ಗುತ್ತಿಗಾರು: ಗುತ್ತಿಗಾರಿನ ಪೇಟೆಯಲ್ಲಿ ಕೆಸರಿನ ಸಿಂಚನ ಉಚಿತವಾಯ್ತು ಇಂದು…!
ಗುತ್ತಿಗಾರು ಪೇಟೆಯ ಮುಖ್ಯ ರಸ್ತೆಯುದ್ದಕ್ಕೂ ಕೆಸರೇ ತುಂಬಿ ಪೇಟೆಗೆ ಬಂದವರೆಲ್ಲಾ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆಲ್ಲ ಕಾರಣವಾದದ್ದು ಖಾಸಗಿ ವ್ಯಕ್ತಿಯೊಬ್ಬರು ಮಣ್ಣು ಸಾಗಾಟ ಮಾಡಿದ್ದು.
ಗುತ್ತಿಗಾರು ಪ್ರಾ.ಕೃ.ಸಂಘದ ಬಳಿಯಿರುವ ಗುಡ್ಡದಿಂದ ವ್ಯಕ್ತಿಯೋರ್ವರು ಟಿಪ್ಪರ್ ಮೂಲಕ ಮಣ್ಣು ಸಾಗಾಟ ಮಾಡಿ ರಸ್ತೆಯುದ್ದಕ್ಕೂ ಮಣ್ಣು ಚೆಲ್ಲಿತ್ತು. ರಾತ್ರಿ ಈ ಕೆಲಸ ನಡೆಸಿದ್ದು ಬೆಳಿಗ್ಗೆ ಸುರಿದು ತುಂತುರು ಮಳೆಗೆ ಮಣ್ಣು ಕೆಸರಾಗಿ ಪರಿವರ್ತನೆಗೊಂಡು, ರಸ್ತೆಯುದ್ದಕ್ಕೂ ಪ್ರಯಾಣಿಕರಿಗೆ, ದ್ವಿಚಕ್ರ ಸವಾರರಿಗೆ, ಸಾರ್ವಜನಿಕರಿಗೆ ಅಭಿಷೇಕ ಆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel