ಗುತ್ತಿಗಾರು: ಮಳೆಗಾಲದ ನೀರು ಸರಾಗವಾಗಿ ಹರಿಯಲು ಹಾಗೂ ಸ್ವಚ್ಛತೆಗಾಗಿ ಗುತ್ತಿಗಾರು ಪೇಟೆಯಲ್ಲಿ ಚರಂಡಿ ಕ್ಲೀನಿಂಗ್ ನಡೆಯುತ್ತಿದೆ. ಕಸ ಹಾಗೂ ತ್ಯಾಜ್ಯಗಳಿಂದ ತುಂಬಿದ್ದ ಗುತ್ತಿಗಾರು ಪೇಟೆಯ ಚರಂಡಿಯಿಂದ ನೀರು ಸರಾಗವಾಗಿ ಹರಿಯಲು ಕಷ್ಟವಾಗಿತ್ತು. ಜೊತೆಗೆ ಗುತ್ತಿಗಾರು ಪೇಟೆಯ ವಿವಿದೆಡೆ ನೀರು ಹಾಗೂ ತ್ಯಾಜ್ಯ ನಿಂತು ಸಮಸ್ಯೆಯಾಗಿತ್ತು.ಇದೀಗ ಸ್ವಚ್ಛತಾ ಕಾರ್ಯ ನಡೆಯುತ್ತಿರುವುದು ಸಾರ್ವಜನಿಕರಿಗೆ ಸಮಾಧಾನ ತಂದಿದೆ.
ಗುತ್ತಿಗಾರು ಕೆಳಗಿನ ಪೇಟೆ , ಬಳ್ಳಕ್ಕದ ಕಡೆಗೆ ತಿರುಗುವ ಪ್ರದೇಶದಲ್ಲೂ ಕಸ ನಿಂತು ಸಮಸ್ಯೆಯಾಗುತ್ತಿತ್ತು. ಇದೀಗ ಚರಂಡಿ ಕ್ಲೀನಿಂಗ್ ನಡೆಯುತ್ತಿದೆ. ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಹಾಗೂ ಗ್ರಾಪಂ ಸದಸ್ಯರು ಕಾಮಗಾರಿ ವೀಕ್ಷಣೆ ನಡೆಸುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel