ಕಾಮ, ಕ್ರೋಧ, ಲೋಭ. ಈ ಕಾಮ ಕ್ರೋಧಗಳ ವ್ಯತಿರಿಕ್ತ ಸ್ವಭಾವಗಳ ಸ್ವರೂಪವೇ ರುದ್ರ ಮತ್ತು ಕಾಮ. ಇವರನ್ನು ಬಿಟ್ಟು ಮಿಕ್ಕವರಿಗೆಲ್ಲಾ ಆಮಂತ್ರಣ ಕೊಟ್ಟಿದ್ದೇನೆ..”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

6 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

21 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

21 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

21 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

21 hours ago