Advertisement
ಧಾರ್ಮಿಕ

ಗಣೇಶ ಹಬ್ಬ | ಬಯಲು ಆಲಯದ ಗಣಪ

Share

ಹಬ್ಬ ಬಂತೆಂದರೆ ಮನೆಮನಗಳಲ್ಲಿ ಸಂಭ್ರಮದ ವಾತಾವರಣ. ದಿನನಿತ್ಯದ ಬದುಕಿನ ಜಂಜಾಟಗಳನ್ನು ಬದಿಗಿಟ್ಟು ಮನೆಮಂದಿ ಎಲ್ಲಾಒಟ್ಟಾಗಿ ಸೇರಿಹಬ್ಬದ ಆಚರಣೆ ಜೊತೆಗೆ ಭೂರಿಭೋಜನ ಮಾಡುವ ಸದಾವಕಾಶ ದೊರೆಯುವುದು ಇಂತಹ ಸಂದರ್ಭಗಳಲ್ಲಿಯೇ. ಅದರಲ್ಲೂ ತಿಂಡಿ ಪ್ರಿಯನಾದ ಗಣೇಶನ ಹಬ್ಬದಲ್ಲಿ ಬಗೆಬಗೆಯ ತಿಂಡಿಗಳಿಗೆ ತುಸು ಹೆಚ್ಚಿನ ಪ್ರಾಧಾನ್ಯತೆಎಂದರೆತಪ್ಪಲ್ಲ.

Advertisement
Advertisement
Advertisement
Advertisement
Advertisement

ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸುವ ಹಬ್ಬವಾದ ಗಣೇಶಚೌತಿ ಅಂದಾಕ್ಷಣ  ಮೊದಲು ನೆನಪಾಗುವುದು  “ಶ್ರೀ ಕ್ಷೇತ್ರ ಸೌತಡ್ಕ”.
ನಾವು ನೋಡಿದಂತೆ ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲೂ ದೇವರನ್ನುಗರ್ಭಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ.ಆದರೆ ಬೆಳ್ತಂಗಡಿ ತಾಲೂಕಿನ ಊರುಕೊಕ್ಕಡಕ್ಕೆ ಸನಿಹವಾದ “ಸೌತಡ್ಕ”ದಲ್ಲಿ ನೆಲೆಸಿರುವ ಗಣಪ ಮಾತ್ರ ಸಕಲ ಜೀವರಾಶಿಗಳಿಗೂ ಮುಕ್ತವಾಗಿ ದರ್ಶನ ನೀಡುತ್ತಾಎಲ್ಲರಿಗಿಂತ ಭಿನ್ನನೆನಿಸಿಕೊಂಡಿದ್ದಾನೆ.

Advertisement

ಇತಿಹಾಸದ ಪ್ರಕಾರ ಸುಮಾರು 800 ವರ್ಷಗಳ ಹಿಂದೆರಾಜರ ಆಳ್ವಿಕೆಯಲ್ಲಿ ರಾಜವಂಶಸ್ಥರಿಗೆ ಸೇರಿದ ದೇವಾಲಯ ಈ ಊರಿನಲ್ಲಿಇತ್ತಂತೆ. ಕಾಲಾನಂತರ ಈ ದೇವಸ್ಥಾನವು ಸಂಗ್ರಾಮವೊಂದರಲ್ಲಿ ನಾಶವಾಯಿತು. ಹಲವು ವರ್ಷಗಳ ನಂತರ ಗೋವನ್ನು ಮೇಯಿಸುತ್ತಿದ್ದ ಬಾಲಕರಿಗೆ ಸುಂದರವಾದ ಗಣೇಶನ ವಿಗ್ರಹವೊಂದು ದೊರೆಯಿತು. ಅವರು ಪ್ರಸ್ತುತ ಈಗ ಇರುವ ಮರದ ಬುಡಕ್ಕೆ ವಿಗ್ರಹವನ್ನುತಂದುಇಟ್ಟು, ತಮ್ಮಜಾಗದಲ್ಲಿ ಬೆಳೆದಿದ್ದ ಸೌತೆಕಾಯಿಗಳನ್ನು ತಂದು ಪ್ರತಿದಿನ ಪೂಜಿಸುತ್ತಿದ್ದರು.ಅಂದಿನಿಂದ ಈ ಪ್ರದೇಶ “ಸೌತಡ್ಕ” ಎಂದು ಪ್ರಸಿದ್ದಿಯಾಯಿತು ಎನ್ನುತ್ತದೆ ಸ್ಥಳ ಪುರಾಣ.

ತದ ನಂತರ ಇಲ್ಲಿಯ ಬ್ರಾಹ್ಮಣರೊಬ್ಬರು ಗಣೇಶನಿಗೆ ಗೋಪುರ ಕಟ್ಟಲು ನಿರ್ಧರಿಸಿದಾಗ ದೇವರು ದನ ಮೇಯಿಸುವ ಬಾಲಕನ ರೂಪದಲ್ಲಿ ಕನಸಿನಲ್ಲಿ ಬಂದು ತನಗೆ ಗೋಪುರ ಕಟ್ಟಿಸುವುದಾದರೆ ಕಾಶಿಯಲ್ಲಿರುವ ತನ್ನತಂದೆ ವಿಶ್ವನಾಥನಿಗೆ ಕಾಣಿಸುವಷ್ಟುಎತ್ತರದ ಗೋಪುರವನ್ನು ದಿನ ಬೆಳಗಾಗುವುದರೊಳಗಾಗಿ ಕಟ್ಟಬೇಕು ಎಂದು ಹೇಳದನಂತೆ. ಅಂದಿನಿಂದ ಇಲ್ಲಿಗೋಪುರ ಕಟ್ಟುವ ನಿರ್ಧಾರವನ್ನು ಕೈ ಬಿಡಲಾಯಿತು.ಹೀಗಾಗಿ ಇಲ್ಲಿಗಣೇಶ ವರ್ಷದ 365 ದಿನವೂ ಭಕ್ತರಿಗೆ ಮುಕ್ತವಾಗಿ ದರ್ಶನ ನೀಡುತ್ತಾನೆ.

Advertisement

ಇಂದು ನಾವು ಅಲ್ಲಲ್ಲಿ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜಿಸುವುದನ್ನು ಕಾಣುತ್ತೇವೆ. ಆದರೆ ಕೊಕ್ಕಡದ ಪರಿಸರದಲ್ಲಿ ಗಣೇಶ ಎಂದರೆ ಅದು “ಸೌತಡ್ಕ ಮಹಾಗಣಪತಿ”.ಈ ಪರಿಸರದ ಜನ ತಮ್ಮ ಮನೆಗಳಲ್ಲಿ ಅಪ್ಪ, ಪಂಕಜ್ಜಾಯ, ಮೋದಕ ಇತ್ಯಾದಿ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿ ಸೌತಡ್ಕದ ಗಣೇಶನಿಗೆ ಅರ್ಪಿಸಿದ ನಂತರ ಪ್ರಸಾದವಾಗಿ ಸೇವಿಸುತ್ತಾರೆ. ಪ್ರಸಿದ್ಧಿ ಪಡೆದಿರುವ ಇಲ್ಲಿಯ ಗಣೇಶನಿಗೆ ಚೌತಿಯ ದಿನದಂದು 108 ತೆಂಗಿನ ಕಾಯಿಗಳ ಗಣಪತಿಹೋಮ, ಪಂಚಾಮೃತದೊಂದಿಗೆ 108 ಸೀಯಾಳ ಅಭೀಷೇಕ ಅಪ್ಪ, ಪಂಜಕಜ್ಜಾಯ, ಪಾಯಸ, ನೈವೇಧ್ಯ, ಹಣ್ಣು ಹಂಪಲು ತಾಂಬೂಲ ಸಮರ್ಪಿಸಲಾಗುತ್ತದೆ.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ

ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…

9 hours ago

ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |

ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್‌ ಫಾರ್ಕಾಸ್ಟ್ ಅಂದರೆ ಯಾವ…

15 hours ago

ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ  ವರದಿಯ ಅನ್ವಯ, ಉತ್ತರ ಕನ್ನಡ…

16 hours ago

ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…

18 hours ago

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

2 days ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

2 days ago