ಪುತ್ತೂರು: ಸರಸ್ವತಿ ಕಾನೂನು ಕಾಲೇಜು ಚಿತ್ರದುರ್ಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆ ಹಾಗೂ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಈ ತಂಡದಲ್ಲಿ ಸಂಧ್ಯಾ ಕೆ.ಎಸ್. ತೃತೀಯ ಎಲ್.ಎಲ್.ಬಿ., ಲವೀನ ತೃತೀಯ ಬಿ.ಎ.ಎಲ್.ಎಲ್.ಬಿ., ಪೂರ್ಣಿಮಾ ತೃತೀಯ ಬಿ.ಎ.ಎಲ್.ಎಲ್.ಬಿ., ಹರ್ಷಿತಾ ತೃತೀಯ ಎಲ್.ಎಲ್.ಬಿ., ಜ್ಯೋತಿ ದ್ವಿತೀಯ ಎಲ್.ಎಲ್.ಬಿ. ಹಾಗೂ ಅರ್ಪಿತ ಪ್ರಶಾಂತ್ ಪ್ರಥಮ ಬಿ.ಎ.ಎಲ್.ಎಲ್.ಬಿ. ಇವರು ಭಾಗವಹಿಸಿದ್ದರು.
ಸಂಧ್ಯಾ ಕೆ.ಎಸ್. ತೃತೀಯ ಎಲ್.ಎಲ್.ಬಿ. ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಶ್ವವಿದ್ಯಾನಿಲಯದ ತಂಡಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ ಆಂದ್ರಪ್ರದೇಶ ಅಂತರ್ ವಿಶ್ವ ವಿದ್ಯಾನಿಲಯದ ಗುಡ್ಡಗಾಡು ಓಟದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ನವೀನ್ ಕುಮಾರ್ ಎಮ್.ಕೆ. ದೈಹಿಕ ಶಿಕ್ಷಕರು ತರಬೇತಿಯನ್ನು ನೀಡಿರುತ್ತಾರೆ.
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…