Advertisement
ಯಕ್ಷಗಾನ : ಮಾತು-ಮಸೆತ

ಕ್ರೋಧ ಬಂದಾಗ ಬುದ್ಧಿ ನಷ್ಟ, ಬುದ್ಧಿ ನಷ್ಟವಾದರೆ ಸರ್ವನಾಶ……

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ

 

(ಶಾರದೆಗೆ ವಿದ್ಯಾಧಿದೇವತೆಯ ಸ್ಥಾನವನ್ನು ಕೊಡಲುದ್ಯುಕ್ತನಾದ ಬ್ರಹ್ಮನು ಮನ್ಮಥ ಮತ್ತು ಈಶ್ವರನಿಗೆ ಪಟ್ಟಾಭಿಷೇಕ ಸಮಾರಂಭಕ್ಕೆ ಆಮಂತ್ರಣವಿಲ್ಲ – ಎನ್ನುವ ಸಂದರ್ಭ)

“… ಶಾರದಾ…. ನಿನ್ನ ಪಟ್ಟಾಭಿಷೇಕಕ್ಕೆ ಕಾಮ ಬರಕೂಡದು. ಕಾಮದ ನಂತರ ಕ್ರೋಧ. ಕ್ರೋಧ ಬಂದಾಗ ಬುದ್ಧಿ ನಷ್ಟ. ಬುದ್ಧಿ ನಷ್ಟವಾದರೆ ಸರ್ವನಾಶ. ಈ ಕಾಮಕ್ಕೆ ಗಂಡು ಹೆಣ್ಣನ್ನು ಒಂದುಗೂಡಿಸುವ ಕೆಲಸ. ನೀನು ಕಾಳನ್ನು ನೋಡಿರಬಹುದು. ಅದರಲ್ಲಿ ಹೊಟ್ಟು ಇದ್ದರೆ ಪ್ರಯೋಜನವಿಲ್ಲ. ಈ ಹೊಟ್ಟಿಗೂ ಕಾಳಿಗೂ ಸಂಬಂಧ ಕಲ್ಪಿಸುವ ಯಾವ ಸ್ನಿಗ್ಧ ಪದಾರ್ಥ ಇದೆಯೋ ಅದಕ್ಕೆ ‘ಸ್ನೇಹ’ ಅಂತ ಹೆಸರು. ಇದು ಕಾಮದ ಸೂಕ್ಷ್ಮ ಸ್ವರೂಪ. ಆ ಸ್ನಿಗ್ಧ ಪದಾರ್ಥ ಹುರಿಯುವುದರಿಂದಲೋ, ಸುಡುವುದರಿಂದಲೋ ನಷ್ಟವಾದರೆ ಬಿತ್ತಿದರೆ ಬೆಳೆ ಬರುವುದಿಲ್ಲ ಎಂಬ ನ್ಯಾಯೇಣ ಕಾಮನ ಸಂಪರ್ಕವೂ ಈ ವಿದ್ಯಾಪೀಠಕ್ಕೆ ಬರಕೂಡದು. ಆದ್ದರಿಂದ ಅವನು ತಿರಸ್ಕರಣೀಯ.
ಮತ್ತೊಬ್ಬನಿದ್ದಾನೆ. ತತ್ವತಃ ನಾವೆಲ್ಲಾ ಒಂದೇ. ‘ಸತ್ಯಂ ಶಿವಂ ಸುಂದರಂ’. ಅವನೀಗ ರುದ್ರನಾಗಿ ಪ್ರಪಂಚವನ್ನೇ ನಾಶ ಮಾಡುವಂತಹ ಒಂದು ಕರ್ತವ್ಯ ವಹಿಸಿಕೊಂಡಿದ್ದಾನೆ. ‘ಶಿವ’ನೆಂಬ ಅರ್ಥದಲ್ಲೂ ಅವನಿಗೆ ಜ್ಞಾನದೇವತೆಯ ಅವಶ್ಯಕತೆಯಿಲ್ಲ. ಪ್ರಾಪಂಚಿಕವಾಗಿ ರುದ್ರನಾಗಿದ್ದ ಅವನಿಗೆ ಯಾಕೆ ವಿದ್ಯಾಪೀಠ? ತಮೋಗುಣದಿಂದ ಎಲ್ಲವನ್ನೂ ನಾಶಮಾಡುವವನು. ಹಾಗಾಗಿ ತಮೋಗುಣ ಅಧಿಷ್ಠಾನನೆನಿಸಿದ ಶಂಕರನಿಗೂ ಆಮಂತ್ರಣವಿಲ್ಲ. ಕಾಮನಿಗೂ ಆಮಂತ್ರಣವಿಲ್ಲ.
ನರಕಕ್ಕೆ ಮೂರು ಹೆಬ್ಬಾಗಿಲು. ಕಾಮ, ಕ್ರೋಧ, ಲೋಭ. ಈ ಕಾಮ ಕ್ರೋಧಗಳ ವ್ಯತಿರಿಕ್ತ ಸ್ವಭಾವಗಳ ಸ್ವರೂಪವೇ ರುದ್ರ ಮತ್ತು ಕಾಮ. ಇವರನ್ನು ಬಿಟ್ಟು ಮಿಕ್ಕವರಿಗೆಲ್ಲಾ ಆಮಂತ್ರಣ ಕೊಟ್ಟಿದ್ದೇನೆ..”

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

3 hours ago

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

12 hours ago

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

12 hours ago

ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…

13 hours ago

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

1 day ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

1 day ago