Advertisement
ಅನುಕ್ರಮ

ಗರ್ಭಪಾತ ತಡೆಗೆ ಕಠಿಣ ಕಾನೂನು ತಂದ ಯು ಎಸ್

Share

ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಲಬಾಮ ಸೆನೆಟ್ ಗರ್ಭಪಾತ ತಡೆಗೆ ಸಂಬಂಧಿಸಿದ ಕಠಿನ ಕಾನೂನನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಅತ್ಯಾಚಾರದ ಸಂದರ್ಭದಲ್ಲೂ ಕೂಡ, ಅತ್ಯಾಚಾರಕ್ಕೊಳಗಾದ ಮಹಿಳೆ ಗರ್ಭಿಣಿಯಾದರೆ, ಅಂತಹ ಸಂದರ್ಭದಲ್ಲಿ ಗರ್ಭಪಾತ ಮಾಡಿದರು ಕೂಡ, ಮಾಡಿದ ವೈದ್ಯರಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ನೀಡಿದೆ. ಇದರ ಲಿಖಿತ ರೂಪವನ್ನು ರಿಪಬ್ಲಿಕನ್ ನೇತೃತ್ವದ ಸೆನೇಟ್ ಅಲ್ಲಿನ ಗವರ್ನರ್ ಕೇ ಇವೇ ಇವರ ಬಳಿ ಸಹಿಗಾಗಿ ಕಳುಹಿಸಿದೆ. ಒಂದು ವೇಳೆ ಇದು ಅಂಗೀಕರಿಸಲ್ಪಟ್ಟಲ್ಲಿ , ಕಾನೂನಾತ್ಮಕ ಸಮರವು ಅಲ್ಲಿನ ಸುಪ್ರೀಂ ಕೋರ್ಟ್ ತನಕವೂ ತಲುಪಬಹುದು.

Advertisement
Advertisement

ಅದರ ಪ್ರಕಾರ ಗರ್ಭಪಾತ ಮಾಡುವ ವೈದ್ಯನಿಗೆ ಹತ್ತರಿಂದ 99 ವರ್ಷಗಳ ತನಕ ಜೈಲುಶಿಕ್ಷೆ ಅನುಭವಿಸಬೇಕಾ ಗಬಹುದು. ಗರ್ಭಿಣಿ ತಾಯಿಯ ಜೀವಕ್ಕೆ ಅಪಾಯ ಇದ್ದಲ್ಲಿ ಹಾಗೂ ಗರ್ಭದಲ್ಲಿನ ಶಿಶುವಿಗೆ ಅಪಾಯ ಇದ್ದಲ್ಲಿ ಮಾತ್ರ ಗರ್ಭಪಾತವನ್ನು ಆ ಕಾನೂನು ಮಾನ್ಯ ಮಾಡುತ್ತದೆ.

ಆದರೆ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುವ ,ಅಮೆರಿಕಾದ ಎ.ಸಿ .ಎಲ್. ಯು. ಎಂಬ ಸಂಸ್ಥೆಯೊಂದು ಈ ಕಾಯ್ದೆಯನ್ನು ಜಾರಿಗೊಳಿಸುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧವಾಗಿದೆ. ಅವರ ಪ್ರಕಾರ ಈ ಕಾಯ್ದೆಯು” ಅತ್ಯಾಚಾರದಿಂದ ಸಂತ್ರಸ್ತರಾದ ಮಹಿಳೆಯರನ್ನು ಶಿಕ್ಷಿಸುವಂತಿದೆ. ಮಹಿಳೆಯರಿಗೆ ಅವರ ದೇಹದ ಮೇಲಿರುವ ಹಕ್ಕನ್ನು ಮತ್ತು ನಿಯಂತ್ರಣವನ್ನು ಕಸಿದು ಕೊಳ್ಳುವಂತೆ ಇದೆ. ಅತ್ಯಾಚಾರದ ಆಕಸ್ಮಿಕಕ್ಕೆ ಒಳಗಾದ ಹೆಣ್ಣನ್ನು, ಮನಸ್ಸಿಲ್ಲದಿದ್ದರೂ ಬಲವಂತವಾಗಿ ಹೆರುವಂತೆ ಮಾಡುತ್ತದೆ”. ಅಲ್ಲಿನ ರಾಷ್ಟ್ರೀಯ ಮಹಿಳಾ ಸಂಘಟನೆಯು ಈ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ವರ್ಣಿಸಿದೆ. “ಅಷ್ಟೇ ಅಲ್ಲ, ಇದು ಮಹಿಳೆಯರನ್ನು ದೈಹಿಕವಾಗಿ, ಆರ್ಥಿಕವಾಗಿ ಹಾಗೂ ಜೈವಿಕವಾಗಿ ನಿಯಂತ್ರಿಸಿ, ಆಡಳಿತಗಾರರು ಶೋಷಣೆ ಮಾಡುತ್ತಿದ್ದ, ಕತ್ತಲ ದಿನಗಳ ಸ್ಥಿತಿಗೆ ತಳ್ಳುತ್ತದೆ ” ಎಂದು ಅಭಿಪ್ರಾಯ ಪಟ್ಟಿದೆ.

ಆದರೆ ಅಲಬಾಮಾ ಗವರ್ನರ್ ಆಗಿರುವ ವಿಲ್ ಐನ್ಸ್ವರ್ತ್ ಈ ಕಾಯ್ದೆಯನ್ನು ಸ್ವಾಗತಿಸಿ” ಹುಟ್ಟಲಿರುವ ಗರ್ಭಸ್ಥ ಶಿಶು ವಿನ ಹಕ್ಕುಗಳನ್ನು ರಕ್ಷಣೆ ಮಾಡಲಿರುವ ಪ್ರಬಲ ಹೆಜ್ಜೆ” ಎಂದಿದ್ದಾರೆ.

ಭಾರತದಲ್ಲೂ ಕೂಡ ಭ್ರೂಣಹತ್ಯೆಯನ್ನು ತಡೆಗಟ್ಟಲು ಇತ್ತೀಚೆಗೆ ಕಾನೂನನ್ನು ಬಲಗೊಳಿಸಿದ ಸಂದರ್ಭಗಳನ್ನು ನಾವು ನೆನಪಿಸಿಕೊಳ್ಳಬಹುದು.
ಗರ್ಭಿಣಿಯರ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ದಾಖಲೆಗಳನ್ನು ಭಾರತದಲ್ಲಿ ಕಟ್ಟುನಿಟ್ಟಾಗಿಸಿದೆ. ಆದರೆ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ಆ ಮಹಿಳೆಗೆ ಗರ್ಭಪಾತ ಮಾಡುವ ಅವಕಾಶ ಭಾರತದ ಕಾನೂನಿನಲ್ಲಿ ಇದೆ.

ತಪಾಸಣಾ ಕೇಂದ್ರಗಳು ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ದಾಖಲೆಗಳನ್ನು ಸರಿಯಾಗಿ ಇಡದಿರುವುದು ಹೆಣ್ಣು ಭ್ರೂಣ ಹತ್ಯೆಯ ಮೂಲ ಕಾರಣ., ಮತ್ತು ಕಾನೂನಿನ ಅಡಿಯಲ್ಲಿ ಅದೊಂದು ಶಿಕ್ಷಾರ್ಹ ಅಪರಾಧ ಮತ್ತು ಅದನ್ನು ಬರವಣಿಗೆಯಲ್ಲಿನ ಪ್ರಮಾದ ಎಂದು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಲಿಂಗಗಳ ಅನುಪಾತದಲ್ಲಿನ ವ್ಯತ್ಯಯದಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಕಳ್ಳಸಾಗಾಟ ಹಾಗೂ ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಗರ್ಭಪಾತ ತಡೆ ಕಾನೂನನ್ನು, ಹೆಣ್ಣು ಮಗುವನ್ನು ರಕ್ಷಿಸುವ ಕಾರ್ಯದ ಭಾಗವಾಗಿ, ಸಶಕ್ತಗೊಳಿಸ ಬೇಕಾದ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ” ಇಂದು ಭಾರತದ ಸುಪ್ರೀಂ ಕೋರ್ಟ್ ಹೇಳಿದೆ.

ಆದರೆ ಭಾರತದ” ಫೆಡರೇಶನ್ ಆಫ್ ಓಬ್ಸ್ಟೆಟ್ರಿಕ್ಸ್ ಅಂಡ್ ಗೈನೆಕಾಲಜಿಕಲ್ ಸೊಸೈಟಿಯು , ಗರ್ಭಪಾತ ತಡೆ ಕಾನೂನನ್ನು ಸಡಿಲಗೊಳಿಸುವಂತೆ ಮನವಿ ಮಾಡಿದೆ. ಭ್ರೂಣ ಲಿಂಗ ಪತ್ತೆ ಕಾನೂನಿನ ಪ್ರಕಾರ” ಯಾವುದೇ ದಾಖಲೆ ಮಾಡುವಾಗಿನ ಬರವಣಿಗೆಯ ವ್ಯತ್ಯಾಸಗಳು ಅಥವಾ ಪ್ರಮಾದಗಳು, ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದು, ಆ ಆಸ್ಪತ್ರೆ ಅಥವಾ ವೈದ್ಯರ ತನಿಖೆ, ಬಂಧನ, ಜೈಲು, ದಂಡ ಹಾಗೂ ವೈದ್ಯಕೀಯ ವೃತ್ತಿ ಅನುಮತಿಯನ್ನು ರದ್ದುಗೊಳಿಸುವ ಅವಕಾಶವನ್ನು ನೀಡಿದೆ. ಆದರೆ ವೈದ್ಯರ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.” ಭ್ರೂಣಹತ್ಯೆಗೆ ಅನುಮತಿ ಕೊಡುವುದಕ್ಕಿಂತ ದೊಡ್ಡದಾದ ಪಾಪ, ಅನೈತಿಕತೆ ಹಾಗೂ ಸಮಾಜ ವಿರೋಧಿ ಕೃತ್ಯ ಇನ್ನೊಂದಿಲ್ಲ. ದಾಖಲೆಗಳನ್ನು ಸರಿಯಾಗಿ ಇಡದಿರುವುದೇ ಅಪರಾಧ” ಎಂದು ಅರುಣ್ ಮಿಶ್ರಾ ಹಾಗೂ ವಿನೀತ್ ಶರಣ್ ಎಂಬ ನ್ಯಾಯಾಧೀಶರುಗಳನ್ನು ಒಳಗೊಂಡ ನ್ಯಾಯಪೀಠವು ಹೇಳಿದೆ.

ಆದರೆ ಪ್ರಸೂತಿ ತಜ್ಞರ ಫೆಡರೇಶನ್ ಇದನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳಾದ ಸಾಲಿ ಸೊರಬ್ಜಿ ಹಾಗೂ ಶ್ಯಾಂ ದಿವಾನ್ ಇವರು , “ಬರವಣಿಗೆಯಲ್ಲಿ ಉಂಟಾಗುವ ಸಣ್ಣ ಸಣ್ಣ ಅಕ್ಷರ ವ್ಯತ್ಯಾಸಗಳು, ದಿನಾಂಕ ದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ವೈದ್ಯರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾದ ಪ್ರಸಂಗಗಳು ಈ ಕಾಯಿದೆಯಿಂದ ಉಂಟಾಗುತ್ತವೆ” ಎಂದಾಗ ನ್ಯಾಯಪೀಠವು” ಜವಾಬ್ದಾರಿಯುತ ನಾದ ವೈದ್ಯನು ಈ ಕಾನೂನಿನ ಅಂಶಗಳನ್ನು ಅರಿಯಬೇಕಾದ ಮತ್ತು ತಪಾಸಣೆ ನಡೆಸುವಾಗ ಅದನ್ನು ಅನುಷ್ಠಾನಗೊಳಿಸಬೇಕಾದದ್ದು ಕರ್ತವ್ಯವಾಗಿದೆ. ಈ ಕಾನೂನನ್ನು ತೆಳ್ಳಗಾಗಿಸುವ ಯಾವುದೇ ಬದಲಾವಣೆಗಳು, ಹೆಣ್ಣುಶಿಶುವಿನ ಜೀವಿಸುವ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನದ ಆರ್ಟಿಕಲ್ 21 ರ ಉದ್ದೇಶವನ್ನು ವಿಫಲಗೊಳಿಸುತ್ತದೆ. ಕಾನೂನಿನ ಸ್ವರೂಪ ಅರ್ಥಮಾಡಿಕೊಳ್ಳುವ ಮತ್ತು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡುವ, ತಪಾಸಣೆಗಳ ಉದ್ದೇಶ ಮತ್ತು ಪರಿಣಾಮವನ್ನು ದಾಖಲಿಸುವಂತದ್ದು ತಪಾಸಣಾ ಪೂರ್ವ ಅಗತ್ಯ ಆದ್ಯತೆ. ಇದನ್ನು ಅನುಷ್ಠಾನಗೊಳಿಸಲು ತಯಾರಿ ಇಲ್ಲದವನು ಶ್ರೇಷ್ಠವಾದ ವೈದ್ಯಕೀಯ ವೃತ್ತಿ ನಡೆಸಲು ಅನರ್ಹ” ಎಂದು ನ್ಯಾಯಪೀಠವು ಹೇಳಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…

2 hours ago

ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ

ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…

3 hours ago

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

1 day ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 days ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

2 days ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

2 days ago